ಸಿಂಗಾರ

ವನಸಿರಿ ಬೆಳೆದಾವು ಸಾಲೇ ಸಾಲು
ತಲೆದೂಗಿ ಕೈ ಬೀಸಿ ಕರಿತಾವು
ಎಂತೆಂಥಾ ಹಕ್ಕಿಗಳು ಬರತಾವು, ನಲಿತಾವು
ಗೂಡ ಕಟ್ಟತಾವು ಈ ಮಲೆನಾಡಿನೊಳಗ
ಈ ನಾಡಿನೊಳಗ ಅವುಗಳ ಸಂಗಡ
ಹಕ್ಕ್ಯಾಗಿ ಹಾಡೇನಿ ಚುಕ್ಯಾಗಿ ನಲಿದೇನಿ

ಮೆರೆದಾಡುವಾಸೆ, ಕುಣಿದಾಡುವಾಸೆ
ಮತ್ತೊಮ್ಮೆ ಈ ನೆಲದಾಗ ಹುಟ್ಟಿ ಬರುವಾಸೆ
ಪರಗಿ ಹಣ್ಣಾಗುವಾಸೆ, ಇಲ್ಲ ಮುಳ್ಹಣ್ಣಾಗುವಾಸೆ
ಇಲ್ಲ ಸಂಪಿಗೆಹಣ್ಣಾಗುವಾಸೆ
ಇಲ್ಲ ಈ ನೆಲದ ಸಿಂಗಾರವಾಗುವಾಸೆ
ಹಿಂಗಾರದಂತೆ ಜಾಗರವಾಡುವಾಸೆ

ಎನ್ನ ಬೆಳೆಸಿದ ಹಸಿರುಸಿರೇ
ನಾ ಹ್ಯಾಂಗ ಮರೆಯಲಿ ಹೇಳಿ?
ನನ್ನ ಜೀವದಾ ಜೀವ ನೀವೆ
ನಿಮ್ಮ ಕಂಗಳಲಿ ನಾನಿರುವೆ

ಓ ಸಿಂಗಾರವೇ ನಿಮ್ಮ ಹಾಗೆ ನನ್ನ ಮೆರೆಸಿರಿ
ಎನ್ನ ರಕುತದ ಪ್ರತಿ ಕಣ ಕಣದಲಿ
ಈ ನಾಡಿನ ಹೆಸರು ಬರೆಯಲೇ

ನನಗೆ ನಿಮ್ಮ ಜೀವ ತುಂಬಿದಿರಿ
ಎಲೈ ಹಸಿರು ಹಸಿರೇ ನೀವಾದಿರಿ ನನ್ನ ಉಸಿರು
ನಿಮ್ಮ ಬಿಟ್ಟು ಬಹುದೂರ ನಾ ಹೋಗಲಾರೆ
ನೀವಿಲ್ಲದೇ ನಾ ಹ್ಯಾಂಗ ಬದುಕಿರಲಿ
ನಿಮ್ಮ ಜೊತೆಯಲಿ ಸಿಂಗಾರದಂತೆ
ನಾನಿಲ್ಲಿಯೇ ಇರುವಾಸೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಟು
Next post ಮೈಸೂರಿನಿಂದ ಬಂದವರು

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys