Home / ಕವನ / ಕವಿತೆ / ಘಮ್ಮಂತ ಕಮ್ಮಂತ

ಘಮ್ಮಂತ ಕಮ್ಮಂತ

ಚೈತ್ರ ವೈಶಾಖದ ಶುಕ್ಲ ಪೂರ್ಣಿಮೆ
ಎಲ್ಲೆಲ್ಲೂ ಬೆಳದಿಂಗಳು ಹರಡಿದ ಬಯಲು.
ಎಲ್ಲೇ ಕಂಡ ಬೆಳಕು ಎದೆಯೊಳಗೆ ಇಳಿದ
ಭಾವ. ಅವಳು ದುಃಖದ ಮಗುವಿಗೆ
ಹುಷಾರಾಗು ಎಂದು ಹಾಲು ಕುಡಿಸುತ್ತಿದ್ದಾಳೆ.
ಜಗದ ಜನರ ಬದುಕಿನ ಘಮ ಅರಳಿ
ಅಡುಗೆ ಮನೆಯ ತುಂಬ ಬಿಳಿಬಿಳಿ ಅನ್ನ.
ಅವನು ಮುಂಜಾನೆ ಸದ್ದಿಲ್ಲದೇ ನೇಗಿಲ ಹೂಳುತ್ತಿದ್ದಾನೆ.
ಬೆವರ ಹನಿಗಳು ಆಕಾಶದಲಿ ಇಂಗಿವೆ.
ಕಾಯಕ ಜಗವ ಅರಳಿಸಿದೆ. ಅದು ಆಸೆಯಲ್ಲ.
ನಿಯಮದ ಪಾಲನೆ ಮತ್ತೆ ಅರಳಿ, ಹೂವು ಹಣ್ಣು
ಪಶು ಪಕ್ಕಿಗಳ ಸಂತತಿ ಚಿಗುರಿ, ಬನದ ತುಂಬ
ಹಸಿರೆಲೆಗಳು.

ಶುಕ್ಲ ಪೂರ್ಣಿಮೆಯ ತಣ್ಣನೆಯ ಹಳದಿ
ಬೆಳಕಿಗೆ ಕವಿಬುದ್ಧ ಅರೆದು ಅರವಳಿಕೆಯ
ಮುಚ್ಚಳ ತೆಗೆದಾಗ, ಜಗದ ನಿದ್ದೆಯಲ್ಲೂ
ಚಲನೆ, ಬೆಳಕಿನ ಬೀಜಗಳ ಚಲನೆ, ಇತಿಹಾಸ
ಮನುಕುಲದ ಚಲನೆ, ಬೀಜ ಮೂಕಮರ್ಮರವಾಗಿ
ಹಸಿರು ಚಿಗುರುವೆ ಚಲನೆ, ಜಗದ ಅಣುತೃಣವೂ
ಬದಲಾಗದ ಭೂಮಿಯ ಆಕಾಶದ ಚಲನೆ
ಶಬ್ದಗಳ ನಿಶ್ಯಬ್ದಗಳ ಚಲನೆ, ಅದು ಮೋಹದ
ಮಾಯೆಯ ಆಚೆಯ ಚಲನೆ, ಅದು ಮೋಹದ
ಮಾಯೆಯ ಆಚೆಯ ಚಲನೆ, ಭಾವ ಬುದ್ದಿಗಳ
ಅರಮನೆ, ಅದು ಧಮ್ಮ. ಇದು ಹುಟ್ಟು ಗಟ್ಟಿ ಬಂಡೆಯ
ಮೆತ್ತಗಾಗಿಸಿದೆ ಬೆಳದಿಂಗಳು.

ಸತ್ಯದ ಬೆಳದಿಂಗಳು ಎಲ್ಲರ ಪಾತ್ರೆಗಳು
ತುಂಬಿವೆ ಅವರವರ ರುಚಿಗೆ, ಮತ್ತೆ
ಅವರಿವರ ಸ್ಥಿತಿಗತಿಗೆ ಕಂಡ ನೋಟದ ಒಳ ಹರವು
ಒಳಗೊಳಗೆ ಗಟ್ಟಿಯಾಗುವ ಕಾಯಕ, ಜಗದ ಕರುಣಿಯ
ತಿಳಿಗಾಳಿ ಗಂಧ ಸೂಸಿ ಅರಿತವರೆಲ್ಲಾ ಶರಣಬುದ್ದರು
ನಡೆನುಡಿಗಳ ಪಥದ ಜೀವ ದ್ರವ್ಯ ತಂಪು ಹನಿಹನಿಯಾಗಿ
ಎದೆಗಿಳಿದ ತಣ್ಣನೆಯ ರಾತ್ರಿ ಆತ್ಮಕಲ್ಯಾಣ ಲೋಕಕಲ್ಯಾಣ
ಕುದುರೆ ಏರಿ ಹೊರಟವರೆಲ್ಲರೂ, ಜೀವ ಪ್ರೀತಿಸಿ ದೇವ
ಪ್ರೀತಿಗೆ ಒಳಗಾದರು ಮತ್ತೆ ಪೂರ್ಣ ವಿಕಾಸದ ದಾರಿ
ನಿರ್ಮಾಣವಾಯಿತು ಎಲ್ಲಾ ಪರಂಪರೆಯ ಬೆಳದಿಂಗಳ
ಶೃತಿಯಲಿ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...