Home / ಕವನ / ಕವಿತೆ / ಕನ್ನಡದ ಸಿರಿಕಂಠ ಶ್ರೀ ಕಾಳಿಂಗರಾಯ

ಕನ್ನಡದ ಸಿರಿಕಂಠ ಶ್ರೀ ಕಾಳಿಂಗರಾಯ

ಕನ್ನಡದ ಶ್ರೀಕಂಠ ಕಾಳಿಂಗರಾಯ
ಕನ್ನಡ ತಾಯ ದಯವಾಗಿ ನೀವು
ಕನ್ನಡದ ನೆಲದ ವರವಾಗಿ ನೀವು
ಆ ಅಂಥ ಉದಯದಲಿ
ನೀವಿದ್ದಿರಿ

ಎಬ್ಬಿಸಿದಿರಿ ಉದ್ದೀಪಿಸಿದಿರಿ
ಸತ್ತಂತೆ ಮಲಗಿದವರ ಎಚ್ಚರಿಸಿದಿರಿ
ಸುಮಧುರ ಗಾಯನದಿಂದ
ಹಾಡ ತುಂಬಿದಿರಿ ನಾಡ ತುಂಬಿದಿರಿ
ಪ್ರತಿಯೊಂದು ಪದಕೂ ಅರ್‍ಥ ತುಂಬಿದಿರಿ
ಕನ್ನಡ ಪುಷ್ಪೋದ್ಯಾನದ ತುಂಬಿಯೇ ಆದಿರಿ

ಕೇಳಿದವರ ಐಸಿರಿ
ರೋಮಾಂಚನಗೊಳಿಸಿದಿರಿ
ಜನಪದವನೆ ಕುಣಿಸಿದಿರಿ

ಕನ್ನಡ ನಾಡು ಋಣಿ ಕನ್ನಡ ಭಾಷೆ ಋಣಿ
ಓ ಮಹಾ ಗಾಯಕ
ಚೆಲುವ ಕನ್ನಡ ಕೋಗಿಲೆ
ಓ ಧ್ವನಿಗಳ ಖಣಿ
ಕನ್ನಡ ಕವಿಸಂಕುಲವೆ ನಿಮಗೆ ಋಣಿ

ಕಂಚಿನ ಕಂಠವೇ ಚಿನ್ನದ ಕಂಠವೇ
ಅದೇನು ಕಂಪನ ಅದೇನು ಗುಂಫನ
ಏನು ಇಳಿತ ಏನು ಭರತ
ಅದೇನು ಕರ್‍ಣರಸಾಯನ
ದೇವಳದ ಘಂಟಾನಾದವೋ
ಹಸುವಿನ ಮಣಿನಾದವೋ
ಶಂಖವೊ ಕೊಳಲೊ
ಝಣಝಣನೆ ಸುರಿದ ನಾಣ್ಯವೋ

ಭಾವ ಸುರಿಯಿತು ಎಲ್ಲಿಂದ
ಅರ್‍ಥ ಸೇರಿತು ಎಲ್ಲಿಂದ
ಎಲ್ಲ ನಿಮ್ಮ ಕಂಠದಿಂದ
ಕಂಠವೇನು ಜೇನು ಜೇನು
ನಿಮಗೆ ನೀವೆ ಮಾದರಿ
ಆದರೂ ಮುಂದಿನವರಿಗೆ ದಾರಿಯಾದಿರಿ

ಹೋಳಿಯ ಹುಣ್ಣಿಮೆ
ಓಕುಳಿ ಜೋಕುಳಿ
ದೀಪೋತ್ಸವ ನಿತ್ಯೋತ್ಸವ
ಗಂಗಾವತರಣ
ಅಳುವ ಕಡಲೊಳು ತೇಲಿ ಬರುತ್ತಿರುವ
ನಗೆಯ ಹಾಯಿದೋಣಿ
ಅದು ಆಗಲಿ ಇದು ಆಗಲಿ
ಅನಂತದಿಂದ ದಿಗಂತದಿಂದ
ಅಲ್ಲಿಂದಲಾಗಲಿ ಇಲ್ಲಿಂದಲಾಗಲಿ
ಎಲ್ಲಿಂದಾಗಲಿ, ಅವು ನಿಮ್ಮ ಕಂಠದಲ್ಲಿ ಬಂದು
ಜೀವ ಪಡೆದುವು

ಅಡಿಗರಾಗಲಿ ಬೇಂದ್ರೆಯಾಗಲಿ ವಿಶ್ವಕವಿ ಕುವೆಂಪುವಾಗಲಿ
ರಾಷ್ಟ್ರಕವಿ ಗೋವಿಂದ ಪೈ
ನಿಮ್ಮ ಸ್ವರದಿ ಮನೆಮನೆಗೆ ಬಂದು
ಕನ್ನಡಿಗರಿಗೆ ಸಿಕ್ಕರು
ಅವರು ಸೆರೆಸಿಕ್ಕರು

ಆಲಿಸಿದವರ ಪರವಶ
ಆಲಿಸಿದವರ ಮಂತ್ರಮುಗ್ಧ
ಆಲಿಸಿದವರ ತನ್ಮಯ
ಆಲಿಸಿದವರ ಮೈಪುಳಕ

ಹಾಡು ಕಳಕೊಂಡರೆ ನಾವು
ನಾವು ಕಳಕೊಂಡಂತೆಯೆ ಎಂದು
ಹಿಡಿಸಿ ನಮಗೆ ಹಾಡಿನ ಮೋಹ

ಹಾಡಲೆಂದೇ ಬಂದ ಹಕ್ಕಿ
ಹಾಡಿ ಹಾರಿ ಹೋದಂತೆ
ಲಯವಾಗಿ ಮಹಾಲಯದಲ್ಲಿ
ಉಳಿದ ಬಳುವಳಿ ಮಹಾಪೂರ
ತಾಳ ಲಯ ಗಾನ ಗಾಯನ ವಾಹಿನಿ
ಮಹಾ ಧ್ವನಿ ಸಮ್ಮೋಹಿನಿ
ಇದು ಇಲ್ಲಿ ಆರಂಭ
ಇಲ್ಲಿಗಿದು ಮುಗಿಯದೆನ್ನುವ ಭರವಸೆಯೆ
ಕನ್ನಡಿಗರು ನಿಮಗೀಯುವ ನಮನ
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...