ನಂದಾದೀಪ!


ಕೋಣೆಯ ಮೂಲೆಗೆ ಜಗುಲಿಯ ಕಟ್ಟಿ !
ಬೆಳ್ಳಿಯ ಮಂಟಪ ಮಾಡಿಸುತಿಟ್ಟಿ !
ಚಿನ್ನದ ಮುದ್ದಿಯ ಮೂರ್ತಿಯನಿಟ್ಟಿ !
ಎಡಬಲ ನಂದಾದೀಪಗಳಿಟ್ಟಿ !


ಹಗಲಿರುಳೆನ್ನದೆ ಕಾಯುತಲಿರುವಿ!
ತಾಳ ತಂತಿಗಳ ಬಾರಿಸುತಿರುವಿ !
ಸವಿ ಸವಿ ತಿಂಡಿಯ ತೋರಿಸುತಿರುವಿ !
ಪುಣ್ಯವಪಡೆಯಲು ಹವಣಿಸುತಿರುವಿ !


ಆರಿಗೆ ನಿನ್ನಯ ನಂದಾದೀಪ ?
ಕೋಣೆಯ ಮೂಲೆಗೆ ನಂದಾದೀಪ ?
ಚಿನ್ನದ ಮೂರ್ತಿಗೆ ನಂದಾದೀಪ ?
ಸೂರ್ಯನ ತಂದೆಗೆ ನಂದಾದೀಪ ?


ಏನಿದುನಿನ್ನಯ ನಂದಾದೀಪ!
ಮುದುಕರ ಮುಂಗೈ ಎಲುವಿನದೀಪ !
ಬಡವರ ಕರುಳಿನ ಬತ್ತಿಯದೀಪ !
ಹೃದಯದ ರಕ್ತದ ತೈಲದದೀಪ !


ನಿನಗೋ ನಿನಗೋ ನಂದಾದೀಪ !
ಬಡವನ ಗುಡಿಸಲಿ ಕತ್ತಲತಾಪ !
ನಿನಗೋ ನಿನಗೋ ಗೆಜ್ಜಿಯಕುಣಿತ !
ಬಡವನ ತಾಯಿಗೆ ಸರ್ಪದಕಡಿತ !


ಪುಣ್ಯವುಬೇಕೇ ಹೇಳುವೆಕೇಳು !
ನಿನ್ನೀ ನಂದಾದೀಪವು ಹಾಳು !
ದೂಡೋ ಬಡವನ ಕತ್ತಲ ಗೋಳು !
ಇಲ್ಲವೆ ದೇವರ ಕಂಗಳ ಕೀಳು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆಯ ಬಿಸಿಲಿನ ಸತ್ಯ
Next post ವಚನ ವಿಚಾರ – ಶರಣಾದವರಿಗೆ ಮಾತ್ರ ಗೊತ್ತು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…