ಉರಿ

ಈ ನಾಡೊಳು ಬದುಕಲು ಬಡಿವಾರ ಬೇಕೆ?
ಎತ್ತನೋಡಿದರಲ್ಲಿ ಪರಿವಾರ
ಉಳಿಸುವುದಿಲ್ಲ ನಮ್ಮ ಪರಿವಾರ

ಪ್ರೀತಿ ಇಲ್ಲವೆಂದ ಮೇಲೆ
ಬದುಕುವುದಾದರು ಹೇಗೆ?
ದ್ವೇಷ ಹುಟ್ಟು ಹಾಕುವ
ಧರ್ಮವೇತಕೆ ಮನುಜ

ನಡೆದೇ ಹೋಯಿತು
ಮನುಕುಲದ ಹೇಯ ಕೃತ್ಯ
ಯಾರದೋ ಅಧಿಕಾರದ ಅಮಲಿನಲಿ
ಹೊತ್ತಿ ಉರಿಯಿತು
ಈ ನಾಡು ಕ್ಷಣ ಮಾತ್ರದಲಿ

ನೊಂದವರೆಷ್ಟೋ, ಬೆಂದವರೆಷ್ಟೋ
ಪ್ರೀತಿ ದಹಿಸಿತು ದ್ವೇಷಾಗ್ನಿಯಲಿ
ಮಾಡಿದರು ಎಲ್ಲರ ಮನ ಧೂಳೀಪಟ
ಒಂದುಕಡೆ ಲಾಟಿ ಬೂಟಿನೊದೆತ
ಮತ್ತೊಂದು ಕಡೆ ಹೆಂಗಸರ ಮಕ್ಕಳ ಆಕ್ರಂದನ

ಪಕಾಸೆ ಹಂಚು, ಗೋಡೆಗಳು
ಅರೆ ಬೆಂದು ದುಃಖ ದುಮ್ಮಾನದಲಿ
ಹಾಡಾತಾವು ನೋವಿನ ಹಾಡ

ಧರ್ಮಾಂದ ಉಗ್ರರ ಅಟ್ಟಹಾಸಕೆ
ಮಾನವೀಯ ಸಂಬಂಧಗಳು, ಹೃದಯವಂತಿಕೆ
ಸತ್ತು ಹೋದದ್ದು ಈಗ ಇತಿಹಾಸ

ಯಾರೂ ಬಿತ್ತಲಿಲ್ಲವೇ ಸಮನ್ವಯದ ಮನಸು
ಯಾರೂ ಹತ್ತಿಕ್ಕಲಿಲ್ಲವೇ ಧರ್ಮಾಂಧತೆಯನು
ಮನದಲಿ ಅರಳುವುದುಂಟೆ ಸಮನ್ವಯ?
ಕದಡಿದ ಮನ ಒಂದಾಗುವುದೆಂತು?
ಎಂದು ಕಾಣುವೆವು
ಹುಣ್ಣಿಮೆಯ ಬೆಳದಿಂಗಳ
*****
೧೬-೪-೨೦೧೦ರ ಶಿವಮೊಗ್ಗದ ಸೃಷ್ಟಿ ರಾಜ್‌ಟೈಮ್ಸ್‌ನಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...