ಋ….ಣ

ಒಂದೇ ಮಾತು ಒಂದೇ ಮನಸು
ಒಂದೇ ನಡೆ ಒಂದಾಗಲಿ ಈ ನಾಡಿನ್ಯಾಗ
ಡಾಲರ್‌ಗಾಗಿ ಭಾಷೇನ ಒತ್ತಿ ಇಡೋ ಮಂದಿ
ಈ ನಾಡಿನ ಹಿತ ಹ್ಯಾಂಗ ಕಾಯ್ತಾರ
ಮಾಡ್ತೀವಿ ಕನ್ನಡದ ಪೂಜಿ ಅಂತಾರ
ಆಹ್ವಾನ ಪತ್ರ ಛಾಪಿಸ್ತಾರ ಆಂಗ್ಲ ಭಾಷೆಯೊಳಗ
ಆಂಗ್ಲದ ಗುಂಗಿನ್ಯಾಗ ಇಂಗ್ಲ್ಯಾಂಡ ಮಾಡ್ತಾರ
ಮೇರೀತೈತಿ ತಾರತಮ್ಯ ಬೇಧಭಾವ
ಆಂಗ್ಲ ಭಾಷೇನ ಬಳಸೀ ಬಳಸೀ
ಕೊಲ್ತಾರ ನಮ್ಮ ತಾಯಿ ನುಡೀನ
ಆಂಗ್ಲ ವ್ಯಾಮೋಹದ ಗುಹೆಯೊಳಗಿಂದ
ಹೊರ ಬರ್ರೀ ಕನ್ನಡದ ಬೆಳಕಿಗೆ
ಗುಲಾಮರಾಗ್ಬ್ಯಾಡ್ರಿ ಜಾಗತೀಕರಣದಿಂದ
ಮಾರಿಕೊಳ್ಳಬ್ಯಾಡ್ರಿ ತಮ್ಮತನವ
ಅರಿಯಿರಿ ಕನ್ನಡದ ಮರ್‍ಮಾನ
ಇದಕ್ಕೈತಿ ಭವ್ಯವಾದ ಇತಿಹಾಸ
ಅರಳು ಮಲ್ಲಿಗೀ ಕನ್ನಡದ ಕಂಪ
ದೂರ ದೂರ ಸಾಗರದಾಚೆ ಹರಡ್ಲಿ
ಇವರುಣ್ಣೋದು ಕನ್ನಡದನ್ನಾನ
ಇವರ ಜೀವಕ್ಕ ಕನ್ನಡದುಸಿರು
ಬದುಕು ಕನ್ನಡ ನೆಲ್ದಾಗ
ಕನ್ನಡ ಬ್ಯಾಡಾಂದ್ರ ಹ್ಯಾಂಗ?
ಲೀನವಾಗ್ತೈತಿ ಈ ಕಾಯ
ಕನ್ನಡದ ಮಣ್ಣಿನ್ಯಾಗ
ತೀರಿಸ್ರೀ ಈ ಮಣ್ಣಿನ ಋ….ಣಾನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸವೆಕಲು ನಾಣ್ಯ
Next post ದೇವರು

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…