Home / ಲೇಖನ / ಇತರೆ / ವಚನ ವಿಚಾರ – ಹೀಗೆ ಸಂತೋಷ

ವಚನ ವಿಚಾರ – ಹೀಗೆ ಸಂತೋಷ

ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತಾಯಿತ್ತು
ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ
ಇಹದ ಸುಖ ಪರದ ಗತಿ ನಡೆದು ಬಂದಂತಾತ್ತು ನೋಡಾ ಎನಗೆ
ಚೆನ್ನಮಲ್ಲಿಕಾರ್ಜುನಯ್ಯಾ
ಗುರುಪಾದವ ಕಂಡು ಧನ್ಯಳಾದೆ ನೋಡಾ

[ಅರಲುಗೊಂಡ ಬತ್ತಿದ ಬರಲುಗೊಂಡ-ಒಣಗಿದ]

ಅಕ್ಕಮಹಾದೇವಿಯ ವಚನ. ಅಕ್ಕ ತನ್ನ ಗುರುವನ್ನು ಕಂಡು ಆದ ಸಂತೋಷವನ್ನಿಲ್ಲಿ ವ್ಯಕ್ತಪಡಿಸಿದ್ದಾಳೆ. ಈ ವಚನದ ಚೆಲುವು ಇರುವುದು ಆಕೆ ಬಳಸಿರುವ ಹೋಲಿಕೆಗಳಲ್ಲಿ, ಮಾತಿನ ಲಯದಲ್ಲೇ ಮನಸ್ಸಿಗೆ ಆದ ಸಂತೋಷ ನೆಮ್ಮದಿಗಳನ್ನು ಪ್ರಕಟಿಸಿರುವ ರೀತಿಯಲ್ಲಿ.

ಬತ್ತಿ ಹೋದ ಕೆರೆಗೆ ತೊರೆಯೇ ಹರಿದು ಬಂದರೆ ಬತ್ತಿದ ಕೆರೆಗೆ ಆಗುವ ಸಂತೋಷದಂತೆ, ಒಣಗಿ ಬರಲು ಬರಲಾಗಿರುವ ಸಸಿಯ ಮೇಲೆ ಮಳೆ ಸುರಿದಾಗ ಆಗುವ ಸಂತೋಷದಂತೆ ಗುರುವಿನ ಪಾದ ಕಂಡಾಗ ನನಗನ್ನಿಸಿತು. ಇಹದ ಸುಖ, ಪರದ ಗತಿ ನನ್ನತ್ತ ನಡೆದುಬಂದಂತಾಯಿತು ಎನ್ನುತ್ತಾಳೆ.

ಬತ್ತಿ ಹೋದದ್ದು, ನಿರ್ಜೀವವೇ ಆದದ್ದು ಮತ್ತೆ ತುಂಬಿಕೊಂಡ, ಜೀವಂತವಾದ ಸಾರ್ಥಕತೆ ಗುರುವನ್ನು ಕಂಡಾಗ ಆಯಿತು. ಇದು ಇಹದ ಸುಖ, ಹಾಗೆಯೇ ಗುರುವು ಪರದ ದಾರಿಯನ್ನೂ ಮುಂದಿನ ಗತಿಯನ್ನೂ ತೋರಬಲ್ಲವನು. ಗುರುವನ್ನು ದೈವದ ಇನ್ನೊಂದು ರೂಪವೇ ಎಂದು ಕಾಣುವುದರಿಂದ ಚನ್ನಮಲ್ಲಿಕಾರ್ಜುನನನ್ನು ತೋರಬಲ್ಲಾತನ ಕಂಡ ಸಂತೋಷವನ್ನು ಈ ವಚನ ಹೇಳುತ್ತದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...