Home / ಕವನ / ಕವಿತೆ / ಘಮ್ಮಂತ ಕಮ್ಮಂತ

ಘಮ್ಮಂತ ಕಮ್ಮಂತ

ಚೈತ್ರ ವೈಶಾಖದ ಶುಕ್ಲ ಪೂರ್ಣಿಮೆ
ಎಲ್ಲೆಲ್ಲೂ ಬೆಳದಿಂಗಳು ಹರಡಿದ ಬಯಲು.
ಎಲ್ಲೇ ಕಂಡ ಬೆಳಕು ಎದೆಯೊಳಗೆ ಇಳಿದ
ಭಾವ. ಅವಳು ದುಃಖದ ಮಗುವಿಗೆ
ಹುಷಾರಾಗು ಎಂದು ಹಾಲು ಕುಡಿಸುತ್ತಿದ್ದಾಳೆ.
ಜಗದ ಜನರ ಬದುಕಿನ ಘಮ ಅರಳಿ
ಅಡುಗೆ ಮನೆಯ ತುಂಬ ಬಿಳಿಬಿಳಿ ಅನ್ನ.
ಅವನು ಮುಂಜಾನೆ ಸದ್ದಿಲ್ಲದೇ ನೇಗಿಲ ಹೂಳುತ್ತಿದ್ದಾನೆ.
ಬೆವರ ಹನಿಗಳು ಆಕಾಶದಲಿ ಇಂಗಿವೆ.
ಕಾಯಕ ಜಗವ ಅರಳಿಸಿದೆ. ಅದು ಆಸೆಯಲ್ಲ.
ನಿಯಮದ ಪಾಲನೆ ಮತ್ತೆ ಅರಳಿ, ಹೂವು ಹಣ್ಣು
ಪಶು ಪಕ್ಕಿಗಳ ಸಂತತಿ ಚಿಗುರಿ, ಬನದ ತುಂಬ
ಹಸಿರೆಲೆಗಳು.

ಶುಕ್ಲ ಪೂರ್ಣಿಮೆಯ ತಣ್ಣನೆಯ ಹಳದಿ
ಬೆಳಕಿಗೆ ಕವಿಬುದ್ಧ ಅರೆದು ಅರವಳಿಕೆಯ
ಮುಚ್ಚಳ ತೆಗೆದಾಗ, ಜಗದ ನಿದ್ದೆಯಲ್ಲೂ
ಚಲನೆ, ಬೆಳಕಿನ ಬೀಜಗಳ ಚಲನೆ, ಇತಿಹಾಸ
ಮನುಕುಲದ ಚಲನೆ, ಬೀಜ ಮೂಕಮರ್ಮರವಾಗಿ
ಹಸಿರು ಚಿಗುರುವೆ ಚಲನೆ, ಜಗದ ಅಣುತೃಣವೂ
ಬದಲಾಗದ ಭೂಮಿಯ ಆಕಾಶದ ಚಲನೆ
ಶಬ್ದಗಳ ನಿಶ್ಯಬ್ದಗಳ ಚಲನೆ, ಅದು ಮೋಹದ
ಮಾಯೆಯ ಆಚೆಯ ಚಲನೆ, ಅದು ಮೋಹದ
ಮಾಯೆಯ ಆಚೆಯ ಚಲನೆ, ಭಾವ ಬುದ್ದಿಗಳ
ಅರಮನೆ, ಅದು ಧಮ್ಮ. ಇದು ಹುಟ್ಟು ಗಟ್ಟಿ ಬಂಡೆಯ
ಮೆತ್ತಗಾಗಿಸಿದೆ ಬೆಳದಿಂಗಳು.

ಸತ್ಯದ ಬೆಳದಿಂಗಳು ಎಲ್ಲರ ಪಾತ್ರೆಗಳು
ತುಂಬಿವೆ ಅವರವರ ರುಚಿಗೆ, ಮತ್ತೆ
ಅವರಿವರ ಸ್ಥಿತಿಗತಿಗೆ ಕಂಡ ನೋಟದ ಒಳ ಹರವು
ಒಳಗೊಳಗೆ ಗಟ್ಟಿಯಾಗುವ ಕಾಯಕ, ಜಗದ ಕರುಣಿಯ
ತಿಳಿಗಾಳಿ ಗಂಧ ಸೂಸಿ ಅರಿತವರೆಲ್ಲಾ ಶರಣಬುದ್ದರು
ನಡೆನುಡಿಗಳ ಪಥದ ಜೀವ ದ್ರವ್ಯ ತಂಪು ಹನಿಹನಿಯಾಗಿ
ಎದೆಗಿಳಿದ ತಣ್ಣನೆಯ ರಾತ್ರಿ ಆತ್ಮಕಲ್ಯಾಣ ಲೋಕಕಲ್ಯಾಣ
ಕುದುರೆ ಏರಿ ಹೊರಟವರೆಲ್ಲರೂ, ಜೀವ ಪ್ರೀತಿಸಿ ದೇವ
ಪ್ರೀತಿಗೆ ಒಳಗಾದರು ಮತ್ತೆ ಪೂರ್ಣ ವಿಕಾಸದ ದಾರಿ
ನಿರ್ಮಾಣವಾಯಿತು ಎಲ್ಲಾ ಪರಂಪರೆಯ ಬೆಳದಿಂಗಳ
ಶೃತಿಯಲಿ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...