Home / ಲೇಖನ / ಇತರೆ / ವಚನ ವಿಚಾರ – ಹೀಗೆ ಸಂತೋಷ

ವಚನ ವಿಚಾರ – ಹೀಗೆ ಸಂತೋಷ

ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತಾಯಿತ್ತು
ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ
ಇಹದ ಸುಖ ಪರದ ಗತಿ ನಡೆದು ಬಂದಂತಾತ್ತು ನೋಡಾ ಎನಗೆ
ಚೆನ್ನಮಲ್ಲಿಕಾರ್ಜುನಯ್ಯಾ
ಗುರುಪಾದವ ಕಂಡು ಧನ್ಯಳಾದೆ ನೋಡಾ

[ಅರಲುಗೊಂಡ ಬತ್ತಿದ ಬರಲುಗೊಂಡ-ಒಣಗಿದ]

ಅಕ್ಕಮಹಾದೇವಿಯ ವಚನ. ಅಕ್ಕ ತನ್ನ ಗುರುವನ್ನು ಕಂಡು ಆದ ಸಂತೋಷವನ್ನಿಲ್ಲಿ ವ್ಯಕ್ತಪಡಿಸಿದ್ದಾಳೆ. ಈ ವಚನದ ಚೆಲುವು ಇರುವುದು ಆಕೆ ಬಳಸಿರುವ ಹೋಲಿಕೆಗಳಲ್ಲಿ, ಮಾತಿನ ಲಯದಲ್ಲೇ ಮನಸ್ಸಿಗೆ ಆದ ಸಂತೋಷ ನೆಮ್ಮದಿಗಳನ್ನು ಪ್ರಕಟಿಸಿರುವ ರೀತಿಯಲ್ಲಿ.

ಬತ್ತಿ ಹೋದ ಕೆರೆಗೆ ತೊರೆಯೇ ಹರಿದು ಬಂದರೆ ಬತ್ತಿದ ಕೆರೆಗೆ ಆಗುವ ಸಂತೋಷದಂತೆ, ಒಣಗಿ ಬರಲು ಬರಲಾಗಿರುವ ಸಸಿಯ ಮೇಲೆ ಮಳೆ ಸುರಿದಾಗ ಆಗುವ ಸಂತೋಷದಂತೆ ಗುರುವಿನ ಪಾದ ಕಂಡಾಗ ನನಗನ್ನಿಸಿತು. ಇಹದ ಸುಖ, ಪರದ ಗತಿ ನನ್ನತ್ತ ನಡೆದುಬಂದಂತಾಯಿತು ಎನ್ನುತ್ತಾಳೆ.

ಬತ್ತಿ ಹೋದದ್ದು, ನಿರ್ಜೀವವೇ ಆದದ್ದು ಮತ್ತೆ ತುಂಬಿಕೊಂಡ, ಜೀವಂತವಾದ ಸಾರ್ಥಕತೆ ಗುರುವನ್ನು ಕಂಡಾಗ ಆಯಿತು. ಇದು ಇಹದ ಸುಖ, ಹಾಗೆಯೇ ಗುರುವು ಪರದ ದಾರಿಯನ್ನೂ ಮುಂದಿನ ಗತಿಯನ್ನೂ ತೋರಬಲ್ಲವನು. ಗುರುವನ್ನು ದೈವದ ಇನ್ನೊಂದು ರೂಪವೇ ಎಂದು ಕಾಣುವುದರಿಂದ ಚನ್ನಮಲ್ಲಿಕಾರ್ಜುನನನ್ನು ತೋರಬಲ್ಲಾತನ ಕಂಡ ಸಂತೋಷವನ್ನು ಈ ವಚನ ಹೇಳುತ್ತದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...