ಖಾಸಾ ಗೆಳೆಯರು

ದಿನಾಲು ಉರಿಯುವ ಸೂರ್‍ಯನ
ಒಂದು ಕಿಡಿಯ ತೆಗೆದು, ಪ್ರಣತಿ
ಎಣ್ಣೆಯಲಿ ಅದ್ದಿದ ಬತ್ತಿಗೆ ಸೋಕಿಸಿ,
ದೀಪ ಹಚ್ಚುವ ಕಾಲ ಮತ್ತು ನಾನು
ಖಾಸಾ ಗೆಳೆಯರು.

ಎದೆಯಿಂದ ಎದೆಯ ಆಳಕೆ
ಇಳಿದ ಇಷ್ಟದ ಕಷ್ಟದ ಕ್ಷಣಗಳ,
ಸರಿಸಿ ದಕ್ಕುವ ಬೆಳಕಿನ ಕೋಲುಗಳು.
ಆ ದಿನದ ಮೂರ್ತ ಕ್ಷಣಗಳ ಚಪ್ಪರಿಸಿದೆವು,
ಖಾಸಾ ಗೆಳೆಯರು.

ಹಾಗಂತ ಹಸಿದ ಹೊಟ್ಟೆಯ ತಳಮಳ
ಅವಮಾನಗಳ ಕಾಟ ತಪ್ಪಿಸಿಕೊಂಡು,02
ಒಲ್ಲದ ಮನಸ್ಸನು ಬೆಳಕಿಗೆ ಒಡ್ಡಿ
ಬೆಚ್ಚಗೆ ಮೈ ಕಾಯಿಸಿಕೊಂಡೆವು ನಾವು,
ಖಾಸಾ ಗೆಳೆಯರು.

ಒತ್ತಡ ಪ್ರೀತಿ ಅಂತಃಕರಣಗಳ
ಅಡುಗೆಯನ್ನು ಧೈರ್ಯದಿಂದ ಮಾಡಿ,
ಉಣಬಡಿಸಿದ ಅವ ಗೆಲುವಿನ ಪಯಣ.
ಒಂದಾಗಿಸಿ ಹಳ್ಳಕೊಳ್ಳ ದಾಟಿ ಬಂದೆವು
ಫಲಿತಾಂಶ ಜಗತ್ತೇ ನೋಡಿತು,
ನಾವು ಖಾಸಾ ಗೆಳೆಯರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಧುರ ಮಧುರವೀ
Next post ಭೂಕಂಪ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys