ಜೀವನವೆಂದರೆ ಬರೀ

ಜೀವನವೆಂದರೆ ಬರೀ
ದುಡ್ಡಿನ ದುಡಿಮೆಯದಲ್ಲಾ|
ಜೀವನವೆಂದರೆ ಬರೀ
ಸದಾ ಸಮಯದ ಹಿಂದೆ ಓಡುವುದಲ್ಲಾ||

ಜೀವನವೆಂದರೆ ಬರೀ
ಇತರರಿಗೆ ನ್ಯಾಯ ಹೇಳುವದಲ್ಲ
ಜೀವನವೆಂದರೆ ಬರೀ
ಓದು ಬರೆಯುವುದಲ್ಲಾ|
ಜೀವನವೆಂದರೆ ಬರೀ
ನೀತಿಯ ಪಾಠವ ಬೋದಿಸುವುದಲ್ಲ
ಜೀವನವೆಂದರೆ ಬರೀ
ನಿಯಮಾವಳಿಯ ಮಾಡುವುದಲ್ಲ||

ಜೀವನವೆಂದರೆ ಬರೀ
ಪುಸ್ತಕ ಬದನೆಯ ತಿಳಿಯುವದಲ್ಲ
ಜೀವನವೆಂದರೆ ಬರೀ
ಹಾಡನು ಹಾಡುವುದಲ್ಲಾ|
ಜೀವನವೆಂದರೆ ಬರೀ
ಇತರರಿಗೆ ಬೆರಳುಮಾಡಿ ತೋರುವುದಲ್ಲ
ಜೀವನವೆಂದರೆ ಬರೀ
ಒಬ್ಬನೇ ಬದುಕಿ ಸಾದಿಸಿ ಹಿಗ್ಗುವುದಲ್ಲ||

ಜೀವನವೆಂದರೆ ಸುಖ ಅಸುಖಗಳನುಭವಿಸಿ
ಜೀವನ ಮೌಲ್ಯಗಳ ಸಾದಿಸಿ ಸಂಪಾದಿಸಿ
ಆದರ್‍ಶಮಾರ್‍ಗದಿ ನಡೆದು ತೋರಿಸುವುದು|
ಧರ್ಮ ಎತ್ತಿಹಿಡಿದು ಬೆಳಗಿಸಿ
ಸತ್ಯಪಾರದರ್ಶಕತೆಯಲಿ ನಡೆದು
ನೀತಿ ಪ್ರೀತಿ ಸೌಹಾರ್‍ದತೆಯಲಿ
ಒಂದಾಗಿ ಬಾಳಿ ಬದುಕುವುದೆಂದರ್‍ಥ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಂದಮನೆ
Next post ಚೆಲುವು-ಒಲವು

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…