ಭೂಕಂಪ


ಪೃಥ್ವಿಯ ಒಡಲೊಳಗಿರುತಿಹುದೇನು ?
ತಳಮಳ ಕಾಯ್ದಿಹ ಲಾವಾರಸವು !

ಭೂಮಿಯು ಗದಗದ ನಡುಗುತಿದೆ !
ಸಾಗರ ಕೊನೆ ಮೊದಲಾಗುತಿದೆ !
ಗಿಡವದು ಬುಡಮೇಲಾಗುತಿದೆ !
ಪಶುಗಳ ಪ್ರಾಣವು ಪೋಗುತಿದೆ !
ಮಾನವಕೋಟಿಯು ಮುಳುಗುತಿದೆ !
ಕಟ್ಟಡ ಕಟ್ಟಡ ಉರುಳುತಿದೆ !
ಪಟ್ಟಣ ಪಟ್ಟಣ ಪೋಗುತಿದೆ !
ಅಂಬರ ನೋಟವ ನೋಡುತಿದೆ !

ಏನಿದು ಭೀಕರ !
ದೃಶ್ಯ ಭಯಂಕರ !!

ಉಳಿಸುವರಾರು? ಬೆಳಿಸುವರಾರು?
ದೇವನ ಮನವನು ಗೆಲ್ಲುವರಾರು ?


ಹಿಂದೂದೇಶದೊಳಡಗಿಹುದೇನು ?
ತಾಪದ ಪಾಪದ ಪರಮನ್ಯಾಯ !
ನಾಡಿಗೆ ನಾಡಿದು ನಡುಗುತಿದೆ !
ರಾಜ್ಯದ ಬಿಗಿತನ ಬಿಚ್ಚುತಿದೆ !
ಸ್ವಾತಂತ್ರವು ಸಲೆ ಸಾಗುತಿದೆ !
ರಾಟಿಯ ಕೋಟಿಯು ಮುಳುಗುತಿದೆ !
ಬಡವರ ಒಡಲುರಿ ಹೆಚ್ಚುತಿದೆ !
ವಿಧವೆಯ ಶಾಪವು ತಟ್ಟುತಿದೆ !
ಜೀವನ ಕಟ್ಟಡವುರುಳುತಿದೆ !
ಭಾರತ ಕಣ್ಣಿಲಿ ಕಾಣುತಿದೆ !

ಎಲ್ಲಿಯನ್ಯಾಯ !
ಪರಮನ್ಯಾಯ !!

ಹೇಳುವರಾರು ? ಕೇಳುವರಾರು ?
ಸಮಾಜಗೋರಿಯ ಕಟ್ಟುವರಾರು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಖಾಸಾ ಗೆಳೆಯರು
Next post ವಚನ ವಿಚಾರ – ಹೀಗೆ ಸಂತೋಷ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…