ಜೀವನ ಸೂತ್ರ

ನಾನು, ನೀನು
ಬಾಳಿನಲ್ಲಿ
ಒಬ್ಬರನ್ನೊಬ್ಬರು
ನಂಬದಿದ್ದರೆ
ಇರುವುದೇನು ಹೊಂದಿಕೆ?

ಹೆಜ್ಜೆ, ಹೆಜ್ಜೆಗೆ
ಅನುಮಾನಿಸುತ್ತ
ನಡೆದರೆ
ಕಾಣ ಬಹುದೇನು ನೆಮ್ಮದಿ?

ತಪ್ಪು, ಒಪ್ಪು ಸಹಜ
ಅನುಸರಿಸಿ ಕೊಂಡು
ಹೋಗದಿದ್ದರೆ
ಆಗುವವೇನು ಊರ್ಜಿತ?

ದಿನ, ದಿನಕೆ ಕಷ್ಟಗಳು
ಏರುತಿರುವಾಗ
ಒಳಗೂ, ಹೊರಗೂ
ಸಮಸ್ಯೆಗಳು ಬೆಳೆದು ನಿಂತರೆ
ಬಾಳು ಮುರಿಯದಿರುವುದೆ?

ಅದಕ್ಕೆಂತಲಲ್ಲವೆ?
ಗಂಡು, ಹೆಣ್ಣು
ಬೇರೆ, ಬೇರೆ ವ್ಯಕ್ತಿಯಾದರೂ
ಉದ್ದೇಶ ಒಂದೇ ಅಂತಲಲ್ಲವೆ
ಸಮಾಗಮಕೆ ಮನಸು ಕೊಡುವುದು
ನಂಬಿಕೆಯ ಸೂತ್ರ ಹರಿದರೆ
ದಾಂಪತ್ಯವೇಕೆ?
ಇಡೀ ಲೋಕದ ಜೀವನವೇ ಮುರಿದು ಬೀಳುವ
ಸಂಭವವೇ ಜಾಸ್ತಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂತ್ರ
Next post ತುಂಬಿ ಬಂದ ಕಡಲಿಗೆ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…