ನನ್ನವಳು ಬರುವಾಗ

ನನ್ನವಳು ಬರುವಾಗ
ಹಸಿರುಟ್ಟ ಹಾದಿಯಲ್ಲಿ
ಇಬ್ಬನ ಹನಿಗಳು
ಮುತ್ತಿನ ರಾಶಿಯಾಗಿ ಹೊಳೆದಿತ್ತು

ಜಾಣೆ ಅವಳು ಚೈತ್ರದರಸಿ
ಧಾರೆ ಎರೆದಾಳೆ ಮನತಣಿಸಿ
ಹೊನ್ನಗೆಂಪು ಹೂವು ಮೆರವಣೆಗೆಯಲಿ
ಅವಳ ಪ್ರೀತಿ ಸಂದೇಶ ನೀಡಿತ್ತು

ಹೊಲದ ಹಾದಿಯಲ್ಲಿ ನಡೆದು ಬರುವಾಗ
ಗೆಜ್ಜೆ ಕುಲುಕಿ ಮೌನದ ಮಾತಾಡಿ
ಅವಳ ಮನದ ಬಯಕೆಗಳು
ಹಸಿರಾಗಿ ಬಳ್ಳಿ ಬಳುಕಿತು

ಕೊಟ್ಟಾರೆ ಕೊಡುವಳು
ಮುತ್ತು ಮಾಣಿಕ್ಯ ಹೊನ್ನ
ಕಳಶ ಅವಳ ಪ್ರೀತಿಯೆ ಸೌಭಾಗ್ಯ
ಕಟ್ಯಾಳೆ ಅಸೀಮ ದುರ್ಗವನ್ನು

ಮುಂಗಾರು ಹೂ ಮಳೆಯಲ್ಲಿ
ಅವಳ ಕಣ್ಣ ನಕ್ಷತ್ರ ಹೊಳಪಲ್ಲಿ
ನನ್ನನ್ನು ಕಂಡಾಗ ಜನುಮದ
ಗೆಳತಿ ನನ್ನವಳು ಎಂದಿತು
ಅವಳ ಮೊಗವು ನಾಚಿತ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಧನೆಯ ದಾರಿ
Next post ನೀಲಿ ಆಕಾಶ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…