ವಚನ ವಿಚಾರ – ಇದು ಇದ್ದರೆ ಅದು

ವಚನ ವಿಚಾರ – ಇದು ಇದ್ದರೆ ಅದು

ಅಂಬುವಿಲ್ಲದಿರ್‍ದಡೆ ಅಂಬುಜವನಾರು ಬಲ್ಲರು
ನೀರಿಲ್ಲದಿರ್‍ದಡೆ ಹಾಲನಾರು ಬಲ್ಲರು
ನಾನಿಲ್ಲದಿರ್‍ದಡೆ ನಿನ್ನನಾರು ಬಲ್ಲರು
ನಿನಗೆ ನಾ
ನನಗೆ ನೀ
ನಿನಗೂ ನನಗೂ ಬೇರೊಂದು ನಿಜವುಂಟೆ
ನಿಃಕಳಂಕ ಮಲ್ಲಿಕಾರ್‍ಜುನಾ

[ಅಂಬು-ನೀರು, ಅಂಬುಜ-ತಾವರೆ, ನೀರಿಲ್ಲದಿರ್‍ದಡೆ-ನೀರಿಲ್ಲದಿದ್ದರೆ]

ಇದು ಮೋಳಿಗೆ ಮಾರಯ್ಯನ ವಚನ. ಅರ್‍ಥ ಅನ್ನುವುದು ಇರುವುದು ದ್ವಂದ್ವಗಳಲ್ಲೇ. ವ್ಯತ್ಯಾಸಗಳೇ ಇರದಿದ್ದರೆ ಅರ್ಥವೂ ಇಲ್ಲ, ಬೇಕಾಗಿಲ್ಲ.

ಅಂಬು ಇರದಿದ್ದರೆ ಅಂಬುಜ ಯಾರಿಗೆ ಗೊತ್ತಾಗುತ್ತದೆ? ಹೇಗೆ ಇರುತ್ತದೆ? ನೀರು ಇರುವುದರಿಂದಲೇ ಹಾಲು ಅನ್ನುವ ಪದಾರ್‍ಥಕ್ಕೆ ಅರ್‍ಥ ಮತ್ತು ಬೆಲೆ. ನಾನೇ ಇರದಿದ್ದರೆ ನೀನು ಅನ್ನುವುದಕ್ಕೆ ಅರ್‍ಥವೆಲ್ಲಿ? ನಾನು ಇರದಿದ್ದರೆ ನಿನ್ನನ್ನು ಅರ್‍ಥಮಾಡಿಕೊಳ್ಳುವವರಾದರೂ ಯಾರು? ‘ನಾನು’ ಅನ್ನುವುದು ಇರುವುದರಿಂದಲೇ ‘ನೀನು’ ಅನ್ನುವುದಕ್ಕೆ ಅರ್‍ಥ. ನಿಜ. ಆದರೆ ಈ ಎಲ್ಲ ಇಮ್ಮೈ ದ್ವಂದ್ವಗಳಿಗೂ ಇರುವ ನಿಜ ಮಾತ್ರ ಒಂದೇ.

ನನಗೂ ನಿನಗೂ ಬೇರೊಂದು ನಿಜವುಂಟೆ ಎಂದು ದೇವರನ್ನು ಕೇಳುತ್ತಾನೆ. ನನ್ನ ಸತ್ಯ ಬೇರೆ, ನಿನ್ನ ಸತ್ಯ ಬೇರೆ ಅನ್ನುವುದು ನಿಜವಲ್ಲ. ಸತ್ಯ ಅನ್ನುವುದು ಒಂದೇ, ಎರಡೆಂಬಂತೆ ಕಾಣುವ ದ್ವಂದ್ವಗಳೆಲ್ಲಕ್ಕೂ ಸತ್ಯವೇ ಆಧಾರ. ಅದನ್ನು ಹೇಳುವುದಲ್ಲ ಕಾಣಲು ಸಾಧ್ಯವಾಗಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಕವಿತೆ
Next post ಕವನ ಸೃಷ್ಠಿ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…