ಬರಗಾಲ ಬಂದೈತೆ

ಬರಗಾಲ ಬಂದೈತೆ
ಭೂ ತಾಯಿ ಒಡಲು ಸುಡುತೈತೆ||

ರೈತನ ಭವಣೆಗೆ ಕೊನೆಯಿಲ್ಲಾ
ಜನ ಜಾನುವಾರುಗಳಿಗೆ ನೀರು ನೆರಳಿಲ್ಲ|
ಉಣಲು ಬಣವಿಯಲಿ ಹುಲ್ಲಿಲ್ಲ
ಮನೆಯಲಿ ಬೇಳೆ ಕಾಳುಗಳಿಲ್ಲ||

ಹಸುಗೂಸಿಗೆ ಅನ್ನ ಹಾಲದಿಲ್ಲ
ಬೆಟ್ಟ ಗುಡ್ಡಗಳಿಗೆ ಹಸಿರು ಚಾದರವಿಲ್ಲ|
ಮರಗಿಡಗಳಲಿ ಎಲೆಗಳೊಂದಿಲ್ಲ
ಹಕ್ಕಿ ಚಿಲಿಪಿಯ ದನಿಯಿಲಿ ಕಂಪಿಲ್ಲ
ದುಂಬಿ ಝೇಂಕಾರವಿಲ್ಲ ಸದ್ದಿಲ್ಲ||

ಬಾ ಮಳೆರಾಯ ಬಾ|
ಬತ್ತಿದೆದೆಯ ಬರಡಾದ ನೆಲಕೆ
ಜೀವಸಂಜೀವಿನಿಯಾಗಿ ನೀ ಬಾ|
ಮೂರುಪಾಲ ನೀರು ಭೂಮಿಯಲಿದ್ದರೇನು
ಮಳೆ ನೀರುಣಿಸದ ಭೂಮಿ
ಬೆಳೆಯುವುದೇ ಧಾನ್ಯ ಸಂಪತ್ತು|
ನೀ ಬಾರದಿರೆ ಭೂಮಿಗೇ ಆಪತ್ತು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನ್ಸರ್ ಮಾತು
Next post ಗೂಢಗುಂಜನ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys