ಘಮ್ಮಂತ ಕಮ್ಮಂತ

ಚೈತ್ರ ವೈಶಾಖದ ಶುಕ್ಲ ಪೂರ್ಣಿಮೆ
ಎಲ್ಲೆಲ್ಲೂ ಬೆಳದಿಂಗಳು ಹರಡಿದ ಬಯಲು.
ಎಲ್ಲೇ ಕಂಡ ಬೆಳಕು ಎದೆಯೊಳಗೆ ಇಳಿದ
ಭಾವ. ಅವಳು ದುಃಖದ ಮಗುವಿಗೆ
ಹುಷಾರಾಗು ಎಂದು ಹಾಲು ಕುಡಿಸುತ್ತಿದ್ದಾಳೆ.
ಜಗದ ಜನರ ಬದುಕಿನ ಘಮ ಅರಳಿ
ಅಡುಗೆ ಮನೆಯ ತುಂಬ ಬಿಳಿಬಿಳಿ ಅನ್ನ.
ಅವನು ಮುಂಜಾನೆ ಸದ್ದಿಲ್ಲದೇ ನೇಗಿಲ ಹೂಳುತ್ತಿದ್ದಾನೆ.
ಬೆವರ ಹನಿಗಳು ಆಕಾಶದಲಿ ಇಂಗಿವೆ.
ಕಾಯಕ ಜಗವ ಅರಳಿಸಿದೆ. ಅದು ಆಸೆಯಲ್ಲ.
ನಿಯಮದ ಪಾಲನೆ ಮತ್ತೆ ಅರಳಿ, ಹೂವು ಹಣ್ಣು
ಪಶು ಪಕ್ಕಿಗಳ ಸಂತತಿ ಚಿಗುರಿ, ಬನದ ತುಂಬ
ಹಸಿರೆಲೆಗಳು.

ಶುಕ್ಲ ಪೂರ್ಣಿಮೆಯ ತಣ್ಣನೆಯ ಹಳದಿ
ಬೆಳಕಿಗೆ ಕವಿಬುದ್ಧ ಅರೆದು ಅರವಳಿಕೆಯ
ಮುಚ್ಚಳ ತೆಗೆದಾಗ, ಜಗದ ನಿದ್ದೆಯಲ್ಲೂ
ಚಲನೆ, ಬೆಳಕಿನ ಬೀಜಗಳ ಚಲನೆ, ಇತಿಹಾಸ
ಮನುಕುಲದ ಚಲನೆ, ಬೀಜ ಮೂಕಮರ್ಮರವಾಗಿ
ಹಸಿರು ಚಿಗುರುವೆ ಚಲನೆ, ಜಗದ ಅಣುತೃಣವೂ
ಬದಲಾಗದ ಭೂಮಿಯ ಆಕಾಶದ ಚಲನೆ
ಶಬ್ದಗಳ ನಿಶ್ಯಬ್ದಗಳ ಚಲನೆ, ಅದು ಮೋಹದ
ಮಾಯೆಯ ಆಚೆಯ ಚಲನೆ, ಅದು ಮೋಹದ
ಮಾಯೆಯ ಆಚೆಯ ಚಲನೆ, ಭಾವ ಬುದ್ದಿಗಳ
ಅರಮನೆ, ಅದು ಧಮ್ಮ. ಇದು ಹುಟ್ಟು ಗಟ್ಟಿ ಬಂಡೆಯ
ಮೆತ್ತಗಾಗಿಸಿದೆ ಬೆಳದಿಂಗಳು.

ಸತ್ಯದ ಬೆಳದಿಂಗಳು ಎಲ್ಲರ ಪಾತ್ರೆಗಳು
ತುಂಬಿವೆ ಅವರವರ ರುಚಿಗೆ, ಮತ್ತೆ
ಅವರಿವರ ಸ್ಥಿತಿಗತಿಗೆ ಕಂಡ ನೋಟದ ಒಳ ಹರವು
ಒಳಗೊಳಗೆ ಗಟ್ಟಿಯಾಗುವ ಕಾಯಕ, ಜಗದ ಕರುಣಿಯ
ತಿಳಿಗಾಳಿ ಗಂಧ ಸೂಸಿ ಅರಿತವರೆಲ್ಲಾ ಶರಣಬುದ್ದರು
ನಡೆನುಡಿಗಳ ಪಥದ ಜೀವ ದ್ರವ್ಯ ತಂಪು ಹನಿಹನಿಯಾಗಿ
ಎದೆಗಿಳಿದ ತಣ್ಣನೆಯ ರಾತ್ರಿ ಆತ್ಮಕಲ್ಯಾಣ ಲೋಕಕಲ್ಯಾಣ
ಕುದುರೆ ಏರಿ ಹೊರಟವರೆಲ್ಲರೂ, ಜೀವ ಪ್ರೀತಿಸಿ ದೇವ
ಪ್ರೀತಿಗೆ ಒಳಗಾದರು ಮತ್ತೆ ಪೂರ್ಣ ವಿಕಾಸದ ದಾರಿ
ನಿರ್ಮಾಣವಾಯಿತು ಎಲ್ಲಾ ಪರಂಪರೆಯ ಬೆಳದಿಂಗಳ
ಶೃತಿಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಲ್ಲೆ ನಾನು
Next post ಸರಸ್ವತಿಗೆ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…