ಸೂತ್ರ

ಯಾರಿಗೆ ಏನೆಲ್ಲ ಕೊಟ್ಟೆ
ಯಾರಿಂದ ಏನೆಲ್ಲ ಪಡೆದೆ?

ಪ್ರೀತಿ, ಸ್ನೇಹ, ಕರುಣೆ
ಕೂಡಿದೆ.

ಸೇಡನ್ನು ಕೇಡಿನಿಂದಲೂ
ಸಂಚನ್ನು ವಂಚನೆಯಿಂದಲೂ
ಗುಣಿಸಿದೆ

ಪ್ರೇಮವನ್ನು ಕಾಮನೆಯಿಂದ
ಭಾಗಿಸಿದೆ.

ಆನಂದ-ಅನುಭೂತಿಯ ಮೂಲ?
ತಡಕಾಡಿದೆ…

ಲೆಕ್ಕ ಪಕ್ಕಾ ಹೌದೋ ಅಲ್ಲವೋ
ಅನುಮಾನ…
ತಾಳೆ ನೋಡಿದರಾಯಿತು ನಾಳೆ
ಎಂದು ಎವೆ ಮುಚ್ಚಿ ಇಳಿದೆ
ಒಳಗೆ.

ಮುಚ್ಚಿದ ಕೂಡಲೆ ಕಣ್ಣು
ಅನಿಸಿತು…
ಹಿತವಾಗಿದೆ ಈ ಮಣ್ಣು!

ಹಂಬಲಿಸಿ ಪಡೆದ
ಈ ಜೀವಮಾನದ ನಿದ್ದೆ
ಎಲ್ಲಿಗೆ ಕರೆದೊಯ್ಯುವುದೋ
ನಾ… ಕಾಣೆ…

ಇದರಾಳ, ಎತ್ತರ, ಉದ್ದಗಲ
ವಿಸ್ತಾರ ಅಳೆದು ವಿವರಿಸುವ
ಸೂತ್ರ ನನ್ನಲ್ಲಿ ಇದ್ದಿದ್ದರೆ…
ಲೆಕ್ಕ ಚುಕ್ತಾ ಮಾಡುತ್ತಿದ್ದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆನಂದನ ಬಿ. ಎ. ಡಿಗ್ರಿ
Next post ಜೀವನ ಸೂತ್ರ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…