Home / ಕವನ / ಕವಿತೆ / ಉದಯಿಸಲಿ ಮತ್ತೊಮ್ಮೆ

ಉದಯಿಸಲಿ ಮತ್ತೊಮ್ಮೆ

ಉದಯಿಸಲಿ ಮತ್ತೊಮ್ಮೆ
ಕನ್ನಡದ ಕಣ್ಮಣಿಗಳು|
ಉದಯಿಸಲಿ ಮತ್ತೊಮ್ಮೆ
ಹಿಂದಿನ ಕನ್ನಡದ ಅದ್ವಿತೀಯ
ಅತಿರಥ ಮಾಹಾರಥರು||

ರಾಷ್ಟ್ರಕವಿ ಕುವೆಂಪು
ವರಕವಿ ಬೇಂದ್ರೆಯಂತವರು|
ಕಡಲ ಭಾರ್ಗವ ಕಾರಂತ,
ಪು.ತಿ.ನಾ, ಗೋಕಾಕಂತವರು|
ಮತ್ತೆ ಬೆಳೆಸಲು ಕನ್ನಡದ ಆಸ್ತಿಯನು
ಬರಲೊಮ್ಮೆ ನಮ್ಮಲ್ಲೊಬ್ಬರು ಮಾಸ್ತಿಯಂತವರು|
ಪದ ರತ್ನಗಳ ಬಿಡಿಸಲ್ಲೊಬ್ಬ ರಾಜರತ್ನಂ
ಮಂಕುತಿಮ್ಮನ ಕಗ್ಗದಂತೆ
ಮತ್ತೆ ಬಾರಿಸಲು ಕನ್ನಡ ಡಿಂಡಿಮ||

ಹುಟ್ಟಿಬರಲಿ ಮತ್ತೆ
ಗದುಗಿನ ಕುಮಾರವ್ಯಾಸರಂತವರು|
ಉದಯಿಸಲಿ ಮತ್ತೊಮ್ಮೆ
ರನ್ನ ಪಂಪ ಜನ್ನ ಪೊನ್ನ
ಹುಟ್ಟಿಬರಲಿ ಮತ್ತೆ
ಸರ್ವಜ್ಞ ಬಸವ ಅಲ್ಲಮ ಶರೀಫ
ಅಕ್ಕಮಾಹಾದೇವಿಯಂತವರು|
ಉದಯಿಸಲಿ ಮಗದೊಮ್ಮೆ
ಹರಿಹರ ರಾಘವಾಂಕ ನೃಪತುಂಗರಂತ
ಮಹಾ ಕವಿಗಳು||

ಹುಟ್ಟಿ ಬರಲಿ ಮತ್ತೆ
ಪಂಡಿತ್ ಭೀಮಸೇನ ಜೋಯಿಸ
ಗಂಗುಭಾಯಿ ಹಾನಗಲ್|
ಪುನರಪಿಸಲಿ ಮತ್ತೆ
ಪಂಡಿತ್ ಬಸವರಾಜ ರಾಜಗುರು
ಪಂಚಾಕ್ಷರಿ ಗವಾಯಿಯರು|
ಉದಯಿಸಲಿ ಇನ್ನೊಮ್ಮೆ
ಸಂಗೊಳ್ಳಿ ರಾಯಣ್ಣ
ಸಂಚಿ ಹೊನ್ನಮ್ಮನಂತವರು|
ಉದಯಿಸಲಿ ಇನ್ನೊಮ್ಮೆ
ಬೆಳವಡಿ ಮಲ್ಲಮ್ಮ
ಕಿತ್ತೂರ ರಾಣಿ ಚೆನ್ನಮ್ಮಾಜಿಯಂತವರು
ಹುಟ್ಟಿಬರಲಿ ಮತ್ತೊಮ್ಮೆ ಮಗದೊಮ್ಮೆ
ವರನಟ ಮುತ್ತು ರಾಜಕುಮಾರಂತವರು||

ಉದಯಿಸಲಿ ಇನ್ನೊಮ್ಮೆ
ಕನಕ ಪುರಂದರ ದಾಸವರೇಣ್ಯರು
ಹಾಸ್ಯ ರತ್ನ ರಾಮಕೃಷ್ಣ|
ಉದಯಿಸಲಿ ಇನ್ನೊಮ್ಮೆ
ಸಿ.ವಿ. ರಾಮನ್‌ನಂತವರು|
ಭಾರತರತ್ನ ವಿಶ್ವೇಶ್ವರಯ್ಯನಂತವರು
ಮೊಳಗಿಸಲಿ ಎಲ್ಲೆಡೆ ಕನ್ನಡದ ಕಹಳೆಯನು||
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...