ಬರಗಾಲ ಬಂದೈತೆ

ಬರಗಾಲ ಬಂದೈತೆ
ಭೂ ತಾಯಿ ಒಡಲು ಸುಡುತೈತೆ||

ರೈತನ ಭವಣೆಗೆ ಕೊನೆಯಿಲ್ಲಾ
ಜನ ಜಾನುವಾರುಗಳಿಗೆ ನೀರು ನೆರಳಿಲ್ಲ|
ಉಣಲು ಬಣವಿಯಲಿ ಹುಲ್ಲಿಲ್ಲ
ಮನೆಯಲಿ ಬೇಳೆ ಕಾಳುಗಳಿಲ್ಲ||

ಹಸುಗೂಸಿಗೆ ಅನ್ನ ಹಾಲದಿಲ್ಲ
ಬೆಟ್ಟ ಗುಡ್ಡಗಳಿಗೆ ಹಸಿರು ಚಾದರವಿಲ್ಲ|
ಮರಗಿಡಗಳಲಿ ಎಲೆಗಳೊಂದಿಲ್ಲ
ಹಕ್ಕಿ ಚಿಲಿಪಿಯ ದನಿಯಿಲಿ ಕಂಪಿಲ್ಲ
ದುಂಬಿ ಝೇಂಕಾರವಿಲ್ಲ ಸದ್ದಿಲ್ಲ||

ಬಾ ಮಳೆರಾಯ ಬಾ|
ಬತ್ತಿದೆದೆಯ ಬರಡಾದ ನೆಲಕೆ
ಜೀವಸಂಜೀವಿನಿಯಾಗಿ ನೀ ಬಾ|
ಮೂರುಪಾಲ ನೀರು ಭೂಮಿಯಲಿದ್ದರೇನು
ಮಳೆ ನೀರುಣಿಸದ ಭೂಮಿ
ಬೆಳೆಯುವುದೇ ಧಾನ್ಯ ಸಂಪತ್ತು|
ನೀ ಬಾರದಿರೆ ಭೂಮಿಗೇ ಆಪತ್ತು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನ್ಸರ್ ಮಾತು
Next post ಗೂಢಗುಂಜನ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…