ತಿಳಿಗೊಳದ ತೀರದಿಹ ತನಿಗಲ್ಲ ಗದುಗೆ-
ಯನೇರಿ ಸರದ ಸುಯ್ಯನೆ ಶೃತಿಯಲ್ಲಿ
ಕೋಕಿಲ, ಶುಕ, ರವಂಗಳ ಹಿಮ್ಮೇಳದಲಿ
ನವಿಲು ನೃತ್ಯಕೆ ತಾಳ ಮೇಳೈಸಿ
ವೀಣಾತರಂಗ ತನ್ಮಯಳೆ ತಾಯೆ
ತರವೇನೆ ನಿನಗೀಪರಿಯು?
ಕನ್ನಡ ತಾಯ ತಾಪತ್ರಯಂಗಳಂ
ಎವೆಯಿಕ್ಕದನುದಿನ ನೋಡಿ ನೋಡಿ
ಸಂಗೀತ ಸಾಗರದೀಜುಬಿದ್ದೇಳುತಿಹಿ.
ದೇವಿ, ಸರಸ್ವತಿದೇವಿ, ವಾಗ್ದೇವಿ,
ಬ್ರಹ್ಮದೇವನರಾಣಿ, ವೀಣಾ ಪಾಣಿ,
ಕೀರ್ವಾಣಿ, ಕವಿಶ್ರೇಣಿ ಕಲ್ಯಾಣಿ
ನಿನ್ನ ನಾನನವರತ ಭಜಿಸಲೇಕೆ?
ಸಪ್ತ ಸಾಗರಗಳಭಿಷವಂ ಗೈದು
ಮೂರ್ತ ಮಾರ್ತಾಂಡ ಚಂದ್ರಮತೀಡಿ
ಕಾನನೋದ್ಯಾನ ಕುಸುಮಗಳ ಚೆಲ್ಲಿ
ಸುಪ್ರಭಾತ ಸುಮಂಗಲ ಪಾಡಿ
ಕುಣಿದು ಕೊಂಡಾಡಿ ಪೂಜಿಸಲೇಕೆ?
ಬಾ ಹೊರಗೆ ವೀಣೆಯನಿಟ್ಟು ವಿಶ್ರಾಂತಿ
ಕೊಟ್ಟು, ಕೆಲಕಾಲ ಖಡ್ಗ ಪಾಣಿನಿಯಾಗಿ.
ಮಲ್ಲಗಚ್ಚಿಯ ಹಾಕಿ ಬಾ ಬೆಂಗಾವಲಾಗಿ.
ಮೂಜಗಕೆ ಗಂಡ ಭೇರುಂಡ ಗಾಂಡೀವಿ-
ಪುತ್ರಾಭಿಮನ್ಯು ಚಕ್ರವ್ಯೂಹವನೆ
ಭೇದಿಸಿದ ಬಾಣದ ಶಕ್ತಿ ಬಹುದೆನ್ನ
ಗಲುಗಿಗೆ. ಮೌಢ್ಯ ಕೋಟೆಯ ಕೆಡಹಿ
ನಾಡಗುಡಿ ಕಟ್ಟುವೆನು. ಕನ್ನಡ ತಾಯ
ತಣಿಸುವೆನು. ನುಡಿದೇವಿ ನುಡಿಸಾಗ
ನಿನ್ನ ವೀಣೆಯನು ತೋಷದಾಕಾಶದಲಿ.
*****
Related Post
ಸಣ್ಣ ಕತೆ
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…
-
ವಿರೇಚನೆ
ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…
-
ಮೃಗಜಲ
"People are trying to work towards a good quality of life for tomorrow instead of living for today, for many… Read more…