ಕವನ ಸೃಷ್ಠಿ

ಕವನ ಬರೆಯುವುದಷ್ಟು
ಸುಲಭದ ಕೆಲಸವಲ್ಲ
ತರಕಾರಿ ಅಕ್ಕಿ ಮಸಾಲೆ ಉಪ್ಪು
ನೀರು ಪಾತ್ರೆ ಪಡಗ ಎಲ್ಲಾ ಸಾಧನ
ಇದ್ದರೂ ಗೊತ್ತಿರಬೇಕಲ್ಲ
ಅಡುಗೆ ಮಾಡುವ ವಿಧಾನ

ಕವನ ಬರೆಯುವುದಷ್ಟು ಸುಲಭವಲ್ಲ
ಪದಗಳೆಲ್ಲವ ಒಟ್ಟುಗೂಡಿಸಿ
ತೂಗಿಸಿ ಅಳತೆ ಮಾಡಿ
ಜೋಡಿಸಿ ಕಳೆದು ಕೂಡಿ
ಗುಣಾಕಾರ ಭಾಗಾಕಾರ ಲೆಕ್ಕಾಚಾರ
ಮಾಡಿದರಷ್ಟೇ ಕವನ ಪ್ರಕಾರ.

ಕವನ ಬರೆಯುವುದಷ್ಟು ಸುಲಭವಲ್ಲ
ಹಾಲು ಬೆಳದಿಂಗಳ ತೊಟ್ಟಿಲಲ್ಲಿ
ಸಂಜೆಯ ತಂಬೆಲರಿನ ಜೋಗುಳ
ಮಿನುಗುವ ನಕ್ಷತ್ರಗಳ ಲಾಲಿ
ಭಾವನೆಗಳ ತಬ್ಬಿ ರಮಿಸಿ
ಲಾಲಿಸಿ ಲಲ್ಲೆಗರೆದು ಮುದ್ದು
ಮಾಡಿದಾಗಲೇ ಕವನದ ಹುಟ್ಟು.

ಕವನ ಬರೆಯುವುದಷ್ಟು ಸುಲಭವಲ್ಲ
ಚಿನ್ನದ ಅದಿರ ಕುಟ್ಟಿ ಕುಟ್ಟಿ
ಪುಡಿ ಮಾಡಿ ಕಾಯಿಸಿ ಕರಗಿಸಿ
ಪುಟಕ್ಕಿಟ್ಟಾಗಲೇ ಅಪರಂಜಿ
ಮಿಡಿದ ಭಾವನೆಗಳ ಕಟ್ಟಿ
ಉಡಿಸಿ ತೊಡಿಸಿ ಮುಡಿಸಿ
ಒನಪು ವೈಯ್ಯಾರ ಸಿಂಗಾರ
ಅಲಂಕಾರ ದೃಷ್ಟಿ
ಬೊಟ್ಟು ಇಟ್ಟಾಗಲೇ ಕವನದ ಸೃಷ್ಟಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಇದು ಇದ್ದರೆ ಅದು
Next post ಲಕ್ಷಣ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…