ಸಿಂಗಾರ

ವನಸಿರಿ ಬೆಳೆದಾವು ಸಾಲೇ ಸಾಲು
ತಲೆದೂಗಿ ಕೈ ಬೀಸಿ ಕರಿತಾವು
ಎಂತೆಂಥಾ ಹಕ್ಕಿಗಳು ಬರತಾವು, ನಲಿತಾವು
ಗೂಡ ಕಟ್ಟತಾವು ಈ ಮಲೆನಾಡಿನೊಳಗ
ಈ ನಾಡಿನೊಳಗ ಅವುಗಳ ಸಂಗಡ
ಹಕ್ಕ್ಯಾಗಿ ಹಾಡೇನಿ ಚುಕ್ಯಾಗಿ ನಲಿದೇನಿ

ಮೆರೆದಾಡುವಾಸೆ, ಕುಣಿದಾಡುವಾಸೆ
ಮತ್ತೊಮ್ಮೆ ಈ ನೆಲದಾಗ ಹುಟ್ಟಿ ಬರುವಾಸೆ
ಪರಗಿ ಹಣ್ಣಾಗುವಾಸೆ, ಇಲ್ಲ ಮುಳ್ಹಣ್ಣಾಗುವಾಸೆ
ಇಲ್ಲ ಸಂಪಿಗೆಹಣ್ಣಾಗುವಾಸೆ
ಇಲ್ಲ ಈ ನೆಲದ ಸಿಂಗಾರವಾಗುವಾಸೆ
ಹಿಂಗಾರದಂತೆ ಜಾಗರವಾಡುವಾಸೆ

ಎನ್ನ ಬೆಳೆಸಿದ ಹಸಿರುಸಿರೇ
ನಾ ಹ್ಯಾಂಗ ಮರೆಯಲಿ ಹೇಳಿ?
ನನ್ನ ಜೀವದಾ ಜೀವ ನೀವೆ
ನಿಮ್ಮ ಕಂಗಳಲಿ ನಾನಿರುವೆ

ಓ ಸಿಂಗಾರವೇ ನಿಮ್ಮ ಹಾಗೆ ನನ್ನ ಮೆರೆಸಿರಿ
ಎನ್ನ ರಕುತದ ಪ್ರತಿ ಕಣ ಕಣದಲಿ
ಈ ನಾಡಿನ ಹೆಸರು ಬರೆಯಲೇ

ನನಗೆ ನಿಮ್ಮ ಜೀವ ತುಂಬಿದಿರಿ
ಎಲೈ ಹಸಿರು ಹಸಿರೇ ನೀವಾದಿರಿ ನನ್ನ ಉಸಿರು
ನಿಮ್ಮ ಬಿಟ್ಟು ಬಹುದೂರ ನಾ ಹೋಗಲಾರೆ
ನೀವಿಲ್ಲದೇ ನಾ ಹ್ಯಾಂಗ ಬದುಕಿರಲಿ
ನಿಮ್ಮ ಜೊತೆಯಲಿ ಸಿಂಗಾರದಂತೆ
ನಾನಿಲ್ಲಿಯೇ ಇರುವಾಸೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಟು
Next post ಮೈಸೂರಿನಿಂದ ಬಂದವರು

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…