Home / ಕವನ / ಕವಿತೆ / ಬಯಕೆ

ಬಯಕೆ

ಮನ ಬಯಸುತಿದೆ
ಕಂಗಳು ತವಕಿಸುತಿವೆ
ಸಮಾಜದ ಮಾನ ಸಂಮಾನಕೆ
ನಿನ್ನಾ ಹುಡುಕಿದೆ
ಅಗಣಿತ ತಾರಾ ಮಂಡಲಗಳ ನಡುವೆ

ಚೆಲುವು ಮುದ್ದಿನ ರಚನೆಯೇ
ಹೃದಯೋಕ್ತಿಯನು ನುಡಿಯುತ
ಮಾಡಿದೆ ನೀ ಎನ್ನ ಮರುಳ
ನಿನ್ನಾ ಚಿತ್ರವೇ ಮನ ಮನದ ಪುಟದೊಳು
ಕ್ಷಣ ಕ್ಷಣಕು ಬಿಂಬಿಸಿ ಕಾಡುತಿಹುದು
ಹರಿವ ನೀರ ಕಲಕಲ ತರಂಗದೊಳು
ನೀನ್ನಾ ದನಿಯಲಿ ತೇಲಿ ತೇಲಿ ಬರುತಿಹುದು

ದಿವ್ಯ ಸ್ವರೂಪ ತಾಣದಲಿ
ಈ ಜಗವು ಮುಳುಗಿರಲು
ಹಿಡಿತವಿಲ್ಲದ ಈ ಮನ
ಆಸೆಗಳ ತುಂಬಿದ ಕಣಜ
ಹಾತೊರೆಯುತಿದೆ ಏಕಾಂತವನು

ಬಿರುಸಾದ ನುಡಿ ಮಾತುಗಳಿಲ್ಲದೇ
ಎನ್ನ ಜೀವನ ರಥಕೆ ಸಾರಥಿಯಾಗುಬಾ
ನೆಲ ಮುಗಿಲು ಒಂದು ಮಾಡು ಬಾ
ನನ್ನ ಬದುಕ ಹರುಷಕೆ
ಬೊಗಸೆ ತುಂಬ ತಾ ನಿನ್ನಾ ಪ್ರೀತಿಯ

ನೀನಿಲ್ಲದ ಈ ಮನ ಬಳೆ ಸದ್ದಿಲ್ಲದ ಕೋಣೆ
ಕ್ಯಾಷ ಇಲ್ಲದ ಚಕ್ಕು
ಎನ್ನ ಖಾತೆಯಲ್ಲೆಂದೂ
ನಿನ್ನ ಪ್ರೀತಿ ಕರುಣೆಯ ಜಮವಿರಲಿ
*****
ದಿನಾಂಕ : ೨೪-೧೨-೧೯೯೯ರ ಸಾಗರದ ಮಣ್ಣಿನ ವಾಸನೆ ವಾರಪತ್ರಿಕೆಯಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...