ಒಂದೇ ಮಾತು ಒಂದೇ ಮನಸು
ಒಂದೇ ನಡೆ ಒಂದಾಗಲಿ ಈ ನಾಡಿನ್ಯಾಗ
ಡಾಲರ್ಗಾಗಿ ಭಾಷೇನ ಒತ್ತಿ ಇಡೋ ಮಂದಿ
ಈ ನಾಡಿನ ಹಿತ ಹ್ಯಾಂಗ ಕಾಯ್ತಾರ
ಮಾಡ್ತೀವಿ ಕನ್ನಡದ ಪೂಜಿ ಅಂತಾರ
ಆಹ್ವಾನ ಪತ್ರ ಛಾಪಿಸ್ತಾರ ಆಂಗ್ಲ ಭಾಷೆಯೊಳಗ
ಆಂಗ್ಲದ ಗುಂಗಿನ್ಯಾಗ ಇಂಗ್ಲ್ಯಾಂಡ ಮಾಡ್ತಾರ
ಮೇರೀತೈತಿ ತಾರತಮ್ಯ ಬೇಧಭಾವ
ಆಂಗ್ಲ ಭಾಷೇನ ಬಳಸೀ ಬಳಸೀ
ಕೊಲ್ತಾರ ನಮ್ಮ ತಾಯಿ ನುಡೀನ
ಆಂಗ್ಲ ವ್ಯಾಮೋಹದ ಗುಹೆಯೊಳಗಿಂದ
ಹೊರ ಬರ್ರೀ ಕನ್ನಡದ ಬೆಳಕಿಗೆ
ಗುಲಾಮರಾಗ್ಬ್ಯಾಡ್ರಿ ಜಾಗತೀಕರಣದಿಂದ
ಮಾರಿಕೊಳ್ಳಬ್ಯಾಡ್ರಿ ತಮ್ಮತನವ
ಅರಿಯಿರಿ ಕನ್ನಡದ ಮರ್ಮಾನ
ಇದಕ್ಕೈತಿ ಭವ್ಯವಾದ ಇತಿಹಾಸ
ಅರಳು ಮಲ್ಲಿಗೀ ಕನ್ನಡದ ಕಂಪ
ದೂರ ದೂರ ಸಾಗರದಾಚೆ ಹರಡ್ಲಿ
ಇವರುಣ್ಣೋದು ಕನ್ನಡದನ್ನಾನ
ಇವರ ಜೀವಕ್ಕ ಕನ್ನಡದುಸಿರು
ಬದುಕು ಕನ್ನಡ ನೆಲ್ದಾಗ
ಕನ್ನಡ ಬ್ಯಾಡಾಂದ್ರ ಹ್ಯಾಂಗ?
ಲೀನವಾಗ್ತೈತಿ ಈ ಕಾಯ
ಕನ್ನಡದ ಮಣ್ಣಿನ್ಯಾಗ
ತೀರಿಸ್ರೀ ಈ ಮಣ್ಣಿನ ಋ….ಣಾನ.
*****
Related Post
ಸಣ್ಣ ಕತೆ
-
ಕೇರೀಜಂ…
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…
-
ಗುಲ್ಬಾಯಿ
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…
-
ಸ್ನೇಹಲತಾ
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…
-
ಕರಾಚಿ ಕಾರಣೋರು
ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…