Home / ಕವನ / ಕವಿತೆ / ಕನ್ನಡದ ಸಿರಿಕಂಠ ಶ್ರೀ ಕಾಳಿಂಗರಾಯ

ಕನ್ನಡದ ಸಿರಿಕಂಠ ಶ್ರೀ ಕಾಳಿಂಗರಾಯ

ಕನ್ನಡದ ಶ್ರೀಕಂಠ ಕಾಳಿಂಗರಾಯ
ಕನ್ನಡ ತಾಯ ದಯವಾಗಿ ನೀವು
ಕನ್ನಡದ ನೆಲದ ವರವಾಗಿ ನೀವು
ಆ ಅಂಥ ಉದಯದಲಿ
ನೀವಿದ್ದಿರಿ

ಎಬ್ಬಿಸಿದಿರಿ ಉದ್ದೀಪಿಸಿದಿರಿ
ಸತ್ತಂತೆ ಮಲಗಿದವರ ಎಚ್ಚರಿಸಿದಿರಿ
ಸುಮಧುರ ಗಾಯನದಿಂದ
ಹಾಡ ತುಂಬಿದಿರಿ ನಾಡ ತುಂಬಿದಿರಿ
ಪ್ರತಿಯೊಂದು ಪದಕೂ ಅರ್‍ಥ ತುಂಬಿದಿರಿ
ಕನ್ನಡ ಪುಷ್ಪೋದ್ಯಾನದ ತುಂಬಿಯೇ ಆದಿರಿ

ಕೇಳಿದವರ ಐಸಿರಿ
ರೋಮಾಂಚನಗೊಳಿಸಿದಿರಿ
ಜನಪದವನೆ ಕುಣಿಸಿದಿರಿ

ಕನ್ನಡ ನಾಡು ಋಣಿ ಕನ್ನಡ ಭಾಷೆ ಋಣಿ
ಓ ಮಹಾ ಗಾಯಕ
ಚೆಲುವ ಕನ್ನಡ ಕೋಗಿಲೆ
ಓ ಧ್ವನಿಗಳ ಖಣಿ
ಕನ್ನಡ ಕವಿಸಂಕುಲವೆ ನಿಮಗೆ ಋಣಿ

ಕಂಚಿನ ಕಂಠವೇ ಚಿನ್ನದ ಕಂಠವೇ
ಅದೇನು ಕಂಪನ ಅದೇನು ಗುಂಫನ
ಏನು ಇಳಿತ ಏನು ಭರತ
ಅದೇನು ಕರ್‍ಣರಸಾಯನ
ದೇವಳದ ಘಂಟಾನಾದವೋ
ಹಸುವಿನ ಮಣಿನಾದವೋ
ಶಂಖವೊ ಕೊಳಲೊ
ಝಣಝಣನೆ ಸುರಿದ ನಾಣ್ಯವೋ

ಭಾವ ಸುರಿಯಿತು ಎಲ್ಲಿಂದ
ಅರ್‍ಥ ಸೇರಿತು ಎಲ್ಲಿಂದ
ಎಲ್ಲ ನಿಮ್ಮ ಕಂಠದಿಂದ
ಕಂಠವೇನು ಜೇನು ಜೇನು
ನಿಮಗೆ ನೀವೆ ಮಾದರಿ
ಆದರೂ ಮುಂದಿನವರಿಗೆ ದಾರಿಯಾದಿರಿ

ಹೋಳಿಯ ಹುಣ್ಣಿಮೆ
ಓಕುಳಿ ಜೋಕುಳಿ
ದೀಪೋತ್ಸವ ನಿತ್ಯೋತ್ಸವ
ಗಂಗಾವತರಣ
ಅಳುವ ಕಡಲೊಳು ತೇಲಿ ಬರುತ್ತಿರುವ
ನಗೆಯ ಹಾಯಿದೋಣಿ
ಅದು ಆಗಲಿ ಇದು ಆಗಲಿ
ಅನಂತದಿಂದ ದಿಗಂತದಿಂದ
ಅಲ್ಲಿಂದಲಾಗಲಿ ಇಲ್ಲಿಂದಲಾಗಲಿ
ಎಲ್ಲಿಂದಾಗಲಿ, ಅವು ನಿಮ್ಮ ಕಂಠದಲ್ಲಿ ಬಂದು
ಜೀವ ಪಡೆದುವು

ಅಡಿಗರಾಗಲಿ ಬೇಂದ್ರೆಯಾಗಲಿ ವಿಶ್ವಕವಿ ಕುವೆಂಪುವಾಗಲಿ
ರಾಷ್ಟ್ರಕವಿ ಗೋವಿಂದ ಪೈ
ನಿಮ್ಮ ಸ್ವರದಿ ಮನೆಮನೆಗೆ ಬಂದು
ಕನ್ನಡಿಗರಿಗೆ ಸಿಕ್ಕರು
ಅವರು ಸೆರೆಸಿಕ್ಕರು

ಆಲಿಸಿದವರ ಪರವಶ
ಆಲಿಸಿದವರ ಮಂತ್ರಮುಗ್ಧ
ಆಲಿಸಿದವರ ತನ್ಮಯ
ಆಲಿಸಿದವರ ಮೈಪುಳಕ

ಹಾಡು ಕಳಕೊಂಡರೆ ನಾವು
ನಾವು ಕಳಕೊಂಡಂತೆಯೆ ಎಂದು
ಹಿಡಿಸಿ ನಮಗೆ ಹಾಡಿನ ಮೋಹ

ಹಾಡಲೆಂದೇ ಬಂದ ಹಕ್ಕಿ
ಹಾಡಿ ಹಾರಿ ಹೋದಂತೆ
ಲಯವಾಗಿ ಮಹಾಲಯದಲ್ಲಿ
ಉಳಿದ ಬಳುವಳಿ ಮಹಾಪೂರ
ತಾಳ ಲಯ ಗಾನ ಗಾಯನ ವಾಹಿನಿ
ಮಹಾ ಧ್ವನಿ ಸಮ್ಮೋಹಿನಿ
ಇದು ಇಲ್ಲಿ ಆರಂಭ
ಇಲ್ಲಿಗಿದು ಮುಗಿಯದೆನ್ನುವ ಭರವಸೆಯೆ
ಕನ್ನಡಿಗರು ನಿಮಗೀಯುವ ನಮನ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...