ಸಾಧನೆಯ ದಾರಿ

ದೇವರಲಿ ನಿನಗಿರಲಿ ವಿಶ್ವಾಸ ಅಚಲ
ಆಗದಿರಲಿ ನಿನ್ನ ಮನಸ್ಸು ಚಂಚಲ
ಶುದ್ಧ ಮನವೇ ಆತ್ಮದ ಪ್ರತಿರೂಪ
ನಿನ್ನಲ್ಲೆ ಉದಯಿಸುವದು ಪುಣ್ಯ ಪಾಪ

ಮನ ಧ್ಯಾನದಲ್ಲಿರಲಿ ಸದಾ ಪರಿಪಕ್ವತೆ
ಮಾಡದಿರು ಇನ್ನೋರ್ವರಲಿ ಅಪಖ್ಯಾತಿ
ಸಾಧನೆಯ ದಾರಿಯಲಿ ಗಂಭೀರನಾಗಿರು
ಹೆಜ್ಜೆ ಹೆಜ್ಜೆಗೂ ನಿತ್ಯ ಸತ್ಯವಂತನಾಗಿರು

ನಿನ್ನ ಮನಸ್ಸಿನ ಭಾವ ಪರೀಕ್ಷೆ ಮಾಡು
ಎಲ್ಲಾದರೂ ನಿನ್ನನ್ನು ತಪ್ಪಿಸುತ್ತಿದೆಯೊ ನೋಡು
ಕ್ಷಣ ಕ್ಷಣಕ್ಕು ಚಿತ್ರಕ್ಕೆ ನಿಯಂತ್ರಣ ವಿರಲಿ
ಸ್ಥಿರಮನದ ಮಧ್ಯದಲ್ಲಿ ದೇವನಾಮಂತ್ರ ವಿರಲಿ

ಮನವು ಅಂತರಮುಖವಾದ ಹಾಗೆ
ಹೊರಗಿನ ಪ್ರಪಂಚದ ವೈರಾಗ್ಯವಾಗೆ
ದೇವರೊಂದೇ ಸತ್ಯ ಉಳಿದೆಲ್ಲ ಮಿಥ್ಯೆ
ಮಾಣಿಕ್ಯ ವಿಠಲ ತೊರೆದೇನು ಮತ್ತೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೪
Next post ನನ್ನವಳು ಬರುವಾಗ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys