Home / ಕವನ / ಕವಿತೆ / ಋ….ಣ

ಋ….ಣ

ಒಂದೇ ಮಾತು ಒಂದೇ ಮನಸು
ಒಂದೇ ನಡೆ ಒಂದಾಗಲಿ ಈ ನಾಡಿನ್ಯಾಗ
ಡಾಲರ್‌ಗಾಗಿ ಭಾಷೇನ ಒತ್ತಿ ಇಡೋ ಮಂದಿ
ಈ ನಾಡಿನ ಹಿತ ಹ್ಯಾಂಗ ಕಾಯ್ತಾರ
ಮಾಡ್ತೀವಿ ಕನ್ನಡದ ಪೂಜಿ ಅಂತಾರ
ಆಹ್ವಾನ ಪತ್ರ ಛಾಪಿಸ್ತಾರ ಆಂಗ್ಲ ಭಾಷೆಯೊಳಗ
ಆಂಗ್ಲದ ಗುಂಗಿನ್ಯಾಗ ಇಂಗ್ಲ್ಯಾಂಡ ಮಾಡ್ತಾರ
ಮೇರೀತೈತಿ ತಾರತಮ್ಯ ಬೇಧಭಾವ
ಆಂಗ್ಲ ಭಾಷೇನ ಬಳಸೀ ಬಳಸೀ
ಕೊಲ್ತಾರ ನಮ್ಮ ತಾಯಿ ನುಡೀನ
ಆಂಗ್ಲ ವ್ಯಾಮೋಹದ ಗುಹೆಯೊಳಗಿಂದ
ಹೊರ ಬರ್ರೀ ಕನ್ನಡದ ಬೆಳಕಿಗೆ
ಗುಲಾಮರಾಗ್ಬ್ಯಾಡ್ರಿ ಜಾಗತೀಕರಣದಿಂದ
ಮಾರಿಕೊಳ್ಳಬ್ಯಾಡ್ರಿ ತಮ್ಮತನವ
ಅರಿಯಿರಿ ಕನ್ನಡದ ಮರ್‍ಮಾನ
ಇದಕ್ಕೈತಿ ಭವ್ಯವಾದ ಇತಿಹಾಸ
ಅರಳು ಮಲ್ಲಿಗೀ ಕನ್ನಡದ ಕಂಪ
ದೂರ ದೂರ ಸಾಗರದಾಚೆ ಹರಡ್ಲಿ
ಇವರುಣ್ಣೋದು ಕನ್ನಡದನ್ನಾನ
ಇವರ ಜೀವಕ್ಕ ಕನ್ನಡದುಸಿರು
ಬದುಕು ಕನ್ನಡ ನೆಲ್ದಾಗ
ಕನ್ನಡ ಬ್ಯಾಡಾಂದ್ರ ಹ್ಯಾಂಗ?
ಲೀನವಾಗ್ತೈತಿ ಈ ಕಾಯ
ಕನ್ನಡದ ಮಣ್ಣಿನ್ಯಾಗ
ತೀರಿಸ್ರೀ ಈ ಮಣ್ಣಿನ ಋ….ಣಾನ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...