Home / ಕವನ / ಕವಿತೆ / ಕನ್ನಡದ ಸಿರಿಕಂಠ ಶ್ರೀ ಕಾಳಿಂಗರಾಯ

ಕನ್ನಡದ ಸಿರಿಕಂಠ ಶ್ರೀ ಕಾಳಿಂಗರಾಯ

ಕನ್ನಡದ ಶ್ರೀಕಂಠ ಕಾಳಿಂಗರಾಯ
ಕನ್ನಡ ತಾಯ ದಯವಾಗಿ ನೀವು
ಕನ್ನಡದ ನೆಲದ ವರವಾಗಿ ನೀವು
ಆ ಅಂಥ ಉದಯದಲಿ
ನೀವಿದ್ದಿರಿ

ಎಬ್ಬಿಸಿದಿರಿ ಉದ್ದೀಪಿಸಿದಿರಿ
ಸತ್ತಂತೆ ಮಲಗಿದವರ ಎಚ್ಚರಿಸಿದಿರಿ
ಸುಮಧುರ ಗಾಯನದಿಂದ
ಹಾಡ ತುಂಬಿದಿರಿ ನಾಡ ತುಂಬಿದಿರಿ
ಪ್ರತಿಯೊಂದು ಪದಕೂ ಅರ್‍ಥ ತುಂಬಿದಿರಿ
ಕನ್ನಡ ಪುಷ್ಪೋದ್ಯಾನದ ತುಂಬಿಯೇ ಆದಿರಿ

ಕೇಳಿದವರ ಐಸಿರಿ
ರೋಮಾಂಚನಗೊಳಿಸಿದಿರಿ
ಜನಪದವನೆ ಕುಣಿಸಿದಿರಿ

ಕನ್ನಡ ನಾಡು ಋಣಿ ಕನ್ನಡ ಭಾಷೆ ಋಣಿ
ಓ ಮಹಾ ಗಾಯಕ
ಚೆಲುವ ಕನ್ನಡ ಕೋಗಿಲೆ
ಓ ಧ್ವನಿಗಳ ಖಣಿ
ಕನ್ನಡ ಕವಿಸಂಕುಲವೆ ನಿಮಗೆ ಋಣಿ

ಕಂಚಿನ ಕಂಠವೇ ಚಿನ್ನದ ಕಂಠವೇ
ಅದೇನು ಕಂಪನ ಅದೇನು ಗುಂಫನ
ಏನು ಇಳಿತ ಏನು ಭರತ
ಅದೇನು ಕರ್‍ಣರಸಾಯನ
ದೇವಳದ ಘಂಟಾನಾದವೋ
ಹಸುವಿನ ಮಣಿನಾದವೋ
ಶಂಖವೊ ಕೊಳಲೊ
ಝಣಝಣನೆ ಸುರಿದ ನಾಣ್ಯವೋ

ಭಾವ ಸುರಿಯಿತು ಎಲ್ಲಿಂದ
ಅರ್‍ಥ ಸೇರಿತು ಎಲ್ಲಿಂದ
ಎಲ್ಲ ನಿಮ್ಮ ಕಂಠದಿಂದ
ಕಂಠವೇನು ಜೇನು ಜೇನು
ನಿಮಗೆ ನೀವೆ ಮಾದರಿ
ಆದರೂ ಮುಂದಿನವರಿಗೆ ದಾರಿಯಾದಿರಿ

ಹೋಳಿಯ ಹುಣ್ಣಿಮೆ
ಓಕುಳಿ ಜೋಕುಳಿ
ದೀಪೋತ್ಸವ ನಿತ್ಯೋತ್ಸವ
ಗಂಗಾವತರಣ
ಅಳುವ ಕಡಲೊಳು ತೇಲಿ ಬರುತ್ತಿರುವ
ನಗೆಯ ಹಾಯಿದೋಣಿ
ಅದು ಆಗಲಿ ಇದು ಆಗಲಿ
ಅನಂತದಿಂದ ದಿಗಂತದಿಂದ
ಅಲ್ಲಿಂದಲಾಗಲಿ ಇಲ್ಲಿಂದಲಾಗಲಿ
ಎಲ್ಲಿಂದಾಗಲಿ, ಅವು ನಿಮ್ಮ ಕಂಠದಲ್ಲಿ ಬಂದು
ಜೀವ ಪಡೆದುವು

ಅಡಿಗರಾಗಲಿ ಬೇಂದ್ರೆಯಾಗಲಿ ವಿಶ್ವಕವಿ ಕುವೆಂಪುವಾಗಲಿ
ರಾಷ್ಟ್ರಕವಿ ಗೋವಿಂದ ಪೈ
ನಿಮ್ಮ ಸ್ವರದಿ ಮನೆಮನೆಗೆ ಬಂದು
ಕನ್ನಡಿಗರಿಗೆ ಸಿಕ್ಕರು
ಅವರು ಸೆರೆಸಿಕ್ಕರು

ಆಲಿಸಿದವರ ಪರವಶ
ಆಲಿಸಿದವರ ಮಂತ್ರಮುಗ್ಧ
ಆಲಿಸಿದವರ ತನ್ಮಯ
ಆಲಿಸಿದವರ ಮೈಪುಳಕ

ಹಾಡು ಕಳಕೊಂಡರೆ ನಾವು
ನಾವು ಕಳಕೊಂಡಂತೆಯೆ ಎಂದು
ಹಿಡಿಸಿ ನಮಗೆ ಹಾಡಿನ ಮೋಹ

ಹಾಡಲೆಂದೇ ಬಂದ ಹಕ್ಕಿ
ಹಾಡಿ ಹಾರಿ ಹೋದಂತೆ
ಲಯವಾಗಿ ಮಹಾಲಯದಲ್ಲಿ
ಉಳಿದ ಬಳುವಳಿ ಮಹಾಪೂರ
ತಾಳ ಲಯ ಗಾನ ಗಾಯನ ವಾಹಿನಿ
ಮಹಾ ಧ್ವನಿ ಸಮ್ಮೋಹಿನಿ
ಇದು ಇಲ್ಲಿ ಆರಂಭ
ಇಲ್ಲಿಗಿದು ಮುಗಿಯದೆನ್ನುವ ಭರವಸೆಯೆ
ಕನ್ನಡಿಗರು ನಿಮಗೀಯುವ ನಮನ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...