Home / ಕವನ / ಕವಿತೆ / ಗೂಢಗುಂಜನ

ಗೂಢಗುಂಜನ

(ಒಂದು ಅಣಕ)


ಬಾ, ಬಾರ ಸಾಂತಿ, ಈ ಊರ ಸಂತಿ ಯಾ-
ವಾರವೇನೊ….ಆಂತಿ !
ಯಾ ವಾರವೇನು ? ಮುಳ್ಳಾಗ ಜೇನು ತಲಿ-
ಯಾಗ ಹೇನು ಚಿಂತಿ !
ಬಡಿದೀತು ಭ್ರಾಂತಿ, ತಡಿದೀತು ತಂತಿ ಈ
ಪೊಡವಿ ಗುಂತಗುಂತಿ !
ಆಡುವದು ಸಾಕ, ಹಾಡೊಂದ ಬೇಕ, ಮಿಡಿ-
ಮಿಡಿಯ ಕರಳ ತಂತಿ !


ಹಾಸ್ಯಾವ ಕುಂಬಳದ ಬಳ್ಳಿ, ನಿಂದು ಬಲು ತಳ್ಳಿ
ಹಚ್ಚ ಬ್ಯಾಡ ಕೊಳ್ಳಿ –
ಕುಂಬಳದ ಕಾಯಿ ಹುಂಬರಿಗು ತಾಯಿ ಹಂ-
ಬಲಿಸಬ್ಯಾಡ ಮಳ್ಳೀ !
ನೀ ಮಳ್ಳಿ ತಿಂತಿದಿಯ ಹುಳ್ಳಿ ಹಸಿಯ ಈ-
ರುಳ್ಳಿ ಊರು ಹಳೆಹಳ್ಳಿ-
ನಿನ ಹಳ್ಳಿ ಸುತ್ತು ಬರಿ ಎಮ್ಮಿ-ಎತ್ತು, ಬೆಳ-
ದಽದ ಸಾಲುಗಳ್ಳಿ !


ಸಂದಿ ಸಂದಿ ತಿರಗತಾವ ಹಂದಿ, ಎಲ್ಲ ತುರ-
ಮಂದಿ ನಾಡಿನ್ಯಾಗ-
ತುರಮಂದಿಯೊಳಗ ತಾಯ್-ತಂದಿ ಹುಡಿಕಿದರ
ಸಿಗುವ ಬಗೀ ಹ್ಯಾಂಗ ?
ಅಂಗಡಿಯ ಮುಂದ ಗೊಂಗಡಿಯನೊಂದ ಜಂ-
ಗಮಗ ನೀಡಿ ನಿಲ್ಲಽ-
ಎಲ್ಲಾರ ಕಿವಿಗೆ ಕೇಳಿಸಲಿ ಕವಿಗೆ ಆ-
ಗಸದ ರವಿಗೆ ಸೊಲ್ಲಽ!


ಬಿದ್ದದ್ದು ಬೀಳು ಎದ್ದದ್ದು ಏಳು, ಮಿ-
ಕ್ಕಿದ್ದು ಬಾಳು ಕೇಳು !
ಬಾಳನ್ನ ಸೀಳು, ಗೋಳನ್ನ ತಾಳು; ಕಾ-
ಳನ್ನ ತೂರಲೇಳು !
ನಿನ್ನೊಡಲ ಸಿಡಿಲು ಸಿಡಿದಾತು ಕಡಲು ಕಡೆ-
ಯೆಲ್ಲಿ ಅದಕ ಹೇಳು!
ಕಡೆಯಿರದ ಕಡಲು ಸುಡಸುಡನೆ ಸುಡಲು ಮ್ಯಾಲ್
ಮೂಡಿತೊಂದು ಚೇಳು !


ಆಡಾಽಕ ನಿಂತಿ ನೀ ಪಗಡಿ ಎಲ್ಲ ತಾರಾ ತಿಗಡಿ
ಮೂಗ್ಗೆ ಬಂತು ನೆಗಡಿ-
ಮೊದಲಽನ ಇದ್ದೀದಿಯ ಸೊಗಡಿ, ಹಲ್ಲು ಬಿದ್ದ
ಬಗಡಿ ಹಾಂಗ ನಿನ್ನ ಬುಗಡಿ !
ಸವಿಯೆನಿಸಬೇಕು ಹ್ಯಾಂಗ ಕೂಳು, ತಿಂಬುದೆಲ್ಲ ಹಾಳು
ಇಲ್ಲದಕ ಸ್ವಾದಾ!
ಅಸ್ವಾದದೊಳಗ ಸುಸ್ವಾದ ಕಾಣಬೇಕಽ
ನಾದ ಕೇಳು ಪಡಿಸಾದಾ !


ಹುಲಿ ಕರಡಿ ತುಂಬಿರುವ ಮರಡಿ ನೋಡ ನೀ
ಕುರಡಿ ಕಂಗಳಿದ್ದು-
ಮರಡ್ಯಾಗ ಸಂತಿ ಸೇರೇದ ಹಂತಿ, ತಿಂ-
ದೀಯ ಪೆಟ್ಟು ಬಿದ್ದು !
ಗೋಕಾಂವಿ ಬೇಕೊ, ಬಾದಾಂವಿ ಬೇಕೊ, ಬೆಳ-
ಗಾಂವಿ ಸಂತಿ ಬೇಕೋ ?
ಗೋಕಾಂವಿ ಬೆಲ್ಲ, ಬಾದಾಂವಿ ಆಲ್ಲ, ಬೆಳ-
ಗಾಂವಿ ಬೆಳಕೆ ಬೆಳಕೋ !
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...