Home / ಕವನ / ಕವಿತೆ / ಘಮ್ಮಂತ ಕಮ್ಮಂತ

ಘಮ್ಮಂತ ಕಮ್ಮಂತ

ಚೈತ್ರ ವೈಶಾಖದ ಶುಕ್ಲ ಪೂರ್ಣಿಮೆ
ಎಲ್ಲೆಲ್ಲೂ ಬೆಳದಿಂಗಳು ಹರಡಿದ ಬಯಲು.
ಎಲ್ಲೇ ಕಂಡ ಬೆಳಕು ಎದೆಯೊಳಗೆ ಇಳಿದ
ಭಾವ. ಅವಳು ದುಃಖದ ಮಗುವಿಗೆ
ಹುಷಾರಾಗು ಎಂದು ಹಾಲು ಕುಡಿಸುತ್ತಿದ್ದಾಳೆ.
ಜಗದ ಜನರ ಬದುಕಿನ ಘಮ ಅರಳಿ
ಅಡುಗೆ ಮನೆಯ ತುಂಬ ಬಿಳಿಬಿಳಿ ಅನ್ನ.
ಅವನು ಮುಂಜಾನೆ ಸದ್ದಿಲ್ಲದೇ ನೇಗಿಲ ಹೂಳುತ್ತಿದ್ದಾನೆ.
ಬೆವರ ಹನಿಗಳು ಆಕಾಶದಲಿ ಇಂಗಿವೆ.
ಕಾಯಕ ಜಗವ ಅರಳಿಸಿದೆ. ಅದು ಆಸೆಯಲ್ಲ.
ನಿಯಮದ ಪಾಲನೆ ಮತ್ತೆ ಅರಳಿ, ಹೂವು ಹಣ್ಣು
ಪಶು ಪಕ್ಕಿಗಳ ಸಂತತಿ ಚಿಗುರಿ, ಬನದ ತುಂಬ
ಹಸಿರೆಲೆಗಳು.

ಶುಕ್ಲ ಪೂರ್ಣಿಮೆಯ ತಣ್ಣನೆಯ ಹಳದಿ
ಬೆಳಕಿಗೆ ಕವಿಬುದ್ಧ ಅರೆದು ಅರವಳಿಕೆಯ
ಮುಚ್ಚಳ ತೆಗೆದಾಗ, ಜಗದ ನಿದ್ದೆಯಲ್ಲೂ
ಚಲನೆ, ಬೆಳಕಿನ ಬೀಜಗಳ ಚಲನೆ, ಇತಿಹಾಸ
ಮನುಕುಲದ ಚಲನೆ, ಬೀಜ ಮೂಕಮರ್ಮರವಾಗಿ
ಹಸಿರು ಚಿಗುರುವೆ ಚಲನೆ, ಜಗದ ಅಣುತೃಣವೂ
ಬದಲಾಗದ ಭೂಮಿಯ ಆಕಾಶದ ಚಲನೆ
ಶಬ್ದಗಳ ನಿಶ್ಯಬ್ದಗಳ ಚಲನೆ, ಅದು ಮೋಹದ
ಮಾಯೆಯ ಆಚೆಯ ಚಲನೆ, ಅದು ಮೋಹದ
ಮಾಯೆಯ ಆಚೆಯ ಚಲನೆ, ಭಾವ ಬುದ್ದಿಗಳ
ಅರಮನೆ, ಅದು ಧಮ್ಮ. ಇದು ಹುಟ್ಟು ಗಟ್ಟಿ ಬಂಡೆಯ
ಮೆತ್ತಗಾಗಿಸಿದೆ ಬೆಳದಿಂಗಳು.

ಸತ್ಯದ ಬೆಳದಿಂಗಳು ಎಲ್ಲರ ಪಾತ್ರೆಗಳು
ತುಂಬಿವೆ ಅವರವರ ರುಚಿಗೆ, ಮತ್ತೆ
ಅವರಿವರ ಸ್ಥಿತಿಗತಿಗೆ ಕಂಡ ನೋಟದ ಒಳ ಹರವು
ಒಳಗೊಳಗೆ ಗಟ್ಟಿಯಾಗುವ ಕಾಯಕ, ಜಗದ ಕರುಣಿಯ
ತಿಳಿಗಾಳಿ ಗಂಧ ಸೂಸಿ ಅರಿತವರೆಲ್ಲಾ ಶರಣಬುದ್ದರು
ನಡೆನುಡಿಗಳ ಪಥದ ಜೀವ ದ್ರವ್ಯ ತಂಪು ಹನಿಹನಿಯಾಗಿ
ಎದೆಗಿಳಿದ ತಣ್ಣನೆಯ ರಾತ್ರಿ ಆತ್ಮಕಲ್ಯಾಣ ಲೋಕಕಲ್ಯಾಣ
ಕುದುರೆ ಏರಿ ಹೊರಟವರೆಲ್ಲರೂ, ಜೀವ ಪ್ರೀತಿಸಿ ದೇವ
ಪ್ರೀತಿಗೆ ಒಳಗಾದರು ಮತ್ತೆ ಪೂರ್ಣ ವಿಕಾಸದ ದಾರಿ
ನಿರ್ಮಾಣವಾಯಿತು ಎಲ್ಲಾ ಪರಂಪರೆಯ ಬೆಳದಿಂಗಳ
ಶೃತಿಯಲಿ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...