ಕಂಪನವೇ…..

ಕೆಂಪು ಉಡುಪಿನ ಚೆಲುವೆಯ
ಕುಡಿ ನೋಟದ ಗಾಳಕೆ ಸಿಲುಕದವರಾರು?
ಈ ಬೇರಿಗೆ ಕೆಂಪಂಚಿನ ಸೀರೆ
ಸರೆಗು ಸೋಕಿದರು ಸಾಕು ಕೊನರುವುದು

ಕೆಂಪು ಅಧರಲಿ ನಗೆ ಮಿಂಚಿದರೆ
ಮಲೆನಾಡಿನ ಚಳಿಯಲ್ಲೂ
ಮೈ ಬಿಸಿಯೇರತೊಡಗುವುದು

ಮನಕ್ಕೊಪ್ಪುವ ರಕ್ತವರ್ಣದ ಧಿರಿಸು
ಧರಿಸಿದ ಅಂದಗಾತಿ ಕಂಡರೆ ಬೋಲ್ಡ್
ಪರ್ಸನಲ್ಲಿದ್ದ ಧನ ಕನಕಾದಿಗಳೆಲ್ಲ
ನೀರೆಯ ಮೇಲೆ ನೀರಿನಂತೆ ಸುರಿಯಲಾರನೇ

ಕೆಂಪೆಂದರೆ ರಕ್ತ, ರಕ್ತವೆಂದರೆ ಅಪಾಯ
ಕೆಂಪು ಅಪಾಯ ಹೆಣ್ಣು ಅಪಾಯ
ಅಪಾಯ ಗುಣಿಸು ಅಪಾಯ ಆಗ್ಬಿಟ್ಟರೆ

ಬೆಂಕಿ ಚಂಡು
ಮುಟ್ಟ ಹೋದರೆ ಸುಡದಿದ್ದೀತೆ
ಕೆಂಪೇ ಹಾಗೆ ಕಂಪಿಸದಿದ್ದೀತೆ ಹೃದಯ

ಕೆಂಪು ಮೆಣಸಿನ ಘಾಟಿದ್ದ ಹಾಗೆ
ತಿಂದಷ್ಟು ಖಾರವೇ
ಆದರೂ ತೀರದು ತಿನ್ನುವ ಬಯಕೆ
ಮತ್ತಷ್ಟು ಸೆಳೆತಕ್ಕೊಳಗಾಗುವುದು

ಕೆಂಪು ಅರಿವೆ ತೊಟ್ಟವರ
ಬಿಡದೆ ಗೂಳಿ ಬರುವುದು ಅಟ್ಟಿಸಿ
ಕಂಪನವೇ ಕೆಂಪು ಕೆಂಪೆಂದರೆ?
ಕೆಂಪು ಕಂಪನಕೆ ದಾರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಟ
Next post ಮನುವಿನ ರಾಣಿ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…