ನನ್ನವಳು ಬರುವಾಗ

ನನ್ನವಳು ಬರುವಾಗ
ಹಸಿರುಟ್ಟ ಹಾದಿಯಲ್ಲಿ
ಇಬ್ಬನ ಹನಿಗಳು
ಮುತ್ತಿನ ರಾಶಿಯಾಗಿ ಹೊಳೆದಿತ್ತು

ಜಾಣೆ ಅವಳು ಚೈತ್ರದರಸಿ
ಧಾರೆ ಎರೆದಾಳೆ ಮನತಣಿಸಿ
ಹೊನ್ನಗೆಂಪು ಹೂವು ಮೆರವಣೆಗೆಯಲಿ
ಅವಳ ಪ್ರೀತಿ ಸಂದೇಶ ನೀಡಿತ್ತು

ಹೊಲದ ಹಾದಿಯಲ್ಲಿ ನಡೆದು ಬರುವಾಗ
ಗೆಜ್ಜೆ ಕುಲುಕಿ ಮೌನದ ಮಾತಾಡಿ
ಅವಳ ಮನದ ಬಯಕೆಗಳು
ಹಸಿರಾಗಿ ಬಳ್ಳಿ ಬಳುಕಿತು

ಕೊಟ್ಟಾರೆ ಕೊಡುವಳು
ಮುತ್ತು ಮಾಣಿಕ್ಯ ಹೊನ್ನ
ಕಳಶ ಅವಳ ಪ್ರೀತಿಯೆ ಸೌಭಾಗ್ಯ
ಕಟ್ಯಾಳೆ ಅಸೀಮ ದುರ್ಗವನ್ನು

ಮುಂಗಾರು ಹೂ ಮಳೆಯಲ್ಲಿ
ಅವಳ ಕಣ್ಣ ನಕ್ಷತ್ರ ಹೊಳಪಲ್ಲಿ
ನನ್ನನ್ನು ಕಂಡಾಗ ಜನುಮದ
ಗೆಳತಿ ನನ್ನವಳು ಎಂದಿತು
ಅವಳ ಮೊಗವು ನಾಚಿತ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಧನೆಯ ದಾರಿ
Next post ನೀಲಿ ಆಕಾಶ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…