ಭೂಲೋಕ-ಯಮಲೋಕ

ಇದುವೇ ಪಾಪಿಯ ಯಮಲೋಕ !
ಭಾವಿಕರೆಂಬರು ಭೂಲೋಕ !

ದೈತ್ಯರೆಂಬವರ ಕರೆಕಳಿಸಿ
ಹೊಟ್ಟೆಗೆಂಬವರ ಹಿಡಿದೆಳಿಸಿ
ಮುಟ್ಟದೆ ಮೈದೊಗಲನು ಸುಲಿಸಿ
ಕಟ್ಟಿಗೆಯಿಲ್ಲದೆ ಕರುಳನು ಸುಡಿಸಿ

ಇದುವೇ ಪಾಪಿಯ ಯಮಲೋಕ !
ಭಾವಿಕರೆಂಬರು ಭೂಲೋಕ !

ಒಕ್ಕಲಮಕ್ಕಳ ಹಿಡಿದೆಳೆದು
ಸಾಲದಪಾಶದಿ ಬಿಗಿಬಿಗಿದು
ಹೊಟ್ಟೆಯಹೊದಿಕೆಯ ಹರಿದೊಗೆದು
ಬಿಸಿನೆತ್ತರವನೆ ಸುರಿಸುರಿದು

ಇದುವೇ ಪಾಪಿಯ ಯಮಲೋಕ !
ಭಾವಿಕರೆಂಬರು ಭೂಲೋಕ!

ಹೆಣ್ಣಿನಜಾತಿಯ ಹೆಡಮುರಿಕಟ್ಟಿ
ಧರ್‍ಮಸ್ಥಂಭಕೆ ಕೈ ಕಟ್ಟಿ
ಕಂಗುಡ್ಡಿಗಳಂ ಹೊರಗಟ್ಟಿ
ನರಕದ ಕೂಪದ ನೆಲೆಗಟ್ಟಿ

ಇದುವೇ ಪಾಪಿಯ ಯಮಲೋಕ !
ಭಾವಿಕರೆಂಬರು ಭೂಲೋಕ !

ಅಂತ್ಯಜನೆಂಬನ ಅಗ್ನಿಗೆ ಕೊಟ್ಟು
ಕೊಲ್ಲದೆ ಗೋಳಿನ ಗಾಣದೊಳಿಟ್ಟು
ಅನ್ನವನಿಕ್ಕದೆ ಸೆರೆಯೊಳಗಿಟ್ಟು
ಹದ್ದು ನಾಯಿಗಾ ಹೆಣವನೆ ಬಿಟ್ಟು

ಇದುವೇ ಪಾಪಿಯ ಯಮಲೋಕ !
ಭಾವಿಕರೆಂಬರು ಭೂಲೋಕ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀ
Next post ವಚನ ವಿಚಾರ – ನಾನು ಒಲಿಸುವ ಪರಿ ಹೇಗೆ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…