Home / ಕವನ / ಕವಿತೆ / ಸಂಜೆಯ ಬಿಸಿಲಿನ ಸತ್ಯ

ಸಂಜೆಯ ಬಿಸಿಲಿನ ಸತ್ಯ

ಬಿರು ಬೇಸಿಗೆಯ ಮಧ್ಯಾಹ್ನ ದೂರದಲ್ಲಿ
ಎಲ್ಲೋ ಚಹಾದ ಅಂಗಡಿಯಲಿ ರೇಡಿಯೋ
ಹಾಡುತ್ತಿದೆ. ರಸ್ತೆ ಇಲ್ಲದ ಊರ ಬಯಲಿನ
ತುಂಬ ಸೂರ್ಯ ಚಾಪೆ ಹಾಸಿದ್ದಾನೆ.
ಮಾವಿನ ಮರದಲ್ಲಿ ಹಕ್ಕಿಗಳು ನೆರಳಿಗೆ ಕುಳಿತಿವೆ.
ಮತ್ತು ಅಂಗಳದ ನೆರಳಿನಲ್ಲಿ ನಾಯಿ ಮಲಗಿದೆ.
ಚಹಾದ ಕಪ್ಪುಗಳು ಸಪ್ಪಳ ಮಾಡುತ್ತಿವೆ
ಅಡುಗೆ ಮನೆಯಲ್ಲಿ.

ತೆರೆದ ನೀಲಿ ಆಕಾಶದಲ್ಲಿ ಒಂದೂ ಮೋಡಗಳ
ತುಣುಕುಗಳು ಇಲ್ಲ. ಈ ಪುಟ್ಟ ಕಿಟಕಿಯ ಸಂದಿಯಿಂದ
ಆಕಾಶ ನನ್ನ ಕೋಣೆಯೊಳಗೆ ಬಂದಿದೆ. ಈಗ ಒಂದು
ಹೊಸ ಹಾಡು ಪದಗಳಿಗಾಗಿ ಹುಡುಕಾಡಿದೆ.
ಚಿಗುರುವ ಬೇವಿನ ಮರಗಳ ಹೂವಾಸನೆ ಹರಡಿದೆ.
ಗಾಳಿ ಈ ಮಧ್ಯಾಹ್ನ ಅವನ ನೆನಪು ಹೊತ್ತು ತಂದಿದೆ.
ಏಕಾಂತದ ಆಲಾಪಗಳು ಹರಿಯದೇ ಮೈತುಂಬ ಬೆವರು.
ಸೂರ್ಯ ಬಾಯಾರಿ ಕುಡಿಯುತ್ತಿದ್ದಾನೆ ನದಿಗಳ ನೀರು.

ಈ ಮಧ್ಯಾಹ್ನ ಬಹಳ ಕಠೋರವಾಗಿ ಸುಡುತಿದೆ
ತಾಯಿ ಮಗುವಿನ ಹಣೆಗೆ ತಣ್ಣೀರು ಪಟ್ಟಿ ಇಡುತ್ತಿದ್ದಾಳೆ.
ಆಸ್ಪತ್ರೆಯ ಮೂಲೆಯಲಿ, ದಮ್ಮು ಹೆಚ್ಚಾದ ಮುದುಕ
ಬಿಟ್ಟು ಬಿಡಲಾರದೇ ಕೆಮ್ಮುತ್ತಿದ್ದಾನೆ. ನೆನಪುಗಳ
ಮತ್ತೆ ಜೊತೆಗೆ ಬರುವ ಸಮಯ ಕೇಳುತ್ತಿದೆ
ಖಾಯಂ ವಿಳಾಸ. ನನ್ನೊಳಿಗಿನ ಹಲವು ಗುಟ್ಟುಗಳು
ಬಾಯಿ ಬಿಡುತ್ತಿಲ್ಲ. ರೇಜಿಗೆ ಸಿಟ್ಟು ಕುದಿದು. ಈ
ಸಂಜೆಯ ಸತ್ಯಗಳು ಎದೆಗೆ ಅಮರಿಸಿವೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...