Home / ಕವನ / ಕವಿತೆ / ಷೇರು ಪೇಟೆ ಕುಸಿಯುತಿದೆ…

ಷೇರು ಪೇಟೆ ಕುಸಿಯುತಿದೆ…

ತಂಗಿ…
ಷೇರುಪೇಟೆ ಕುಸಿಯುತಿದೆ
ಮಾರುಕಟ್ಟೆ ನಡುಗುತಿದೆ…

ಕರಡಿಯೊಂದು ಕುಣಿಯುತ್ತಿದೆ
ಗೂಳಿಯೊಂದು ತಿವಿಯುತ್ತಿದೆ
ಗುಳ್ಳೆಯೊಂದು ಒಡೆಯುತಿದೆ
ಕೊಳ್ಳೆಯೊಂದು ಕರಗುತ್ತಿದೆ…

ಅಕ್ಕ…
ಷೇರುಪೇಟೆಯೇ? ಗೊತ್ತಿಲ್ಲ ಕಣೆ!
ಇಲ್ಲಿ…. ಕೇಳಿಲ್ಲಿ….

ಪುಟ್ಟ ಮೀನು ಭಾರಿ ಹಡನ್ನು
ಮುಳುಗಿಸುವುದಂತೆ ನಿಜವೇನೇ?

ಪುಟ್ಟ ಹಕ್ಕಿ ಭಾರಿ ವಿಮಾನವನ್ನು
ಉರುಳಿಸುವುದಂತೆ ನಿಜವೇನೇ?

ಗೆದ್ದಲು ಹುಳು ಭಾರಿ ಸೌಧವನ್ನು
ಕಬಳಿಸುವುದಂತೆ ನಿಜವೇನೇ?

ತಂಗಿ….
ಷೇರುಪೇಟೆ ಕುಸಿಯುತಿದೆ
ಮಾರುಕಟ್ಟೆ ನಡುಗುತಿದೆ…

ವೇಷವೊಂದು ಕಳಚುತ್ತಿದೆ
ದಿಗಿಣವೆಲ್ಲ ಅಡಗುತ್ತಿದೆ
‘ಹಾ’ಹಾಕಾರ ಏರುತಿದೆ
‘ಹೂಂ’ಕಾರ ಇಳಿಯುತಿದೆ…

ಅಕ್ಕ….
ಷೇರುಪೇಟೆಯೇ? ಗೊತ್ತಿಲ್ಲ ಕಣೆ!
ಏನದು ದೇಖು-ರೇಖು?
ಹಾಂ! ಮೀನಿಗೆ ಮಸಾಲೆ ಅರೆಯಬೇಕು
ಸದ್ಯ! ಉಪ್ಪು ಮೆಣಸು ಹುಳಿ
ತುಟ್ಟಿಯಾಗದಿದ್ದರೆ ಸಾಕು

ನೂಲೆಳೆಯುವ ಅಜ್ಜ ಹೇಳುತ್ತಿದ್ದ…
ಒಂದು ಹೂವು ಅರಳಬೇಕು
ಒಂದು ಹಕ್ಕಿ ಹಾಡಬೇಕು
ಒಂದು ಚಿಲುಮೆ ಉಕ್ಕಬೇಕು
ಒಂದು ಗುಕ್ಕು ಅನ್ನ
ಒಂದು ಗುಟುಕು ನೀರು
ಬಾಳಲು ಹೆಚ್ಚಿಗೇನು ಬೇಕು ?

ತಂಗಿ…
ಷೇರುಪೇಟೆ ಕುಸಿಯುತಿದೆ
ಮಾರುಕಟ್ಟೆ ನಡುಗುತಿದೆ…

ಅಕ್ಕ…
ಷೇರುಪೇಟೆ ಹಾಗೆಂದರೆ ಏನೇ?
ಅದು ನಮ್ಮ ಹೂವಿನ ಮಾರುಕಟ್ಟೆಗೆ ಸಮವೇನೇ?

ಇಗೋ..
ಇಲ್ಲಿ ನನ್ನೂರಲ್ಲಿ ನೆರೆದಿದೆ ಸಂತೆ
ರಾಟೆ ಸುತ್ತಬೇಕು ಪೀಪಿ ಊದಬೇಕು
ಗರಿ ಗರಿ ಚುರುಮುರಿ…
ಬಿಸಿ ಬಿಸಿ ಬಜ್ಜಿ-ಮೆಣಸಿನ ಕಾಯಿ ಮೆಲ್ಲಬೇಕು
ಇದಲ್ಲವೆ ನನ್ನ ವಿಶ್ವ? ಇದೇ ನನ್ನ ವಿಶ್ವ!

ಷೇರು ಪೇಟೆ ಕುಸಿದರೇನಂತೆ?
ಮಾರುಕಟ್ಟೆ ಮುಳುಗಿದರೇನಂತೆ?

ಕುಡಿಕೆಯಲಿ ಕಾಸು ಕೂಡಿಟ್ಟಿರುವೆ
………..ಸುಡು ಚಿಂತೆ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...