ಬದುಕಿನ ರಣಾಂಗಣದೆ
ಮೋಹಪಾಶಗಳ ಬ್ರಹ್ಮಾಸ್ತ್ರ
ಬಂಧನದೆ ಬಳಲುವ
ಮನುಜನಿಗುಂಟೇ ಜೀವನ
ಹಣ ಅಧಿಕಾರ ಅಂತಸ್ತು
ಮಾಯಾಮೃಗದ ಬೆನ್ನೇರಿ
ನಿರಾಸೆಯ ಕೂಪಕ್ಕೆ ಬೀಳುವ
ಮನುಜನಿಗುಂಟೇ ಸುಖಜೀವನ
ನೂರೆಂಟು ಸಮಸ್ಯೆಗಳ
ಸುಳಿಯಲಿ ಸಿಕ್ಕು ಚಿಂತೆಯ
ಚಿತೆಯ ಮೇಲೆ ಬೇಯುವ
ಮನುಜನಿಗುಂಟೇ ಸುಖಜೀವನ
ಇಂದೇನು? ಮುಂದೇನು?
ನಾಳೆ ಹೇಗೋ ಏನೋ
ಭಯ ಆತಂಕದಿ ನೋಯುವ
ಮನುಜನಿಗುಂಟೇ ಸುಖಜೀವನ
ಯಾರಿಗಿದೆ ಸುಖಜೀವನ?
ಎಲ್ಲಿದೆ ಸುಖಜೀವನ?
ಹುಟ್ಟಿನಿಂದ ಸಾವಿನವರೆಗೂ
ಇದ್ದೇ ಇದೆ ಭವ ಬಂಧನ.
*****
Related Post
ಸಣ್ಣ ಕತೆ
-
ತಿಮ್ಮರಯಪ್ಪನ ಕಥೆ
ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…
-
ಹೃದಯದ ತೀರ್ಪು
ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
-
ಇರುವುದೆಲ್ಲವ ಬಿಟ್ಟು
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…