Home / ಕವನ / ಕವಿತೆ / ಉದಯಿಸಲಿ ಮತ್ತೊಮ್ಮೆ

ಉದಯಿಸಲಿ ಮತ್ತೊಮ್ಮೆ

ಉದಯಿಸಲಿ ಮತ್ತೊಮ್ಮೆ
ಕನ್ನಡದ ಕಣ್ಮಣಿಗಳು|
ಉದಯಿಸಲಿ ಮತ್ತೊಮ್ಮೆ
ಹಿಂದಿನ ಕನ್ನಡದ ಅದ್ವಿತೀಯ
ಅತಿರಥ ಮಾಹಾರಥರು||

ರಾಷ್ಟ್ರಕವಿ ಕುವೆಂಪು
ವರಕವಿ ಬೇಂದ್ರೆಯಂತವರು|
ಕಡಲ ಭಾರ್ಗವ ಕಾರಂತ,
ಪು.ತಿ.ನಾ, ಗೋಕಾಕಂತವರು|
ಮತ್ತೆ ಬೆಳೆಸಲು ಕನ್ನಡದ ಆಸ್ತಿಯನು
ಬರಲೊಮ್ಮೆ ನಮ್ಮಲ್ಲೊಬ್ಬರು ಮಾಸ್ತಿಯಂತವರು|
ಪದ ರತ್ನಗಳ ಬಿಡಿಸಲ್ಲೊಬ್ಬ ರಾಜರತ್ನಂ
ಮಂಕುತಿಮ್ಮನ ಕಗ್ಗದಂತೆ
ಮತ್ತೆ ಬಾರಿಸಲು ಕನ್ನಡ ಡಿಂಡಿಮ||

ಹುಟ್ಟಿಬರಲಿ ಮತ್ತೆ
ಗದುಗಿನ ಕುಮಾರವ್ಯಾಸರಂತವರು|
ಉದಯಿಸಲಿ ಮತ್ತೊಮ್ಮೆ
ರನ್ನ ಪಂಪ ಜನ್ನ ಪೊನ್ನ
ಹುಟ್ಟಿಬರಲಿ ಮತ್ತೆ
ಸರ್ವಜ್ಞ ಬಸವ ಅಲ್ಲಮ ಶರೀಫ
ಅಕ್ಕಮಾಹಾದೇವಿಯಂತವರು|
ಉದಯಿಸಲಿ ಮಗದೊಮ್ಮೆ
ಹರಿಹರ ರಾಘವಾಂಕ ನೃಪತುಂಗರಂತ
ಮಹಾ ಕವಿಗಳು||

ಹುಟ್ಟಿ ಬರಲಿ ಮತ್ತೆ
ಪಂಡಿತ್ ಭೀಮಸೇನ ಜೋಯಿಸ
ಗಂಗುಭಾಯಿ ಹಾನಗಲ್|
ಪುನರಪಿಸಲಿ ಮತ್ತೆ
ಪಂಡಿತ್ ಬಸವರಾಜ ರಾಜಗುರು
ಪಂಚಾಕ್ಷರಿ ಗವಾಯಿಯರು|
ಉದಯಿಸಲಿ ಇನ್ನೊಮ್ಮೆ
ಸಂಗೊಳ್ಳಿ ರಾಯಣ್ಣ
ಸಂಚಿ ಹೊನ್ನಮ್ಮನಂತವರು|
ಉದಯಿಸಲಿ ಇನ್ನೊಮ್ಮೆ
ಬೆಳವಡಿ ಮಲ್ಲಮ್ಮ
ಕಿತ್ತೂರ ರಾಣಿ ಚೆನ್ನಮ್ಮಾಜಿಯಂತವರು
ಹುಟ್ಟಿಬರಲಿ ಮತ್ತೊಮ್ಮೆ ಮಗದೊಮ್ಮೆ
ವರನಟ ಮುತ್ತು ರಾಜಕುಮಾರಂತವರು||

ಉದಯಿಸಲಿ ಇನ್ನೊಮ್ಮೆ
ಕನಕ ಪುರಂದರ ದಾಸವರೇಣ್ಯರು
ಹಾಸ್ಯ ರತ್ನ ರಾಮಕೃಷ್ಣ|
ಉದಯಿಸಲಿ ಇನ್ನೊಮ್ಮೆ
ಸಿ.ವಿ. ರಾಮನ್‌ನಂತವರು|
ಭಾರತರತ್ನ ವಿಶ್ವೇಶ್ವರಯ್ಯನಂತವರು
ಮೊಳಗಿಸಲಿ ಎಲ್ಲೆಡೆ ಕನ್ನಡದ ಕಹಳೆಯನು||
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...