ಉರಿ

ಈ ನಾಡೊಳು ಬದುಕಲು ಬಡಿವಾರ ಬೇಕೆ?
ಎತ್ತನೋಡಿದರಲ್ಲಿ ಪರಿವಾರ
ಉಳಿಸುವುದಿಲ್ಲ ನಮ್ಮ ಪರಿವಾರ

ಪ್ರೀತಿ ಇಲ್ಲವೆಂದ ಮೇಲೆ
ಬದುಕುವುದಾದರು ಹೇಗೆ?
ದ್ವೇಷ ಹುಟ್ಟು ಹಾಕುವ
ಧರ್ಮವೇತಕೆ ಮನುಜ

ನಡೆದೇ ಹೋಯಿತು
ಮನುಕುಲದ ಹೇಯ ಕೃತ್ಯ
ಯಾರದೋ ಅಧಿಕಾರದ ಅಮಲಿನಲಿ
ಹೊತ್ತಿ ಉರಿಯಿತು
ಈ ನಾಡು ಕ್ಷಣ ಮಾತ್ರದಲಿ

ನೊಂದವರೆಷ್ಟೋ, ಬೆಂದವರೆಷ್ಟೋ
ಪ್ರೀತಿ ದಹಿಸಿತು ದ್ವೇಷಾಗ್ನಿಯಲಿ
ಮಾಡಿದರು ಎಲ್ಲರ ಮನ ಧೂಳೀಪಟ
ಒಂದುಕಡೆ ಲಾಟಿ ಬೂಟಿನೊದೆತ
ಮತ್ತೊಂದು ಕಡೆ ಹೆಂಗಸರ ಮಕ್ಕಳ ಆಕ್ರಂದನ

ಪಕಾಸೆ ಹಂಚು, ಗೋಡೆಗಳು
ಅರೆ ಬೆಂದು ದುಃಖ ದುಮ್ಮಾನದಲಿ
ಹಾಡಾತಾವು ನೋವಿನ ಹಾಡ

ಧರ್ಮಾಂದ ಉಗ್ರರ ಅಟ್ಟಹಾಸಕೆ
ಮಾನವೀಯ ಸಂಬಂಧಗಳು, ಹೃದಯವಂತಿಕೆ
ಸತ್ತು ಹೋದದ್ದು ಈಗ ಇತಿಹಾಸ

ಯಾರೂ ಬಿತ್ತಲಿಲ್ಲವೇ ಸಮನ್ವಯದ ಮನಸು
ಯಾರೂ ಹತ್ತಿಕ್ಕಲಿಲ್ಲವೇ ಧರ್ಮಾಂಧತೆಯನು
ಮನದಲಿ ಅರಳುವುದುಂಟೆ ಸಮನ್ವಯ?
ಕದಡಿದ ಮನ ಒಂದಾಗುವುದೆಂತು?
ಎಂದು ಕಾಣುವೆವು
ಹುಣ್ಣಿಮೆಯ ಬೆಳದಿಂಗಳ
*****
೧೬-೪-೨೦೧೦ರ ಶಿವಮೊಗ್ಗದ ಸೃಷ್ಟಿ ರಾಜ್‌ಟೈಮ್ಸ್‌ನಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...