Home / ಕವನ / ಕವಿತೆ / ಬಯಕೆ

ಬಯಕೆ

ಮನ ಬಯಸುತಿದೆ
ಕಂಗಳು ತವಕಿಸುತಿವೆ
ಸಮಾಜದ ಮಾನ ಸಂಮಾನಕೆ
ನಿನ್ನಾ ಹುಡುಕಿದೆ
ಅಗಣಿತ ತಾರಾ ಮಂಡಲಗಳ ನಡುವೆ

ಚೆಲುವು ಮುದ್ದಿನ ರಚನೆಯೇ
ಹೃದಯೋಕ್ತಿಯನು ನುಡಿಯುತ
ಮಾಡಿದೆ ನೀ ಎನ್ನ ಮರುಳ
ನಿನ್ನಾ ಚಿತ್ರವೇ ಮನ ಮನದ ಪುಟದೊಳು
ಕ್ಷಣ ಕ್ಷಣಕು ಬಿಂಬಿಸಿ ಕಾಡುತಿಹುದು
ಹರಿವ ನೀರ ಕಲಕಲ ತರಂಗದೊಳು
ನೀನ್ನಾ ದನಿಯಲಿ ತೇಲಿ ತೇಲಿ ಬರುತಿಹುದು

ದಿವ್ಯ ಸ್ವರೂಪ ತಾಣದಲಿ
ಈ ಜಗವು ಮುಳುಗಿರಲು
ಹಿಡಿತವಿಲ್ಲದ ಈ ಮನ
ಆಸೆಗಳ ತುಂಬಿದ ಕಣಜ
ಹಾತೊರೆಯುತಿದೆ ಏಕಾಂತವನು

ಬಿರುಸಾದ ನುಡಿ ಮಾತುಗಳಿಲ್ಲದೇ
ಎನ್ನ ಜೀವನ ರಥಕೆ ಸಾರಥಿಯಾಗುಬಾ
ನೆಲ ಮುಗಿಲು ಒಂದು ಮಾಡು ಬಾ
ನನ್ನ ಬದುಕ ಹರುಷಕೆ
ಬೊಗಸೆ ತುಂಬ ತಾ ನಿನ್ನಾ ಪ್ರೀತಿಯ

ನೀನಿಲ್ಲದ ಈ ಮನ ಬಳೆ ಸದ್ದಿಲ್ಲದ ಕೋಣೆ
ಕ್ಯಾಷ ಇಲ್ಲದ ಚಕ್ಕು
ಎನ್ನ ಖಾತೆಯಲ್ಲೆಂದೂ
ನಿನ್ನ ಪ್ರೀತಿ ಕರುಣೆಯ ಜಮವಿರಲಿ
*****
ದಿನಾಂಕ : ೨೪-೧೨-೧೯೯೯ರ ಸಾಗರದ ಮಣ್ಣಿನ ವಾಸನೆ ವಾರಪತ್ರಿಕೆಯಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...