ಕವನ ಸೃಷ್ಠಿ

ಕವನ ಬರೆಯುವುದಷ್ಟು
ಸುಲಭದ ಕೆಲಸವಲ್ಲ
ತರಕಾರಿ ಅಕ್ಕಿ ಮಸಾಲೆ ಉಪ್ಪು
ನೀರು ಪಾತ್ರೆ ಪಡಗ ಎಲ್ಲಾ ಸಾಧನ
ಇದ್ದರೂ ಗೊತ್ತಿರಬೇಕಲ್ಲ
ಅಡುಗೆ ಮಾಡುವ ವಿಧಾನ

ಕವನ ಬರೆಯುವುದಷ್ಟು ಸುಲಭವಲ್ಲ
ಪದಗಳೆಲ್ಲವ ಒಟ್ಟುಗೂಡಿಸಿ
ತೂಗಿಸಿ ಅಳತೆ ಮಾಡಿ
ಜೋಡಿಸಿ ಕಳೆದು ಕೂಡಿ
ಗುಣಾಕಾರ ಭಾಗಾಕಾರ ಲೆಕ್ಕಾಚಾರ
ಮಾಡಿದರಷ್ಟೇ ಕವನ ಪ್ರಕಾರ.

ಕವನ ಬರೆಯುವುದಷ್ಟು ಸುಲಭವಲ್ಲ
ಹಾಲು ಬೆಳದಿಂಗಳ ತೊಟ್ಟಿಲಲ್ಲಿ
ಸಂಜೆಯ ತಂಬೆಲರಿನ ಜೋಗುಳ
ಮಿನುಗುವ ನಕ್ಷತ್ರಗಳ ಲಾಲಿ
ಭಾವನೆಗಳ ತಬ್ಬಿ ರಮಿಸಿ
ಲಾಲಿಸಿ ಲಲ್ಲೆಗರೆದು ಮುದ್ದು
ಮಾಡಿದಾಗಲೇ ಕವನದ ಹುಟ್ಟು.

ಕವನ ಬರೆಯುವುದಷ್ಟು ಸುಲಭವಲ್ಲ
ಚಿನ್ನದ ಅದಿರ ಕುಟ್ಟಿ ಕುಟ್ಟಿ
ಪುಡಿ ಮಾಡಿ ಕಾಯಿಸಿ ಕರಗಿಸಿ
ಪುಟಕ್ಕಿಟ್ಟಾಗಲೇ ಅಪರಂಜಿ
ಮಿಡಿದ ಭಾವನೆಗಳ ಕಟ್ಟಿ
ಉಡಿಸಿ ತೊಡಿಸಿ ಮುಡಿಸಿ
ಒನಪು ವೈಯ್ಯಾರ ಸಿಂಗಾರ
ಅಲಂಕಾರ ದೃಷ್ಟಿ
ಬೊಟ್ಟು ಇಟ್ಟಾಗಲೇ ಕವನದ ಸೃಷ್ಟಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಇದು ಇದ್ದರೆ ಅದು
Next post ಲಕ್ಷಣ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys