ಕೈದೋಟ

ನಡೆಯಿರಿ ಮಕ್ಕಳೇ
ಶಾಲೆಯ ಕೈದೋಟಕೆ
ಕೇಳಿರಿ ಕೇಳಿರಿ
ಪುಟಾಣಿ ಮಕ್ಕಳೇ

ದೇಹದ ಬಲವರ್‍ಧನಕೆ
ನಿರ್ಮಲ ಮನಸು ಕಾರಣವು
ಇರದಂತೆ ಕ್ರಿಮಿ ಕೀಟ ಕಸ ಕಡ್ಡಿ
ಸ್ವಚ್ಛ ಮಾಡೋಣ ಮನೆಯನು

ಬೀಸಾಡದಿರಿ ಎಲ್ಲೆಂದರಲ್ಲಿ
ಜೋಡಿಸಿ ವಸ್ತುಗಳ ಒಪ್ಪ ಓರಣದಲಿ
ಹಾಕಿರಿ ಬೇಡವಾದ ಪದಾರ್‍ಥಗಳ
ಅದಕ್ಕಿಟ್ಟ ತೊಟ್ಟಿಯಲಿ

ಮನೆಯೇ ಮಂದಿರವು
ತಿಳಿಯಿರಿ ಇದನು ನೀವು
ಉನ್ನತ ಶಕ್ತಿ ಪಡೆಯಿರಿಲ್ಲಿ
ಎಲ್ಲರ ಪ್ರೀತಿ ವಾತ್ಸಲ್ಯದಿಂದಲಿ

ಸಸಿಗಳ ನೆಡಿರಿ ಕಳೆಯನು ಕೀಳಿರಿ
ಕೆಸರಾಗಲಿ ಬೆರಳು ಹಸನಾಗಲಿ ಬದುಕು
ಗಿಡ ಮರ ಬಳ್ಳಿಗಳ ಸಾನ್ನಿಧ್ಯತೆಯಲಿ
ಶುದ್ಧ ಪ್ರಾಣವಾಯು ಸಿಗಲಿ

ಬೆಳೆಯಿರಿ ಪ್ರಕೃತಿ ಮಡಿಲಲಿ
ದೇಹ ಪರಿಶುದ್ಧವಾಗಲಿ
ಸಹೋದರತೆ ಸಮಾನತೆ
ರಕ್ತದಲಿ ಮಿಳಿತವಾಗಲಿ

ನೀವಾಗಿರಿ ಶ್ರವಣ
ಅವ್ವ ಅಪ್ಪನ ಸೇವೆ ಮಾಡುತಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಧನೆ
Next post ಓಲೆ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…