ಓ ಮನವೇ ಪ್ರೇಮ ಪೂಜಾರಿ

ಓ ಮನವೇ ಪ್ರೇಮ ಪೂಜಾರಿ ನಾನು
ನುಡಿಸುವ ವೀಣೆಯ ಶೃತಿಯೆ ನಾನು

ನುಡಿಯುವ ಮನದಾ ವೈಣಿಕ ಕೇಳೆ
ಕರೆವ ಕೊರಳ ಮಂಜುಳ ನಾದವೇ ನಾನು

ಭಾವದಿ ಕರೆವ ಭಾಮಿನಿ ಕೇಳೆ
ಮಧುರ ರಾಗಿ ಕರೆವ ತರಂಗಿಣಿ ನಾನು

ಅನುರಾಗದಿ ಕರೆವ ಆನಂದಿನಿ ಕೇಳೆ
ಮೋಹನ ಮುರಳಿಗಾನ ಸಖಿಯೇ ನಾನು

ಒಲಿದ ಮನದಾ ಮಾನಸೀ ಕೇಳೆ
ಸಪ್ತಸ್ವರ ಲಲಿತ ನಾಟ್ಯ ಮಯೂರಿ ನಾನು

ಚೈತ್ರಹೊನಲ ನಿತ್ಯೋತ್ಸವ ಕೇಳೆ
ಹೊಂಬೆಳಕ ಕಿರಣ ನವವಸಂತ ನಾನು

ಪ್ರೇಮ ಚಿತ್ತದೆ ಬೆರೆವೆ ಸ್ವಪ್ನಸುಂದರಿ ಕೇಳೆ
ತನ್ಮಯದೆ ಕಳೆವ ಹಂಸಗಮನೆ ನಾನು

ನಾನು ತಾನೆಂದ ಅರಿವ ಪ್ರಕೃತಿಯೆ ಕೇಳೆ
ಉಸಿರಾಗಿಹ ಹಸಿರ ಪ್ರೇರಕ ಪುರುಷನೇ ನಾನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿವನಾಮ
Next post ಸಂಜೆಯ ಬಿಸಿಲಿನ ಸತ್ಯ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…