Home / ಲೇಖನ / ಇತರೆ / ವಚನ ವಿಚಾರ – ಜ್ಞಾನ-ಕ್ರಿಯೆ

ವಚನ ವಿಚಾರ – ಜ್ಞಾನ-ಕ್ರಿಯೆ

ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ
ತಾಗುವ ಮೊನೆಗಾಧಾರವಾಗಿ
ದೂರ ಎಯಿದುವುದಕ್ಕೆ ಸಾಗಿಸುವ ಗುಣ ತಾನಾಗಿ
ಕ್ರೀ ಅರಿವಿನ ಭೇದದ ನೆರಿಗೆಯ ಕಾಬನ್ನಕ್ಕ
ಅರಿವು ಕುರುಹು ಎರಡೂ ಬೇಕೆಂದನಂಬಿಗ ಚೌಡಯ್ಯ

[ಅಂಬಿನ-ಬಾಣದ, ಹಿಳಿಕಿನಲ್ಲಿ-ಹಿಂಬದಿಯಲ್ಲಿ, ವಿಹಂಗನ ಹಕ್ಕಿಯ, ಕ್ರೀ-ಕ್ರಿಯೆ, ಕಾಬನ್ನಕ್ಕ-ಕಾಣುವವರೆಗೆ]

ಅಂಬಿಗರ ಚೌಡಯ್ಯನ ವಚನ, ಜ್ಞಾನ ಮತ್ತು ಕ್ರಿಯೆಗಳಿಗೆ ಇರುವ ಸಂಬಂಧವನ್ನು ಈ ವಚನ ವಿವರಿಸುತ್ತದೆ.

ಇಲ್ಲಿ ಒಂದು ರೂಪಕವಿದೆ. ಅದು ಬಾಣದ ರೂಪಕ. ಬಾಣದ ಹಿಳಿಕಿನಲ್ಲಿ ಹಕ್ಕಿಯ ಗರಿಯನ್ನು ಕಟ್ಟಿರುವುದುಂಟು. ಆ ಗರಿಯ ಕಾರ್‍ಯ ಏನೆಂದರೆ ಗುರಿಯನ್ನು ಮುಟ್ಟುವ ಮೊನೆಗೆ ಸಹಾಯಮಾಡುವುದು. ಹಿಂಬದಿಯ ಗರಿಯ ಬೆಂಬಲ, ಸಮತೋಲ ಇಲ್ಲದಿದ್ದರೆ ಬಾಣವು ದೂರ ಹೋಗದು.

ಹಾಗೆಯೇ ಕ್ರಿಯೆ ಎಂಬುದು ಬಾಣ, ಅರಿವು ಅನ್ನುವುದು ಬಾಣದ ಹಿಳಿಕಿನಲ್ಲಿರುವ ಗರಿ ಎಂದು ಚೌಡಯ್ಯ ಹೇಳುತ್ತಾನೆ. ಈ ಅರಿವು ಮತ್ತು ಕ್ರಿಯೆಯ ವ್ಯತ್ಯಾಸವನ್ನು, ಸಂಬಂಧವನ್ನು ಅರಿಯುವವರೆಗೆ ಅರಿವು, ಕುರುಹು (ಸಂಕೇತ, ಲಾಂಛನ) ಎಲ್ಲವೂ ಬೇಕು ಅನ್ನುತ್ತಾನೆ.

ಆಧುನಿಕ ಕಾಲದಲ್ಲಿ ಜ್ಞಾನ (ನಾಲೆಜ್) ಮತ್ತು ಕ್ರಿಯೆ (ಆಕ್ಷನ್) ಕುರಿತು, ಪ್ರಾಕ್ಟಿಸ್‌ ಮತ್ತು ಥಿಯರಿ ಕುರಿತು ಅನೇಕ ಚರ್ಚೆಗಳು ನಡೆದಿವೆ. ಆಧುನಿಕ ಪೂರ್‍ವ ಕಾಲದಲ್ಲಿ ಜ್ಞಾನ ಮತ್ತು ಕ್ರಿಯೆಗಳ ಸಂಬಂಧ ಕುರಿತು ನಡೆದ ಚರ್ಚೆಯ ನಿದರ್‍ಶನವಾಗಿ ಈ ವಚನ ಕಾಣುತ್ತದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...