ವಚನ ವಿಚಾರ – ಶರಣಾದವರಿಗೆ ಮಾತ್ರ ಗೊತ್ತು

ವಚನ ವಿಚಾರ – ಶರಣಾದವರಿಗೆ ಮಾತ್ರ ಗೊತ್ತು

ಅರಿಯಬಹುದು ಕುರುಹಿಡಬಾರದು
ಭಾವಿಸಬಹುದು ಬೆರೆಸಬಾರದು
ಕಾಣಬಹುದು ಕೈಗೆ ಸಿಲುಕದು
ಅಖಂಡ ನಿರಾಳವ ಕಪಿಲಸಿದ್ಧಮಲ್ಲಿಕಾರ್ಜುನಾ
ನಿಮ್ಮ ಶರಣರು ಬಲ್ಲರು

[ನಿರಾಳ-ನೆಮ್ಮದಿ, ಖಚಿತ, ಅವ್ಯಕ್ತ, ಆಕಾಶ]

ಸಿದ್ಧರಾಮನ ವಚನ. ಕಪಿಲಸಿದ್ಧಮಲ್ಲಿಕಾರ್ಜುನ ಅಖಂಡ-ಇಡಿಯಾದವನು. ಅವನು ನಿರಾಳ, ಅವನನ್ನು ಅರಿಯಬಹುದು, ಆದರೆ ಅರಿತದದ್ದನ್ನು ಒಂದು ಕುರುಹು, ಗುರುತು ಎಂದು ಇತರರಿಗೆ ಅರ್ಥವಾಗುವ ಕುರುಹಿನ ವ್ಯವಸ್ಥೆಗೆ ಒಳಪಡಿಸಲು ಆಗದು. ಅವನನ್ನು ಭಾವಿಸಿಕೊಳ್ಳಬಹುದು. ಆದರೆ ಅವನೊಡನೆ ಬೆರೆಯುವುದು ಆಗದು. ಅವನು ಕಾಣಬಹುದು, ಆದರೆ ಕೈಗೆ ಸಿಗುವುದು ಅಸಾಧ್ಯ.

ಮಾತು ಎಂಬ ಕುರುಹಿಗೆ ದಕ್ಕದ, ಭಾವನೆ ಮಾತ್ರವಾಗಿ ಉಳಿದು ಒಂದಾಗಲು ಅಸಾಧ್ಯವಾದ, ಕಾಣುವ ಆದರೆ ಕೈಗೆ ಸಿಗದ ದೇವರನ್ನು ಕುರುಹಿಗೆ, ಒಗ್ಗೂಡಿಕೆಗೆ, ಕೈಗೆಟುಕಿಸಿಕೊಳ್ಳುವುದಕ್ಕೆ ವ್ಯರ್ಥವಾಗಿ ಹಂಬಲಿಸದೆ ದೇವರು ಇದ್ದಂತೆಯೇ ಅವನಿಗೆ ಶರಣಾಗುವವರು ಮಾತ್ರ ಅವನನ್ನು ಬಲ್ಲರು.

ನಮಗೆ ಆಗುವ ಯಾವುದೇ ಅನುಭವವಾದರೂ ಅಷ್ಟೆ. ಅದಕ್ಕೆ ಸಂಪೂರ್ಣ ಶರಣಾಗದೆ ಅದು ನಮ್ಮದಾಗದು. ದುರಂತವೆಂದರೆ ನಮಗೆ ಅನುಭವವಾಗುತ್ತಿರುವ ಕ್ಷಣದಲ್ಲೇ ಅದಕ್ಕೆ ಇತರರಿಗೆ ಅರ್ಥವಾಗಬಲ್ಲ, ನಮ್ಮ ಕೈಗೆ ವಶವಾಗಬಲ್ಲ ರೂಪ ಕೊಡುವುದರಲ್ಲಿ ತೊಡಗಿರುತ್ತೇವೆ. ಇದು ಶರಣಗುಣವಲ್ಲ, ಕಪಿಲಸಿದ್ಧಮಲ್ಲಿಕಾರ್ಜುನ ನಮ್ಮವನಾಗಲಾರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಂದಾದೀಪ!
Next post ಸುಖಜೀವನ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಜಂಬದ ಕೋಳಿ

    ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…

  • ಪ್ಲೇಗುಮಾರಿಯ ಹೊಡೆತ

    ಪ್ರಕರಣ ೧೩ ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ;… Read more…