Home / ಕವನ / ಕವಿತೆ / ಕಾರಹುಣ್ಣಿವೆ

ಕಾರಹುಣ್ಣಿವೆ

ಬಾರ ಕಾರಹುಣ್ಣಿವೆ,
ದೈವದ ಕಾರುಣ್ಯವೆ!


ದೂರದಿಂದ ನಿನ್ನ ವಾರ್ತೆ
ಹಾರಿ ಸಾರಿ ಬರುತಲಿದೆ….
ಹಾರಯಿಸುತ ನಿನ್ನ ಬರವ
ದಾರಿ ಕಾಯ್ವೆನೆಂದಿನಿಂದೆ ;
ಬಾರ ಕಾರಹುಣ್ಣಿವೆ,
ನಮ್ಮೆಲ್ಲರ ಪುಣ್ಯವೆ?


ಬಡವರ ಬರಿಯೊಡಲಿನಂತೆ
ಬರಿದು ಬರಿದು ಬಾನೆಲ್ಲಾ….
ಉಡಿಗೆಯಿರದ ಗರತಿಯಂತೆ
ತೆರಹು ತರಹು ಬುವಿಯೆಲ್ಲಾ!
ಬಾರ ಕಾರಹುಣ್ಣಿವೆ,
ವೈಭವ ಸಂಪೂರ್ಣವೆ!


ಸೋಗೆನವಿಲು ವೈಶಾಖದ
ಬೇಗೆಗಳುಕಿ ಮಿಡುಕುತಿವೆ….
ಕೇಗು ಕುಣಿತ ಮರೆದು ನಿನ್ನ
ಆಗಮನಕೆ ದುಡುಕುತಿವೆ;
ಬಾರ ಕಾರಹುಣ್ಣಿವೆ,
ರಸಜನ ಸನ್ಮಾನ್ಯವೆ!


ರವಿ ಬೆಳಗಿದ, ಬಂದಿತೇನು ?
ಶಶಿ ತೊಳಗಿದ ಸಂದಿತೇನು ?
ಹಸಿದಾತನ ಕಣ್ಣು ಕುರುಡು,
ಬೆಳಗು ಬೈಗು ಸಮವೆ ಎರಡು !
ಬಾರ ಕಾರಹುಣ್ಣಿವೆ,
ಕ್ಷುಧಿತ ಜನಶರಣ್ಯವೆ!


ಕರ್‍ಮೋಡದ ತೆರೆಯ ಬಾನ
ಮಾಡಿ ನಿನ್ನ ಕುಣಿತದಾಣ
ಕೋಲ್‌ಮಿಂಚಿನ ಕತ್ತಿಹಿಡಿದು
ಗುಡುಗಿನ ಅಡಿಗೆಜ್ಜೆ ಜಡಿದು.
ಬಾರ ಕಾರಹುಣ್ಣಿವೆ,
ನಟಸಂಕುಲಗಣ್ಯವೆ !


ಹಳೆಯ ಹುಲ್ಲು-ಗಿಡ-ಮರ ಹೊಸ
ಮಳೆಗೆ ತಳಿರಲಾಶಿಸುತಿವೆ ;
ನೆಲದಿ ಹುದುಗಿದೆನಿತೊ ಬೀಜ
ಮೊಳೆತು ಬೆಳೆಯಲೆಳಸುತಿವೆ….
ಬಾರ ಕಾರಹುಣ್ಣಿವೆ,
ಪ್ರಕೃತಿಯ ಚೈತನ್ಯವೆ!


ಎದೆಯರಳುವ ಚೆಲುವ ಸಲಿಸಿ
ಒಡಲ ಹೊರೆವ ಬೆಳಸ ಬೆಳಸಿ
ಗುರಿಯ ಗೆಲುವ ನೆಲೆಯ ತಿಳಿಸಿ
ಧರೆಯೊಳೆ ಸುರಲೋಕ ನೆಲಸಿ
ಬಾರ ಕಾರಹುಣ್ಣಿವೆ,
ನಿನಗಂತಹ ಕಣ್ಣಿವೆ!


ದೇವದಿನವೆ ನೀನೈತರೆ
ಜೀವಕುಲದ ಹಸಿವಯ ಕೊರೆ-
ಯಾರಿಸಿ ಬಿಡುವಂಥ ಬಸಿರ
ಭೂರಮಣಿಯು ಪಡೆವಳು, ತ್ವರ-
ಬಾರ ಕಾರಹುಣ್ಣಿವೆ,
ಶಾಂತಿಸುಖದರಣ್ಯವೆ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...