ತ್ರಿಶಂಕು ಸ್ಥಿತಿ

ಮುಗಿಲೆತ್ತರ ಏರುವ
ಹಾರುವ ತೇಲಾಡುವ
ಬಯಕೆ ಬಲಿತು ಹೆಮ್ಮರ
ಕಡಿದಾದ ದಾರಿ ಬಲುದೂರ.
ಕಾಣದ ತೀರ
ಗುರಿ ಸೇರುವ ಕಾತುರ
ಹುಚ್ಚು ಮನಸ್ಸಿಗಿಲ್ಲ ಕಡಿವಾಣ
ಪುಂಖಾನುಪುಂಖ ನಿರಾಸೆಯ ಬಾಣ
ಆಸೆಗಳು ಆಗಸದಷ್ಟು
ಕನಸುಗಳು ಕಡಲಿನಷ್ಟು
ನನಸಾಗದೆ ಉಳಿಯುವುದೇ ಹೆಚ್ಚು
ಭೋರ್‍ಗರೆಯುವ ಪ್ರವಾಹದೆದುರು
ಸೆಣಸಿ ಮುನ್ನುಗ್ಗುವ ಹುಚ್ಚು
ಮುಂದೆ ಸಾಗುವವರ ಹಿಂದೆ ತಳ್ಳಿ
ಮುನ್ನಡೆಯುವ ಕೆಚ್ಚು.
ಏರಬಹುದು ಮೇಲೇರಬಹುದು
ಏರಿದ ಮೇಲೇ
ಭಯ ಆತಂಕದ ನೋಟ
ಅಸ್ತಿತ್ವಕ್ಕಾಗಿ ಹೋರಾಟ
ಮೇಲೇರಿದರೆ ಹದ್ದುಗಳ ಕಾಟ
ಕೆಳಗಿಳಿದರೆ ಹಾವುಗಳ ಚೀರಾಟ
ಅತ್ತಲೂ ಇಲ್ಲದೆ ಇತ್ತಲೂ ಸಲ್ಲದೆ
ನಡುವೆ ತ್ರಿಶಂಕುವಿನ ಸ್ಥಿತಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಹೀಗೆ ಸಂತೋಷ
Next post ಕೂಡಲೇ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…