ಓ ಮನವೇ ಪ್ರೇಮ ಪೂಜಾರಿ

ಓ ಮನವೇ ಪ್ರೇಮ ಪೂಜಾರಿ ನಾನು
ನುಡಿಸುವ ವೀಣೆಯ ಶೃತಿಯೆ ನಾನು

ನುಡಿಯುವ ಮನದಾ ವೈಣಿಕ ಕೇಳೆ
ಕರೆವ ಕೊರಳ ಮಂಜುಳ ನಾದವೇ ನಾನು

ಭಾವದಿ ಕರೆವ ಭಾಮಿನಿ ಕೇಳೆ
ಮಧುರ ರಾಗಿ ಕರೆವ ತರಂಗಿಣಿ ನಾನು

ಅನುರಾಗದಿ ಕರೆವ ಆನಂದಿನಿ ಕೇಳೆ
ಮೋಹನ ಮುರಳಿಗಾನ ಸಖಿಯೇ ನಾನು

ಒಲಿದ ಮನದಾ ಮಾನಸೀ ಕೇಳೆ
ಸಪ್ತಸ್ವರ ಲಲಿತ ನಾಟ್ಯ ಮಯೂರಿ ನಾನು

ಚೈತ್ರಹೊನಲ ನಿತ್ಯೋತ್ಸವ ಕೇಳೆ
ಹೊಂಬೆಳಕ ಕಿರಣ ನವವಸಂತ ನಾನು

ಪ್ರೇಮ ಚಿತ್ತದೆ ಬೆರೆವೆ ಸ್ವಪ್ನಸುಂದರಿ ಕೇಳೆ
ತನ್ಮಯದೆ ಕಳೆವ ಹಂಸಗಮನೆ ನಾನು

ನಾನು ತಾನೆಂದ ಅರಿವ ಪ್ರಕೃತಿಯೆ ಕೇಳೆ
ಉಸಿರಾಗಿಹ ಹಸಿರ ಪ್ರೇರಕ ಪುರುಷನೇ ನಾನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿವನಾಮ
Next post ಸಂಜೆಯ ಬಿಸಿಲಿನ ಸತ್ಯ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…