ಸಾಮರಸ್ಯದ ಸಹಿ

ನೆತ್ತರ ಕಡಲಲಿ ಉತ್ತರ ಹುಡುಕುವ
ಚಿತ್ತದ ಮದರಸ ಸುರಿಯುತಿದೆ
ಸುಂದರ ವನದಲ್ಲಿ ಚಂದಿರ ಸೊರಗಿ
ಕತ್ತಿ ಕಠಾರಿಯ ಬೆಳೆಯುತ್ತಿದೆ.

ನೆತ್ತರ ಮಳೆಯಲಿ ಕತ್ತಲ ಬೆಳೆಗಳು
ತೂಗುವ ತೆನೆಗಳು ಕೆನೆಯುತ್ತಿವೆ
ಮಂದಿರ ಸಿಡಿಲು ಮಸೀದಿ ಗುಡುಗು
ಬೆಳಕಿನ ಕಣ್ಣು ಕರಗುತ್ತಿವೆ.

ತುಂಬಿದ ಕಣ್ಣಲಿ ಕುದಿಯಿತು ಕತ್ತಲು
ಕೆನ್ನೆಯ ಮೇಲೆ ಸಾವಿನ ಸಾಲು
ನರಳುವ ಕರುಳಿಗೆ ಕೊಡುವುದು ಏನು?
ಮನೆಮನೆ ತುಂಬ ಸಾಸಿವೆ ಕಾಳು!

ಹಾದಿಬೀದಿಯ ತುಂಬ ಬಿದ್ದ ಹೂಗಳ ತುಳಿದು
ಚಿಮ್ಮಿ ಹಾರಿತು ರಕ್ತ-ಜೀವಮುಕ್ತ!
ಎತ್ತ ಹೋಯಿತೊ ಎದೆಯು ಹಕ್ಕಿಗಾಡಿನ ಗೂಡು
ಬಿದ್ದ ಕಟ್ಟಡದಲ್ಲಿ ಬೆಂದಾಯಿತೊ
ಸಾಮರಸ್ಯದ ಕರೆಗೆ ಸಹಿ ಹಾಕಿತೊ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದಲಾಗುತ್ತಿರುವ ಸನ್ನಿವೇಶದಲ್ಲಿ ಸಾಮಾನ್ಯ ಶಿಕ್ಷಣ
Next post ಗುರುವೇ ನಿನ್ನ ಪಾದ ಧೂಳಿನ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…