Home / ಕವನ / ಕವಿತೆ / ಅಳಲು

ಅಳಲು

ಮೊಬೈಲು ಎಸ್ಸೆಮ್ಮೆಸ್ಸು ಬಂದು
ಭಾವಿಸುವರು ರದ್ದಿ ಕಾಗದದಂತೆ
ಕೋರಿಯರ್ ಆನ್‌ಲೈನು ಬಂದು
ಕೈಗೆ ಕೋಲು ಬಂದಂತೆ ಭಾವಿಸಿ

ಸಾಲದು ಎಂಬುದಕೆ
ಕಾಯಿನ್ ಬೂತು ವಕ್ಕರಿಸಿದ್ದು
ಬಿಟಿ ಬದನೆ ಬಂದಂತೆ
ಎನ್ನ ಕುಲಕ್ಕೆ ಆಯಿತು ಸಂಚಕಾರ

ಈ ಜಗತ್ತೇ ಹಾಗೆ-
ಹೊಟ್ಟೆ ತುಂಬಿಸುವವರಿಲ್ಲ
ಅರೆ ಹೊಟ್ಟೆಯಲಿ ಕಾದು ಕುಳಿತಿಹೆನು
ಚಾತಕ ಪಕ್ಷಿಯಂತೆ

ಎನ್ನ ಹೊಟ್ಟೆ ತುಂಬಿಸಿ
ನನ್ನ ನಂಬಿದವರ ಹಸಿವ ನೀಗಿಸಿ
ಸದಾ ಸಿದ್ಧ ನಿಮ್ಮ ಸೇವೆಗೆಂದು
ಊಹಿಸಿ ನನ್ನ ಸ್ಥಿತಿ-

ಬಳಿದಿಹರು ಎನ್ನ ಮೈಗೆ ಬಣ್ಣ ಕೆಂಪು
ಚಿಕ್ಕವರಿಂದ ದೊಡ್ಡವರವರೆಗೆ
ಮುಟ್ಟುವರು ಪ್ರೀತಿಯಲಿ
ಪಡುವರು ಸಂತಸ ಮೈ ಸವರುತಲಿ

ಕೋರ್‍ಟು ಕಛೇರಿ ಬಸ್ಟ್ಯಾಂಡಿನಲಿ
ಶಾಲಾ ಕಾಲೇಜು ಪೇಟೆ ಬಜಾರಿನಲಿ
ನನ್ನಯ ಠಾವು ಆದರೂ!
ಮುಖ ಹಾಕುವವರಿಲ್ಲ ನನ್ನ ಕಡೆಗೆ

ಜೋಕುಮಾರನ ಬಾಯಿಗೆ
ಮೆತ್ತಿದ ಬೆಣ್ಣೆಯಂತೆ
ಹೊಟ್ಟೆ ತುಂಬಿ ಬಿರಿದು ತುಳುಕುತಿದ್ದರೂ
ತುರುಕುತಿದ್ದರು ಎನ್ನ ಬಾಯಿಗೆ

ಆದರೀಗ!
ಕಳಾಹೀನ ಸವಕಲು ಮಸುಕು ಡಬ್ಬಿ
ಯಾರಿಗೂ ಬೇಕಿಲ್ಲ ನಾನು
ಯಾರಿಗೂ ಬೇಕಿಲ್ಲ ನಾನು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...