Home / ಕವನ / ಕವಿತೆ / ಕನ್ನಡದ ಸಿರಿಕಂಠ ಶ್ರೀ ಕಾಳಿಂಗರಾಯ

ಕನ್ನಡದ ಸಿರಿಕಂಠ ಶ್ರೀ ಕಾಳಿಂಗರಾಯ

ಕನ್ನಡದ ಶ್ರೀಕಂಠ ಕಾಳಿಂಗರಾಯ
ಕನ್ನಡ ತಾಯ ದಯವಾಗಿ ನೀವು
ಕನ್ನಡದ ನೆಲದ ವರವಾಗಿ ನೀವು
ಆ ಅಂಥ ಉದಯದಲಿ
ನೀವಿದ್ದಿರಿ

ಎಬ್ಬಿಸಿದಿರಿ ಉದ್ದೀಪಿಸಿದಿರಿ
ಸತ್ತಂತೆ ಮಲಗಿದವರ ಎಚ್ಚರಿಸಿದಿರಿ
ಸುಮಧುರ ಗಾಯನದಿಂದ
ಹಾಡ ತುಂಬಿದಿರಿ ನಾಡ ತುಂಬಿದಿರಿ
ಪ್ರತಿಯೊಂದು ಪದಕೂ ಅರ್‍ಥ ತುಂಬಿದಿರಿ
ಕನ್ನಡ ಪುಷ್ಪೋದ್ಯಾನದ ತುಂಬಿಯೇ ಆದಿರಿ

ಕೇಳಿದವರ ಐಸಿರಿ
ರೋಮಾಂಚನಗೊಳಿಸಿದಿರಿ
ಜನಪದವನೆ ಕುಣಿಸಿದಿರಿ

ಕನ್ನಡ ನಾಡು ಋಣಿ ಕನ್ನಡ ಭಾಷೆ ಋಣಿ
ಓ ಮಹಾ ಗಾಯಕ
ಚೆಲುವ ಕನ್ನಡ ಕೋಗಿಲೆ
ಓ ಧ್ವನಿಗಳ ಖಣಿ
ಕನ್ನಡ ಕವಿಸಂಕುಲವೆ ನಿಮಗೆ ಋಣಿ

ಕಂಚಿನ ಕಂಠವೇ ಚಿನ್ನದ ಕಂಠವೇ
ಅದೇನು ಕಂಪನ ಅದೇನು ಗುಂಫನ
ಏನು ಇಳಿತ ಏನು ಭರತ
ಅದೇನು ಕರ್‍ಣರಸಾಯನ
ದೇವಳದ ಘಂಟಾನಾದವೋ
ಹಸುವಿನ ಮಣಿನಾದವೋ
ಶಂಖವೊ ಕೊಳಲೊ
ಝಣಝಣನೆ ಸುರಿದ ನಾಣ್ಯವೋ

ಭಾವ ಸುರಿಯಿತು ಎಲ್ಲಿಂದ
ಅರ್‍ಥ ಸೇರಿತು ಎಲ್ಲಿಂದ
ಎಲ್ಲ ನಿಮ್ಮ ಕಂಠದಿಂದ
ಕಂಠವೇನು ಜೇನು ಜೇನು
ನಿಮಗೆ ನೀವೆ ಮಾದರಿ
ಆದರೂ ಮುಂದಿನವರಿಗೆ ದಾರಿಯಾದಿರಿ

ಹೋಳಿಯ ಹುಣ್ಣಿಮೆ
ಓಕುಳಿ ಜೋಕುಳಿ
ದೀಪೋತ್ಸವ ನಿತ್ಯೋತ್ಸವ
ಗಂಗಾವತರಣ
ಅಳುವ ಕಡಲೊಳು ತೇಲಿ ಬರುತ್ತಿರುವ
ನಗೆಯ ಹಾಯಿದೋಣಿ
ಅದು ಆಗಲಿ ಇದು ಆಗಲಿ
ಅನಂತದಿಂದ ದಿಗಂತದಿಂದ
ಅಲ್ಲಿಂದಲಾಗಲಿ ಇಲ್ಲಿಂದಲಾಗಲಿ
ಎಲ್ಲಿಂದಾಗಲಿ, ಅವು ನಿಮ್ಮ ಕಂಠದಲ್ಲಿ ಬಂದು
ಜೀವ ಪಡೆದುವು

ಅಡಿಗರಾಗಲಿ ಬೇಂದ್ರೆಯಾಗಲಿ ವಿಶ್ವಕವಿ ಕುವೆಂಪುವಾಗಲಿ
ರಾಷ್ಟ್ರಕವಿ ಗೋವಿಂದ ಪೈ
ನಿಮ್ಮ ಸ್ವರದಿ ಮನೆಮನೆಗೆ ಬಂದು
ಕನ್ನಡಿಗರಿಗೆ ಸಿಕ್ಕರು
ಅವರು ಸೆರೆಸಿಕ್ಕರು

ಆಲಿಸಿದವರ ಪರವಶ
ಆಲಿಸಿದವರ ಮಂತ್ರಮುಗ್ಧ
ಆಲಿಸಿದವರ ತನ್ಮಯ
ಆಲಿಸಿದವರ ಮೈಪುಳಕ

ಹಾಡು ಕಳಕೊಂಡರೆ ನಾವು
ನಾವು ಕಳಕೊಂಡಂತೆಯೆ ಎಂದು
ಹಿಡಿಸಿ ನಮಗೆ ಹಾಡಿನ ಮೋಹ

ಹಾಡಲೆಂದೇ ಬಂದ ಹಕ್ಕಿ
ಹಾಡಿ ಹಾರಿ ಹೋದಂತೆ
ಲಯವಾಗಿ ಮಹಾಲಯದಲ್ಲಿ
ಉಳಿದ ಬಳುವಳಿ ಮಹಾಪೂರ
ತಾಳ ಲಯ ಗಾನ ಗಾಯನ ವಾಹಿನಿ
ಮಹಾ ಧ್ವನಿ ಸಮ್ಮೋಹಿನಿ
ಇದು ಇಲ್ಲಿ ಆರಂಭ
ಇಲ್ಲಿಗಿದು ಮುಗಿಯದೆನ್ನುವ ಭರವಸೆಯೆ
ಕನ್ನಡಿಗರು ನಿಮಗೀಯುವ ನಮನ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...