ಯಾರು….?

ನನ್ನ ಹಾದಿಯಲ್ಲಿ ಹೂವ ಚೆಲ್ಲಿ
ಸ್ವರ್ಗದ ದಾರಿಯನು
ಸುಗಮ ಗೊಳಿಸಿದವರಾರು?

ಮೇಲೆ ಮೇಲೆ
ನೀಲ ಗಗನಕ್ಕೇರಿಸಿ
ಮಿನುಗುವ ತಾರೆ ಮಾಡಿದವರಾರು?

ಈ ಹಕ್ಕಿಗೆ ಗುಟುಕನು ಕೊಟ್ಟು
ಗೂಡ ಬಿಟ್ಟು ಮೇಲೆ ಹಾರಲು
ರೆಕ್ಕೆಗಳಿಗೆ ಬಲವ ತುಂಬಿದವರಾರು?

ಪ್ರೀತಿ ವಾತ್ಸಲ್ಯದಿಂದ
ನಾಳೆಗಾಗಿ ಬೆಳಕ ಚೆಲ್ಲಿ
ಕಿರಣ ಮಾಲೆಯಲ್ಲಿ ನನ್ನ ಸೇರಿಸಿದವರಾರು?

ಈ ಕೊರಳಿಗೆ ಚಿಲಿಪಿಲಿ ಸ್ವರವ ತುಂಬಿ
ನಾ ಹಾಡುವ ಹಾಡಿಗೆ
ರಾಗ ಮಾಲಿಕೆ ಕಟ್ಟಿದವರಾರು?

ನಾಡು ನುಡಿಗಾಗಿ
ಎನ್ನ ಹೃದಯ ಸದಾ
ಮಿಡಿಯುವಂತೆ ಚೈತನ್ಯ ತುಂಬಿದವರಾರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಧ್ಯವಯಸ್ಸು
Next post ಅವನೊಬ್ಬನನ್ನೇ ಬಿಟ್ಟು ಹೋದ ರಾತ್ರಿ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…