ಉರಿ

ಈ ನಾಡೊಳು ಬದುಕಲು ಬಡಿವಾರ ಬೇಕೆ?
ಎತ್ತನೋಡಿದರಲ್ಲಿ ಪರಿವಾರ
ಉಳಿಸುವುದಿಲ್ಲ ನಮ್ಮ ಪರಿವಾರ

ಪ್ರೀತಿ ಇಲ್ಲವೆಂದ ಮೇಲೆ
ಬದುಕುವುದಾದರು ಹೇಗೆ?
ದ್ವೇಷ ಹುಟ್ಟು ಹಾಕುವ
ಧರ್ಮವೇತಕೆ ಮನುಜ

ನಡೆದೇ ಹೋಯಿತು
ಮನುಕುಲದ ಹೇಯ ಕೃತ್ಯ
ಯಾರದೋ ಅಧಿಕಾರದ ಅಮಲಿನಲಿ
ಹೊತ್ತಿ ಉರಿಯಿತು
ಈ ನಾಡು ಕ್ಷಣ ಮಾತ್ರದಲಿ

ನೊಂದವರೆಷ್ಟೋ, ಬೆಂದವರೆಷ್ಟೋ
ಪ್ರೀತಿ ದಹಿಸಿತು ದ್ವೇಷಾಗ್ನಿಯಲಿ
ಮಾಡಿದರು ಎಲ್ಲರ ಮನ ಧೂಳೀಪಟ
ಒಂದುಕಡೆ ಲಾಟಿ ಬೂಟಿನೊದೆತ
ಮತ್ತೊಂದು ಕಡೆ ಹೆಂಗಸರ ಮಕ್ಕಳ ಆಕ್ರಂದನ

ಪಕಾಸೆ ಹಂಚು, ಗೋಡೆಗಳು
ಅರೆ ಬೆಂದು ದುಃಖ ದುಮ್ಮಾನದಲಿ
ಹಾಡಾತಾವು ನೋವಿನ ಹಾಡ

ಧರ್ಮಾಂದ ಉಗ್ರರ ಅಟ್ಟಹಾಸಕೆ
ಮಾನವೀಯ ಸಂಬಂಧಗಳು, ಹೃದಯವಂತಿಕೆ
ಸತ್ತು ಹೋದದ್ದು ಈಗ ಇತಿಹಾಸ

ಯಾರೂ ಬಿತ್ತಲಿಲ್ಲವೇ ಸಮನ್ವಯದ ಮನಸು
ಯಾರೂ ಹತ್ತಿಕ್ಕಲಿಲ್ಲವೇ ಧರ್ಮಾಂಧತೆಯನು
ಮನದಲಿ ಅರಳುವುದುಂಟೆ ಸಮನ್ವಯ?
ಕದಡಿದ ಮನ ಒಂದಾಗುವುದೆಂತು?
ಎಂದು ಕಾಣುವೆವು
ಹುಣ್ಣಿಮೆಯ ಬೆಳದಿಂಗಳ
*****
೧೬-೪-೨೦೧೦ರ ಶಿವಮೊಗ್ಗದ ಸೃಷ್ಟಿ ರಾಜ್‌ಟೈಮ್ಸ್‌ನಲ್ಲಿ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಃಖ
Next post ಎದಗೆ ಬಿದ್ದ ಕತೆ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys