Home / ಕವನ / ಕವಿತೆ / ಅಳಲು

ಅಳಲು

ಮೊಬೈಲು ಎಸ್ಸೆಮ್ಮೆಸ್ಸು ಬಂದು
ಭಾವಿಸುವರು ರದ್ದಿ ಕಾಗದದಂತೆ
ಕೋರಿಯರ್ ಆನ್‌ಲೈನು ಬಂದು
ಕೈಗೆ ಕೋಲು ಬಂದಂತೆ ಭಾವಿಸಿ

ಸಾಲದು ಎಂಬುದಕೆ
ಕಾಯಿನ್ ಬೂತು ವಕ್ಕರಿಸಿದ್ದು
ಬಿಟಿ ಬದನೆ ಬಂದಂತೆ
ಎನ್ನ ಕುಲಕ್ಕೆ ಆಯಿತು ಸಂಚಕಾರ

ಈ ಜಗತ್ತೇ ಹಾಗೆ-
ಹೊಟ್ಟೆ ತುಂಬಿಸುವವರಿಲ್ಲ
ಅರೆ ಹೊಟ್ಟೆಯಲಿ ಕಾದು ಕುಳಿತಿಹೆನು
ಚಾತಕ ಪಕ್ಷಿಯಂತೆ

ಎನ್ನ ಹೊಟ್ಟೆ ತುಂಬಿಸಿ
ನನ್ನ ನಂಬಿದವರ ಹಸಿವ ನೀಗಿಸಿ
ಸದಾ ಸಿದ್ಧ ನಿಮ್ಮ ಸೇವೆಗೆಂದು
ಊಹಿಸಿ ನನ್ನ ಸ್ಥಿತಿ-

ಬಳಿದಿಹರು ಎನ್ನ ಮೈಗೆ ಬಣ್ಣ ಕೆಂಪು
ಚಿಕ್ಕವರಿಂದ ದೊಡ್ಡವರವರೆಗೆ
ಮುಟ್ಟುವರು ಪ್ರೀತಿಯಲಿ
ಪಡುವರು ಸಂತಸ ಮೈ ಸವರುತಲಿ

ಕೋರ್‍ಟು ಕಛೇರಿ ಬಸ್ಟ್ಯಾಂಡಿನಲಿ
ಶಾಲಾ ಕಾಲೇಜು ಪೇಟೆ ಬಜಾರಿನಲಿ
ನನ್ನಯ ಠಾವು ಆದರೂ!
ಮುಖ ಹಾಕುವವರಿಲ್ಲ ನನ್ನ ಕಡೆಗೆ

ಜೋಕುಮಾರನ ಬಾಯಿಗೆ
ಮೆತ್ತಿದ ಬೆಣ್ಣೆಯಂತೆ
ಹೊಟ್ಟೆ ತುಂಬಿ ಬಿರಿದು ತುಳುಕುತಿದ್ದರೂ
ತುರುಕುತಿದ್ದರು ಎನ್ನ ಬಾಯಿಗೆ

ಆದರೀಗ!
ಕಳಾಹೀನ ಸವಕಲು ಮಸುಕು ಡಬ್ಬಿ
ಯಾರಿಗೂ ಬೇಕಿಲ್ಲ ನಾನು
ಯಾರಿಗೂ ಬೇಕಿಲ್ಲ ನಾನು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...