ವಚನ ವಿಚಾರ – ನಾನು ಒಲಿಸುವ ಪರಿ ಹೇಗೆ

ವಚನ ವಿಚಾರ – ನಾನು ಒಲಿಸುವ ಪರಿ ಹೇಗೆ

ಅಯ್ಯಾ
ನೀನೆನ್ನ ಮೊರೆಯನಾಲಿಸಿದಡಾಲಿಸು
ಆಲಿಸದಿರ್ದಡೆ ಮಾಣು
ಅಯ್ಯಾ
ನೀನೆನ್ನ ದುಃಖವ ನೋಡಿದಡೆ ನೋಡು
ನೋಡದಿರ್ದಡೆ ಮಾಣು
ನಿನಗಿದು ವಿಧಿಯೆ
ನೀನೊಲ್ಲದೊಡೆ ಆನೊಲಿಸುವ ಪರಿಯೆಂತಯ್ಯಾ

[ಆಲಿಸದಿರ್ದಡೆ ಕೇಳದಿದ್ದರೆ ಮಾಣು-ಬಿಡು,]

ಅಕ್ಕಮಹಾದೇವಿಯ ವಚನ. ಈ ವಚನದಲ್ಲಿ ‘ಎನಗಿದು ವಿಧಿಯೇ’ ಎಂದೇನಾದರೂ ಇದ್ದಿದ್ದರೆ ಅರ್ಥದ ತೊಡಕು ಏನೂ ಉಂಟಾಗುತ್ತಿರಲಿಲ್ಲ. ಅಥವಾ ನಾನು ನೋಡಿದ ಪುಸ್ತಕದಲ್ಲಿ ಅಚ್ಚಿನ ದೋಷವಿದೆಯೋ ಗೊತ್ತಿಲ್ಲ. ಆದರೆ ಹೀಗಿರುವುದರಿಂದ ಮಾತ್ರ ಈ ವಚನ ಹಲವು ಪ್ರಶ್ನೆಗಳನ್ನು ಎತ್ತುವಂತೆ ತೋರುತ್ತದೆ. ನನ್ನ ಮೊರೆಯನ್ನು ಕೇಳಬೇಕೆನಿಸಿದರೆ ಕೇಳು, ಇಲ್ಲದಿದ್ದರೆ ಬಿಡು; ನೀನು ನನ್ನನ್ನು ನೋಡಬೇಕೆನಿಸಿದರೆ ನೋಡು, ಇಲ್ಲದಿದ್ದರೆ ಬಿಡು. ಹೀಗಿರುವುದು ನಿನ್ನ ವಿಧಿಯೋ? ನೀನು ನನ್ನ ಒಲಿಯದಿದ್ದರೆ ನಾನು ನಿನ್ನನ್ನು ಒಲಿಸುವ ಪರಿ ಹೇಗೆ ಎಂದು ಅಕ್ಕ ಕೇಳುತ್ತಾಳೆ.

ದೇವರು ನಿರ್ಗುಣ ಅನ್ನುತ್ತಾರಲ್ಲವೆ, ಹಾಗಿರಬೇಕಾದದ್ದು ಅವನ ಹಣೆಯಬರಹ. ದೇವರು ಯಾರನ್ನೂ ದ್ವೇಷಿಸಲೂ ಆರ, ಪ್ರೀತಿಸಲೂ ಆರ. ಹೀಗಿರುವುದು ಅವನ ವಿಧಿಯೇ ಆದರೆ ತಾನು ದೇವರನ್ನು ಎಷ್ಟು ಪ್ರೀತಿಸಿದರೆ ಏನು ಬಂದ ಹಾಗಾಯಿತು? ಅವನಲ್ಲಿ ನನ್ನ ಬಗ್ಗೆ ಪ್ರೀತಿ ಹುಟ್ಟದಿದ್ದರೆ ಏನು ತಾನೇ ಮಾಡಬಲ್ಲೆ ಎಂಬ ದಿಕ್ಕುಗಾಣದ ಕಳವಳ ಈ ವಚನದಲ್ಲಿರುವಂತಿದೆ.

ಇದೇ ಸ್ವರೂಪದ ಇನ್ನೊಂದು ದೀರ್ಘವಾದ ವಚನವೂ ಇದೆ. ಅದರಲ್ಲಿ ನೀನು ಏನು ಮಾಡಿದರೂ ನಾನು ಮಾತ್ರ ನಿನ್ನನ್ನು ಪ್ರೀತಿಸದೆ ಇರಲಾರೆ ಅನ್ನುವ ನಿಲುವು ಕಾಣುತ್ತದೆ. ಮನೋಭಾವಗಳ ಸೂಕ್ಷ್ಮವನ್ನು ಅಕ್ಕನ ಹಾಗೆ ಮಾತಿನಲ್ಲಿ ಹಿಡಿದಿಟ್ಟವರು ಕಡಮೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಲೋಕ-ಯಮಲೋಕ
Next post ದುಡಿತ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys