Home / ಕವನ / ಕವಿತೆ / ಷೇರು ಪೇಟೆ ಕುಸಿಯುತಿದೆ…

ಷೇರು ಪೇಟೆ ಕುಸಿಯುತಿದೆ…

ತಂಗಿ…
ಷೇರುಪೇಟೆ ಕುಸಿಯುತಿದೆ
ಮಾರುಕಟ್ಟೆ ನಡುಗುತಿದೆ…

ಕರಡಿಯೊಂದು ಕುಣಿಯುತ್ತಿದೆ
ಗೂಳಿಯೊಂದು ತಿವಿಯುತ್ತಿದೆ
ಗುಳ್ಳೆಯೊಂದು ಒಡೆಯುತಿದೆ
ಕೊಳ್ಳೆಯೊಂದು ಕರಗುತ್ತಿದೆ…

ಅಕ್ಕ…
ಷೇರುಪೇಟೆಯೇ? ಗೊತ್ತಿಲ್ಲ ಕಣೆ!
ಇಲ್ಲಿ…. ಕೇಳಿಲ್ಲಿ….

ಪುಟ್ಟ ಮೀನು ಭಾರಿ ಹಡನ್ನು
ಮುಳುಗಿಸುವುದಂತೆ ನಿಜವೇನೇ?

ಪುಟ್ಟ ಹಕ್ಕಿ ಭಾರಿ ವಿಮಾನವನ್ನು
ಉರುಳಿಸುವುದಂತೆ ನಿಜವೇನೇ?

ಗೆದ್ದಲು ಹುಳು ಭಾರಿ ಸೌಧವನ್ನು
ಕಬಳಿಸುವುದಂತೆ ನಿಜವೇನೇ?

ತಂಗಿ….
ಷೇರುಪೇಟೆ ಕುಸಿಯುತಿದೆ
ಮಾರುಕಟ್ಟೆ ನಡುಗುತಿದೆ…

ವೇಷವೊಂದು ಕಳಚುತ್ತಿದೆ
ದಿಗಿಣವೆಲ್ಲ ಅಡಗುತ್ತಿದೆ
‘ಹಾ’ಹಾಕಾರ ಏರುತಿದೆ
‘ಹೂಂ’ಕಾರ ಇಳಿಯುತಿದೆ…

ಅಕ್ಕ….
ಷೇರುಪೇಟೆಯೇ? ಗೊತ್ತಿಲ್ಲ ಕಣೆ!
ಏನದು ದೇಖು-ರೇಖು?
ಹಾಂ! ಮೀನಿಗೆ ಮಸಾಲೆ ಅರೆಯಬೇಕು
ಸದ್ಯ! ಉಪ್ಪು ಮೆಣಸು ಹುಳಿ
ತುಟ್ಟಿಯಾಗದಿದ್ದರೆ ಸಾಕು

ನೂಲೆಳೆಯುವ ಅಜ್ಜ ಹೇಳುತ್ತಿದ್ದ…
ಒಂದು ಹೂವು ಅರಳಬೇಕು
ಒಂದು ಹಕ್ಕಿ ಹಾಡಬೇಕು
ಒಂದು ಚಿಲುಮೆ ಉಕ್ಕಬೇಕು
ಒಂದು ಗುಕ್ಕು ಅನ್ನ
ಒಂದು ಗುಟುಕು ನೀರು
ಬಾಳಲು ಹೆಚ್ಚಿಗೇನು ಬೇಕು ?

ತಂಗಿ…
ಷೇರುಪೇಟೆ ಕುಸಿಯುತಿದೆ
ಮಾರುಕಟ್ಟೆ ನಡುಗುತಿದೆ…

ಅಕ್ಕ…
ಷೇರುಪೇಟೆ ಹಾಗೆಂದರೆ ಏನೇ?
ಅದು ನಮ್ಮ ಹೂವಿನ ಮಾರುಕಟ್ಟೆಗೆ ಸಮವೇನೇ?

ಇಗೋ..
ಇಲ್ಲಿ ನನ್ನೂರಲ್ಲಿ ನೆರೆದಿದೆ ಸಂತೆ
ರಾಟೆ ಸುತ್ತಬೇಕು ಪೀಪಿ ಊದಬೇಕು
ಗರಿ ಗರಿ ಚುರುಮುರಿ…
ಬಿಸಿ ಬಿಸಿ ಬಜ್ಜಿ-ಮೆಣಸಿನ ಕಾಯಿ ಮೆಲ್ಲಬೇಕು
ಇದಲ್ಲವೆ ನನ್ನ ವಿಶ್ವ? ಇದೇ ನನ್ನ ವಿಶ್ವ!

ಷೇರು ಪೇಟೆ ಕುಸಿದರೇನಂತೆ?
ಮಾರುಕಟ್ಟೆ ಮುಳುಗಿದರೇನಂತೆ?

ಕುಡಿಕೆಯಲಿ ಕಾಸು ಕೂಡಿಟ್ಟಿರುವೆ
………..ಸುಡು ಚಿಂತೆ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...