Home / ಕವನ / ಕವಿತೆ / ಶಿಲೆಗಳಾಗಬೇಡಿ

ಶಿಲೆಗಳಾಗಬೇಡಿ

ಶಿಲೆಗಳಾಗಬೇಡಿ ಮನುಜರೇ|
ಸುಂದರ ಶಿಲ್ಪಕಲೆಯಾಗಿ ಕೂರಬೇಡಿ|
ಬರಿಯ ಹೊಟ್ಟೆಪಾಡ ಓದ ಕಲಿತು
ಗೋಡೆಯ ಚಿತ್ರಪಟವಾಗಿ ನಿಲ್ಲಬೇಡಿ|
ಜೀವಂತ ಮನುಜರಾಗಿ
ಮನೆ, ಸಮಾಜಕ್ಕೆ ಉಪಯೋಗವಾಗುವ
ನಡೆದಾಡುವ ಮಾನವರಾಗಿ ||

ಎಷ್ಟು ಸೌಂದರ್ಯವಿದ್ದರೇನು
ಸಹನೆ ಸೌಹಾರ್ದವಿಲ್ಲದ ಬಳಿಕ|
ಎಷ್ಟು ಓದಿ ಪಂಡಿತನಾದರೇನು
ವಿನಯ ಗೌರವವಿಲ್ಲದ ಬಳಿಕ|
ಎಷ್ಟು ಧನ ಸಂಪತ್ತಿದ್ದರೇನು
ಕಷ್ಟಕಾಗದ ಕನಕ|
ಬಂಧ ಸಂಬಂಧ ವಿಲ್ಲದಲೇ
ಎಷ್ಟೆತ್ತರ ಬೆಳೆದರೇನು||

ಒಂಟಿಯಾಗಿ ಎತ್ತರೆತ್ತರ
ಹಾರಾಡುವ ಬದಲು|
ಜೊತೆ ಜೊತೆಯಾಗಿ
ಒಂದೊಂದೇ ಮೆಟ್ಟಿಲೇರುತಿರು|
ಹೂವಿನೊಂದಿಗೆ
ನಾರು ಸ್ವರ್ಗ ಸೇರುವಂತೆ
ಎಲ್ಲರನೂ ಸ್ಪಂದಿಸು ಎಲ್ಲರನು ಬೆಳೆಸು
ಕಲಿಸುತ ಕಲಿಯವುದೇ ಜೀವನಧರ್‍ಮ||
ಸ್ನೇಹಿತ, ಬಂಧು ಬಾಂದವರಿಗೆಟುಕದ
ನಿನ್ನ ಎತ್ತರದ ಜೀವನಕ್ಕೇನು ಬೆಲೆ|
ನಿನ್ನ ಬೆನ್ನಲಿ ಬಿದ್ದವರಿಗಾಗದೆ
ನೀನು ಎಷ್ಟೆತ್ತರ ಬೆಳೆದರೇನು?|
ಹೆತ್ತ ತಂದೆತಾಯ ಋಣತೀರಿಸದ
ಮಕ್ಕಳಾದರೇನು ಬಂತು ಭಾಗ್ಯ|
ಹಾಳುಬಾವಿಯ ನಿಂತ ನೀರಾಗದೆ
ಹರಿವ ಮಹಾನದಿಯಾಗಿ ಹಳ್ಳ
ತೊರೆಗಳ ಸೆಳೆದು ಕಡಲಸೇರು||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...