ಉರಿ

ಈ ನಾಡೊಳು ಬದುಕಲು ಬಡಿವಾರ ಬೇಕೆ?
ಎತ್ತನೋಡಿದರಲ್ಲಿ ಪರಿವಾರ
ಉಳಿಸುವುದಿಲ್ಲ ನಮ್ಮ ಪರಿವಾರ

ಪ್ರೀತಿ ಇಲ್ಲವೆಂದ ಮೇಲೆ
ಬದುಕುವುದಾದರು ಹೇಗೆ?
ದ್ವೇಷ ಹುಟ್ಟು ಹಾಕುವ
ಧರ್ಮವೇತಕೆ ಮನುಜ

ನಡೆದೇ ಹೋಯಿತು
ಮನುಕುಲದ ಹೇಯ ಕೃತ್ಯ
ಯಾರದೋ ಅಧಿಕಾರದ ಅಮಲಿನಲಿ
ಹೊತ್ತಿ ಉರಿಯಿತು
ಈ ನಾಡು ಕ್ಷಣ ಮಾತ್ರದಲಿ

ನೊಂದವರೆಷ್ಟೋ, ಬೆಂದವರೆಷ್ಟೋ
ಪ್ರೀತಿ ದಹಿಸಿತು ದ್ವೇಷಾಗ್ನಿಯಲಿ
ಮಾಡಿದರು ಎಲ್ಲರ ಮನ ಧೂಳೀಪಟ
ಒಂದುಕಡೆ ಲಾಟಿ ಬೂಟಿನೊದೆತ
ಮತ್ತೊಂದು ಕಡೆ ಹೆಂಗಸರ ಮಕ್ಕಳ ಆಕ್ರಂದನ

ಪಕಾಸೆ ಹಂಚು, ಗೋಡೆಗಳು
ಅರೆ ಬೆಂದು ದುಃಖ ದುಮ್ಮಾನದಲಿ
ಹಾಡಾತಾವು ನೋವಿನ ಹಾಡ

ಧರ್ಮಾಂದ ಉಗ್ರರ ಅಟ್ಟಹಾಸಕೆ
ಮಾನವೀಯ ಸಂಬಂಧಗಳು, ಹೃದಯವಂತಿಕೆ
ಸತ್ತು ಹೋದದ್ದು ಈಗ ಇತಿಹಾಸ

ಯಾರೂ ಬಿತ್ತಲಿಲ್ಲವೇ ಸಮನ್ವಯದ ಮನಸು
ಯಾರೂ ಹತ್ತಿಕ್ಕಲಿಲ್ಲವೇ ಧರ್ಮಾಂಧತೆಯನು
ಮನದಲಿ ಅರಳುವುದುಂಟೆ ಸಮನ್ವಯ?
ಕದಡಿದ ಮನ ಒಂದಾಗುವುದೆಂತು?
ಎಂದು ಕಾಣುವೆವು
ಹುಣ್ಣಿಮೆಯ ಬೆಳದಿಂಗಳ
*****
೧೬-೪-೨೦೧೦ರ ಶಿವಮೊಗ್ಗದ ಸೃಷ್ಟಿ ರಾಜ್‌ಟೈಮ್ಸ್‌ನಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...