ನೀಲಿ ಆಕಾಶ

ಪ್ರತಿನಿತ್ಯ ಒಂದು ಹೊಸ ಅನುಭವ
ಹೊತ್ತ ಸೂರ್ಯ ಹುಟ್ಟಿ, ಜಗದ
ಜನರ ನೆರೆ ಕೂದಲ ಮಧ್ಯೆ ಒಂದು ನಗೆ,
ಒಂದು ಹಾಡು, ಮಲ್ಲಿಗೆ ಅರಳುತ್ತವೆ ಘಮ್ಮಗೆ.

ಒಲ್ಲದ ಮನಸ್ಸು ರಾತ್ರಿ ಕಳೆದು,
ಬಿಳಿ ಹಕ್ಕಿ ಹಾರಾಡುವ ನೀಲ ಬಾನಿನಲಿ
ಬೆಳಕಿನ ಕಿರಣಗಳು ಸೋಕಿದಾಗ,
ನಿತ್ಯ ನೂತನದ ನಡುಗೆ ಅಡುಗೆ, ಪ್ರೀತಿಯಲ್ಲಿ
ಕಾಮದಲ್ಲಿ ಸಂಗತಿಗಳು.

ಏನು ಮಾಡಬೇಕು, ಯಾವುದು ಹುಡಕಬೇಕು,
ಎನ್ನುವ ಮನಸ್ಸುಗಳ ದಾರಿಗುಂಟ ಮೂಡಿಸಿವೆ,
ಪಾದದ ಗುರುತುಗಳು. ಸಂತೆಯಲಿ ಬಿಸಿ ಚಹಾ ಹೀರಿ,
ಚಪ್ಪರಿಕೆಯ ಕನಸುಗಳು ಮೂಟೆಗಳು ಚಲಿಸಿವೆ ದಾರಿಗುಂಟ.

ಓಡುವವರ, ಓಡಿದವರ, ತಿಳಿದವರ ತಿಳಿಯದವರ
ಲೆಕ್ಕಾಚಾರಗಳನ್ನು ಲೆಕ್ಕ ಇಟ್ಟವರು ಇಲ್ಲಾ, ಈ
ಲೋಕದ ವಿಸ್ಮಯಗಳಲಿ, ವರ್ತನೆಯ ಪರಿವರ್ತನೆಯ,
ಆಕಾಶವಾಣಿ ಸುದ್ದಿಗಳು ಬಿತ್ತರಗೊಂಡಿವೆ ಬಯಲ ತುಂಬ.

ಸೋಲು ಗೆಲುವಿನ ಪದಗಳು ಸೇರಿದ ಮಹಾಕಾವ್ಯ
ಕೊನೆಯ ಕ್ಷಿತಿಜದ ತುಂಬ ಬೆಟ್ಟ ಸಾಲು ಹರಡಿ,
ಒಮ್ಮೊಮ್ಮೆ ಭೆಟ್ಟಿಯಾಗಿ ಮತ್ತೊಮ್ಮೆ ಛೇದಿಸಿ,
ಮಗುದೊಮ್ಮೆ ತುಂಬಿ, ಖಾಲಿಯಾಗುವ ನೀಲಿ
ಆಕಾಶ ನೀನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನವಳು ಬರುವಾಗ
Next post ಡೊಂಬರಾಟ!

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…