ಖಾಸಾ ಗೆಳೆಯರು

ದಿನಾಲು ಉರಿಯುವ ಸೂರ್‍ಯನ
ಒಂದು ಕಿಡಿಯ ತೆಗೆದು, ಪ್ರಣತಿ
ಎಣ್ಣೆಯಲಿ ಅದ್ದಿದ ಬತ್ತಿಗೆ ಸೋಕಿಸಿ,
ದೀಪ ಹಚ್ಚುವ ಕಾಲ ಮತ್ತು ನಾನು
ಖಾಸಾ ಗೆಳೆಯರು.

ಎದೆಯಿಂದ ಎದೆಯ ಆಳಕೆ
ಇಳಿದ ಇಷ್ಟದ ಕಷ್ಟದ ಕ್ಷಣಗಳ,
ಸರಿಸಿ ದಕ್ಕುವ ಬೆಳಕಿನ ಕೋಲುಗಳು.
ಆ ದಿನದ ಮೂರ್ತ ಕ್ಷಣಗಳ ಚಪ್ಪರಿಸಿದೆವು,
ಖಾಸಾ ಗೆಳೆಯರು.

ಹಾಗಂತ ಹಸಿದ ಹೊಟ್ಟೆಯ ತಳಮಳ
ಅವಮಾನಗಳ ಕಾಟ ತಪ್ಪಿಸಿಕೊಂಡು,02
ಒಲ್ಲದ ಮನಸ್ಸನು ಬೆಳಕಿಗೆ ಒಡ್ಡಿ
ಬೆಚ್ಚಗೆ ಮೈ ಕಾಯಿಸಿಕೊಂಡೆವು ನಾವು,
ಖಾಸಾ ಗೆಳೆಯರು.

ಒತ್ತಡ ಪ್ರೀತಿ ಅಂತಃಕರಣಗಳ
ಅಡುಗೆಯನ್ನು ಧೈರ್ಯದಿಂದ ಮಾಡಿ,
ಉಣಬಡಿಸಿದ ಅವ ಗೆಲುವಿನ ಪಯಣ.
ಒಂದಾಗಿಸಿ ಹಳ್ಳಕೊಳ್ಳ ದಾಟಿ ಬಂದೆವು
ಫಲಿತಾಂಶ ಜಗತ್ತೇ ನೋಡಿತು,
ನಾವು ಖಾಸಾ ಗೆಳೆಯರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಧುರ ಮಧುರವೀ
Next post ಭೂಕಂಪ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…