ಸಾಮರಸ್ಯದ ಸಹಿ

ನೆತ್ತರ ಕಡಲಲಿ ಉತ್ತರ ಹುಡುಕುವ
ಚಿತ್ತದ ಮದರಸ ಸುರಿಯುತಿದೆ
ಸುಂದರ ವನದಲ್ಲಿ ಚಂದಿರ ಸೊರಗಿ
ಕತ್ತಿ ಕಠಾರಿಯ ಬೆಳೆಯುತ್ತಿದೆ.

ನೆತ್ತರ ಮಳೆಯಲಿ ಕತ್ತಲ ಬೆಳೆಗಳು
ತೂಗುವ ತೆನೆಗಳು ಕೆನೆಯುತ್ತಿವೆ
ಮಂದಿರ ಸಿಡಿಲು ಮಸೀದಿ ಗುಡುಗು
ಬೆಳಕಿನ ಕಣ್ಣು ಕರಗುತ್ತಿವೆ.

ತುಂಬಿದ ಕಣ್ಣಲಿ ಕುದಿಯಿತು ಕತ್ತಲು
ಕೆನ್ನೆಯ ಮೇಲೆ ಸಾವಿನ ಸಾಲು
ನರಳುವ ಕರುಳಿಗೆ ಕೊಡುವುದು ಏನು?
ಮನೆಮನೆ ತುಂಬ ಸಾಸಿವೆ ಕಾಳು!

ಹಾದಿಬೀದಿಯ ತುಂಬ ಬಿದ್ದ ಹೂಗಳ ತುಳಿದು
ಚಿಮ್ಮಿ ಹಾರಿತು ರಕ್ತ-ಜೀವಮುಕ್ತ!
ಎತ್ತ ಹೋಯಿತೊ ಎದೆಯು ಹಕ್ಕಿಗಾಡಿನ ಗೂಡು
ಬಿದ್ದ ಕಟ್ಟಡದಲ್ಲಿ ಬೆಂದಾಯಿತೊ
ಸಾಮರಸ್ಯದ ಕರೆಗೆ ಸಹಿ ಹಾಕಿತೊ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದಲಾಗುತ್ತಿರುವ ಸನ್ನಿವೇಶದಲ್ಲಿ ಸಾಮಾನ್ಯ ಶಿಕ್ಷಣ
Next post ಗುರುವೇ ನಿನ್ನ ಪಾದ ಧೂಳಿನ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…