ನಂದಾದೀಪ!


ಕೋಣೆಯ ಮೂಲೆಗೆ ಜಗುಲಿಯ ಕಟ್ಟಿ !
ಬೆಳ್ಳಿಯ ಮಂಟಪ ಮಾಡಿಸುತಿಟ್ಟಿ !
ಚಿನ್ನದ ಮುದ್ದಿಯ ಮೂರ್ತಿಯನಿಟ್ಟಿ !
ಎಡಬಲ ನಂದಾದೀಪಗಳಿಟ್ಟಿ !


ಹಗಲಿರುಳೆನ್ನದೆ ಕಾಯುತಲಿರುವಿ!
ತಾಳ ತಂತಿಗಳ ಬಾರಿಸುತಿರುವಿ !
ಸವಿ ಸವಿ ತಿಂಡಿಯ ತೋರಿಸುತಿರುವಿ !
ಪುಣ್ಯವಪಡೆಯಲು ಹವಣಿಸುತಿರುವಿ !


ಆರಿಗೆ ನಿನ್ನಯ ನಂದಾದೀಪ ?
ಕೋಣೆಯ ಮೂಲೆಗೆ ನಂದಾದೀಪ ?
ಚಿನ್ನದ ಮೂರ್ತಿಗೆ ನಂದಾದೀಪ ?
ಸೂರ್ಯನ ತಂದೆಗೆ ನಂದಾದೀಪ ?


ಏನಿದುನಿನ್ನಯ ನಂದಾದೀಪ!
ಮುದುಕರ ಮುಂಗೈ ಎಲುವಿನದೀಪ !
ಬಡವರ ಕರುಳಿನ ಬತ್ತಿಯದೀಪ !
ಹೃದಯದ ರಕ್ತದ ತೈಲದದೀಪ !


ನಿನಗೋ ನಿನಗೋ ನಂದಾದೀಪ !
ಬಡವನ ಗುಡಿಸಲಿ ಕತ್ತಲತಾಪ !
ನಿನಗೋ ನಿನಗೋ ಗೆಜ್ಜಿಯಕುಣಿತ !
ಬಡವನ ತಾಯಿಗೆ ಸರ್ಪದಕಡಿತ !


ಪುಣ್ಯವುಬೇಕೇ ಹೇಳುವೆಕೇಳು !
ನಿನ್ನೀ ನಂದಾದೀಪವು ಹಾಳು !
ದೂಡೋ ಬಡವನ ಕತ್ತಲ ಗೋಳು !
ಇಲ್ಲವೆ ದೇವರ ಕಂಗಳ ಕೀಳು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆಯ ಬಿಸಿಲಿನ ಸತ್ಯ
Next post ವಚನ ವಿಚಾರ – ಶರಣಾದವರಿಗೆ ಮಾತ್ರ ಗೊತ್ತು

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys