ಮುಗಿಲ ಮೇಲೆ ಮುಗಿಲು ತೇಲಿತು

ಮುಗಿಲ ಮೇಲೆ ಮುಗಿಲು ತೇಲಿತು
ಚಂದ್ರ ಸೂರ್ಯರ ತೂಗಿತು
ಗಿರಿಯ ಮೇಲೆ ಗಿರಿಯು ಏರಿತು
ಹಸಿರು ಕಾನನ ಹಾಡಿತು

ಮಂದ ಮಾರುತ ತುಂಬಿ ನೀಡಲು
ಮೌನ ಎಚ್ಚರವಾಯಿತು
ಮುಗಿಲ ಧೂಳಿಯ ಗೂಳಿ ಚಿಮ್ಮಲು
ಗಾನ ಕೇಕೆಯ ಹಾಕಿತು

ಮಾತು ಮಂತ್ರಾ ಶಬ್ದ ಜಪವು
ಆತ್ಮ ಕೋಗಿಲೆ ಕೂಗಿತು
ಪಕ್ಕ ಬಿಚ್ಚಿತು ಹಣ್ಣು ಕಚ್ಚಿತು
ಗಾನ ಹೊಚ್ಚುತ ಹಾಡಿತು

ಮರಹು ಜಾರಿತು ಅರುಹು ಮೂಡಿತು
ಸ್ವರ್ಣಮಂದಿರ ಕರೆಯಿತು
ಅಂತರಂಗದ ಸಪ್ತರಂಗದ
ವರ್ಣ ಬಾಗಿಲು ತೆರೆಯಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಡಿತ
Next post ಏನು ಸಾವಯವವೋ ? ಅವರಿವರಿಗಾಗಿ ದುಡಿಯುತಿರೆ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…