ಭೂಕಂಪ


ಪೃಥ್ವಿಯ ಒಡಲೊಳಗಿರುತಿಹುದೇನು ?
ತಳಮಳ ಕಾಯ್ದಿಹ ಲಾವಾರಸವು !

ಭೂಮಿಯು ಗದಗದ ನಡುಗುತಿದೆ !
ಸಾಗರ ಕೊನೆ ಮೊದಲಾಗುತಿದೆ !
ಗಿಡವದು ಬುಡಮೇಲಾಗುತಿದೆ !
ಪಶುಗಳ ಪ್ರಾಣವು ಪೋಗುತಿದೆ !
ಮಾನವಕೋಟಿಯು ಮುಳುಗುತಿದೆ !
ಕಟ್ಟಡ ಕಟ್ಟಡ ಉರುಳುತಿದೆ !
ಪಟ್ಟಣ ಪಟ್ಟಣ ಪೋಗುತಿದೆ !
ಅಂಬರ ನೋಟವ ನೋಡುತಿದೆ !

ಏನಿದು ಭೀಕರ !
ದೃಶ್ಯ ಭಯಂಕರ !!

ಉಳಿಸುವರಾರು? ಬೆಳಿಸುವರಾರು?
ದೇವನ ಮನವನು ಗೆಲ್ಲುವರಾರು ?


ಹಿಂದೂದೇಶದೊಳಡಗಿಹುದೇನು ?
ತಾಪದ ಪಾಪದ ಪರಮನ್ಯಾಯ !
ನಾಡಿಗೆ ನಾಡಿದು ನಡುಗುತಿದೆ !
ರಾಜ್ಯದ ಬಿಗಿತನ ಬಿಚ್ಚುತಿದೆ !
ಸ್ವಾತಂತ್ರವು ಸಲೆ ಸಾಗುತಿದೆ !
ರಾಟಿಯ ಕೋಟಿಯು ಮುಳುಗುತಿದೆ !
ಬಡವರ ಒಡಲುರಿ ಹೆಚ್ಚುತಿದೆ !
ವಿಧವೆಯ ಶಾಪವು ತಟ್ಟುತಿದೆ !
ಜೀವನ ಕಟ್ಟಡವುರುಳುತಿದೆ !
ಭಾರತ ಕಣ್ಣಿಲಿ ಕಾಣುತಿದೆ !

ಎಲ್ಲಿಯನ್ಯಾಯ !
ಪರಮನ್ಯಾಯ !!

ಹೇಳುವರಾರು ? ಕೇಳುವರಾರು ?
ಸಮಾಜಗೋರಿಯ ಕಟ್ಟುವರಾರು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಖಾಸಾ ಗೆಳೆಯರು
Next post ವಚನ ವಿಚಾರ – ಹೀಗೆ ಸಂತೋಷ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys