Home / ಲೇಖನ / ಇತರೆ / ವಚನ ವಿಚಾರ – ನಾನು ಒಲಿಸುವ ಪರಿ ಹೇಗೆ

ವಚನ ವಿಚಾರ – ನಾನು ಒಲಿಸುವ ಪರಿ ಹೇಗೆ

ಅಯ್ಯಾ
ನೀನೆನ್ನ ಮೊರೆಯನಾಲಿಸಿದಡಾಲಿಸು
ಆಲಿಸದಿರ್ದಡೆ ಮಾಣು
ಅಯ್ಯಾ
ನೀನೆನ್ನ ದುಃಖವ ನೋಡಿದಡೆ ನೋಡು
ನೋಡದಿರ್ದಡೆ ಮಾಣು
ನಿನಗಿದು ವಿಧಿಯೆ
ನೀನೊಲ್ಲದೊಡೆ ಆನೊಲಿಸುವ ಪರಿಯೆಂತಯ್ಯಾ

[ಆಲಿಸದಿರ್ದಡೆ ಕೇಳದಿದ್ದರೆ ಮಾಣು-ಬಿಡು,]

ಅಕ್ಕಮಹಾದೇವಿಯ ವಚನ. ಈ ವಚನದಲ್ಲಿ ‘ಎನಗಿದು ವಿಧಿಯೇ’ ಎಂದೇನಾದರೂ ಇದ್ದಿದ್ದರೆ ಅರ್ಥದ ತೊಡಕು ಏನೂ ಉಂಟಾಗುತ್ತಿರಲಿಲ್ಲ. ಅಥವಾ ನಾನು ನೋಡಿದ ಪುಸ್ತಕದಲ್ಲಿ ಅಚ್ಚಿನ ದೋಷವಿದೆಯೋ ಗೊತ್ತಿಲ್ಲ. ಆದರೆ ಹೀಗಿರುವುದರಿಂದ ಮಾತ್ರ ಈ ವಚನ ಹಲವು ಪ್ರಶ್ನೆಗಳನ್ನು ಎತ್ತುವಂತೆ ತೋರುತ್ತದೆ. ನನ್ನ ಮೊರೆಯನ್ನು ಕೇಳಬೇಕೆನಿಸಿದರೆ ಕೇಳು, ಇಲ್ಲದಿದ್ದರೆ ಬಿಡು; ನೀನು ನನ್ನನ್ನು ನೋಡಬೇಕೆನಿಸಿದರೆ ನೋಡು, ಇಲ್ಲದಿದ್ದರೆ ಬಿಡು. ಹೀಗಿರುವುದು ನಿನ್ನ ವಿಧಿಯೋ? ನೀನು ನನ್ನ ಒಲಿಯದಿದ್ದರೆ ನಾನು ನಿನ್ನನ್ನು ಒಲಿಸುವ ಪರಿ ಹೇಗೆ ಎಂದು ಅಕ್ಕ ಕೇಳುತ್ತಾಳೆ.

ದೇವರು ನಿರ್ಗುಣ ಅನ್ನುತ್ತಾರಲ್ಲವೆ, ಹಾಗಿರಬೇಕಾದದ್ದು ಅವನ ಹಣೆಯಬರಹ. ದೇವರು ಯಾರನ್ನೂ ದ್ವೇಷಿಸಲೂ ಆರ, ಪ್ರೀತಿಸಲೂ ಆರ. ಹೀಗಿರುವುದು ಅವನ ವಿಧಿಯೇ ಆದರೆ ತಾನು ದೇವರನ್ನು ಎಷ್ಟು ಪ್ರೀತಿಸಿದರೆ ಏನು ಬಂದ ಹಾಗಾಯಿತು? ಅವನಲ್ಲಿ ನನ್ನ ಬಗ್ಗೆ ಪ್ರೀತಿ ಹುಟ್ಟದಿದ್ದರೆ ಏನು ತಾನೇ ಮಾಡಬಲ್ಲೆ ಎಂಬ ದಿಕ್ಕುಗಾಣದ ಕಳವಳ ಈ ವಚನದಲ್ಲಿರುವಂತಿದೆ.

ಇದೇ ಸ್ವರೂಪದ ಇನ್ನೊಂದು ದೀರ್ಘವಾದ ವಚನವೂ ಇದೆ. ಅದರಲ್ಲಿ ನೀನು ಏನು ಮಾಡಿದರೂ ನಾನು ಮಾತ್ರ ನಿನ್ನನ್ನು ಪ್ರೀತಿಸದೆ ಇರಲಾರೆ ಅನ್ನುವ ನಿಲುವು ಕಾಣುತ್ತದೆ. ಮನೋಭಾವಗಳ ಸೂಕ್ಷ್ಮವನ್ನು ಅಕ್ಕನ ಹಾಗೆ ಮಾತಿನಲ್ಲಿ ಹಿಡಿದಿಟ್ಟವರು ಕಡಮೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...