Home / ಕವನ / ಕವಿತೆ / ಶಿಲೆಗಳಾಗಬೇಡಿ

ಶಿಲೆಗಳಾಗಬೇಡಿ

ಶಿಲೆಗಳಾಗಬೇಡಿ ಮನುಜರೇ|
ಸುಂದರ ಶಿಲ್ಪಕಲೆಯಾಗಿ ಕೂರಬೇಡಿ|
ಬರಿಯ ಹೊಟ್ಟೆಪಾಡ ಓದ ಕಲಿತು
ಗೋಡೆಯ ಚಿತ್ರಪಟವಾಗಿ ನಿಲ್ಲಬೇಡಿ|
ಜೀವಂತ ಮನುಜರಾಗಿ
ಮನೆ, ಸಮಾಜಕ್ಕೆ ಉಪಯೋಗವಾಗುವ
ನಡೆದಾಡುವ ಮಾನವರಾಗಿ ||

ಎಷ್ಟು ಸೌಂದರ್ಯವಿದ್ದರೇನು
ಸಹನೆ ಸೌಹಾರ್ದವಿಲ್ಲದ ಬಳಿಕ|
ಎಷ್ಟು ಓದಿ ಪಂಡಿತನಾದರೇನು
ವಿನಯ ಗೌರವವಿಲ್ಲದ ಬಳಿಕ|
ಎಷ್ಟು ಧನ ಸಂಪತ್ತಿದ್ದರೇನು
ಕಷ್ಟಕಾಗದ ಕನಕ|
ಬಂಧ ಸಂಬಂಧ ವಿಲ್ಲದಲೇ
ಎಷ್ಟೆತ್ತರ ಬೆಳೆದರೇನು||

ಒಂಟಿಯಾಗಿ ಎತ್ತರೆತ್ತರ
ಹಾರಾಡುವ ಬದಲು|
ಜೊತೆ ಜೊತೆಯಾಗಿ
ಒಂದೊಂದೇ ಮೆಟ್ಟಿಲೇರುತಿರು|
ಹೂವಿನೊಂದಿಗೆ
ನಾರು ಸ್ವರ್ಗ ಸೇರುವಂತೆ
ಎಲ್ಲರನೂ ಸ್ಪಂದಿಸು ಎಲ್ಲರನು ಬೆಳೆಸು
ಕಲಿಸುತ ಕಲಿಯವುದೇ ಜೀವನಧರ್‍ಮ||
ಸ್ನೇಹಿತ, ಬಂಧು ಬಾಂದವರಿಗೆಟುಕದ
ನಿನ್ನ ಎತ್ತರದ ಜೀವನಕ್ಕೇನು ಬೆಲೆ|
ನಿನ್ನ ಬೆನ್ನಲಿ ಬಿದ್ದವರಿಗಾಗದೆ
ನೀನು ಎಷ್ಟೆತ್ತರ ಬೆಳೆದರೇನು?|
ಹೆತ್ತ ತಂದೆತಾಯ ಋಣತೀರಿಸದ
ಮಕ್ಕಳಾದರೇನು ಬಂತು ಭಾಗ್ಯ|
ಹಾಳುಬಾವಿಯ ನಿಂತ ನೀರಾಗದೆ
ಹರಿವ ಮಹಾನದಿಯಾಗಿ ಹಳ್ಳ
ತೊರೆಗಳ ಸೆಳೆದು ಕಡಲಸೇರು||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...