Home / ಕವನ / ಕವಿತೆ / ಕವನ ಸೃಷ್ಠಿ

ಕವನ ಸೃಷ್ಠಿ

ಕವನ ಬರೆಯುವುದಷ್ಟು
ಸುಲಭದ ಕೆಲಸವಲ್ಲ
ತರಕಾರಿ ಅಕ್ಕಿ ಮಸಾಲೆ ಉಪ್ಪು
ನೀರು ಪಾತ್ರೆ ಪಡಗ ಎಲ್ಲಾ ಸಾಧನ
ಇದ್ದರೂ ಗೊತ್ತಿರಬೇಕಲ್ಲ
ಅಡುಗೆ ಮಾಡುವ ವಿಧಾನ

ಕವನ ಬರೆಯುವುದಷ್ಟು ಸುಲಭವಲ್ಲ
ಪದಗಳೆಲ್ಲವ ಒಟ್ಟುಗೂಡಿಸಿ
ತೂಗಿಸಿ ಅಳತೆ ಮಾಡಿ
ಜೋಡಿಸಿ ಕಳೆದು ಕೂಡಿ
ಗುಣಾಕಾರ ಭಾಗಾಕಾರ ಲೆಕ್ಕಾಚಾರ
ಮಾಡಿದರಷ್ಟೇ ಕವನ ಪ್ರಕಾರ.

ಕವನ ಬರೆಯುವುದಷ್ಟು ಸುಲಭವಲ್ಲ
ಹಾಲು ಬೆಳದಿಂಗಳ ತೊಟ್ಟಿಲಲ್ಲಿ
ಸಂಜೆಯ ತಂಬೆಲರಿನ ಜೋಗುಳ
ಮಿನುಗುವ ನಕ್ಷತ್ರಗಳ ಲಾಲಿ
ಭಾವನೆಗಳ ತಬ್ಬಿ ರಮಿಸಿ
ಲಾಲಿಸಿ ಲಲ್ಲೆಗರೆದು ಮುದ್ದು
ಮಾಡಿದಾಗಲೇ ಕವನದ ಹುಟ್ಟು.

ಕವನ ಬರೆಯುವುದಷ್ಟು ಸುಲಭವಲ್ಲ
ಚಿನ್ನದ ಅದಿರ ಕುಟ್ಟಿ ಕುಟ್ಟಿ
ಪುಡಿ ಮಾಡಿ ಕಾಯಿಸಿ ಕರಗಿಸಿ
ಪುಟಕ್ಕಿಟ್ಟಾಗಲೇ ಅಪರಂಜಿ
ಮಿಡಿದ ಭಾವನೆಗಳ ಕಟ್ಟಿ
ಉಡಿಸಿ ತೊಡಿಸಿ ಮುಡಿಸಿ
ಒನಪು ವೈಯ್ಯಾರ ಸಿಂಗಾರ
ಅಲಂಕಾರ ದೃಷ್ಟಿ
ಬೊಟ್ಟು ಇಟ್ಟಾಗಲೇ ಕವನದ ಸೃಷ್ಟಿ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...