ಶೃಂಗಾರ ಕಾವ್ಯ

ಶೃಂಗಾರ ಕಾವ್ಯ ರಚಿಸುವೆ
ನೀ ಸಹಕರಿಸಿದರೆನಗೆ|
ಶೃಂಗಾರತೆಯ ವಿರಚಿಸುವೆ
ಅಮರ ಪ್ರೇಮಿಯಾಗಿ
ನಿನ್ನ ಸಹಯೋಗದೊಳಗೆ||

ನಾ ಬರೆಯಲನುವಾಗೆ
ತೆರೆದಿಡುವೆಯ ನಿನ್ನಯ
ಸಿರಿ ಸೌಂದರ್‍ಯ ಪುಟವ|
ಮೋಹ ಮನ್ಮಥನಾಗಿ ರಚಿಸುವೆ
ನೂತನ ರತಿ ಸಂವಿಧಾನ|

ಬೆತ್ತಲ ಕಾಳಿರುಳ ಹೊದ್ದು
ಬೆವರ ಮಡಿಯಲಿ ಮಿಂದು|
ಬಿಸಿಯುಸಿರಲಿ ಸೇರಿ ಬೆರೆತು
ತನುಮನಗಳೊಂದಾಗಿ ಬೆಸೆದು
ಇಬ್ಬರೊಂದೇ ದಾಂಪತ್ಯಸುಖಾನಂದವ
ಹೊಂದಲು ಸಹಕರಿಸುವೆಯಾ||

ತನುವಿನೊಳಗಿನ ಯೌವನದ
ಬೆಂಕಿಯ ಆರಿಸಲನುವಾಗು|
ಬೀಜಗಟ್ಟಿದ ಕಾರ್‍ಮೊಡಗಳು ಮರ್‍ದಿಸಿ
ಮಿಂಚು ಮೇಳೈಸಿ ಮಳೆ ಸುರಿಯುವಂದದಿ|
ಪ್ರಕೃತಿ ಪುರುಷತನ
ಬಳಸೊಂದು ಶೃಂಗಾರ
ಕಾವ್ಯ ರಚಿಸಲಣಿಯಾಗುವೆಯಾ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕು
Next post ಕಾರಹುಣ್ಣಿವೆ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys