Home / ಕವನ / ಕವಿತೆ / ಗರ್‍ಜಿಸುವುದನು ಕಲಿತು ಸಿಂಹವಾಗಿ

ಗರ್‍ಜಿಸುವುದನು ಕಲಿತು ಸಿಂಹವಾಗಿ

ಎನ್ನ ದೇಹವೇ ಕನ್ನಡಾಲಯ
ಕನ್ನಡ ಕನ್ನಡವೆನ್ನಲೇತಕೆ ಭಯ
ಕನ್ನಡಕೆ ನಮೋ ನಮೋ ಎನ್ನುವೆ
ಎನ್ನ ಮಂತ್ರವೊಂದೇ ಅದುವೇ ಕನ್ನಡ

ಬಾಡದ ಹೂವಿನ ಮಾಲೆ ಈ ಕನ್ನಡ
ನಂಬಿದರೆ ಕೈಬಿಡದೆಂದಿಗೂ ಈ ಕನ್ನಡ
ಪ್ರೀತಿಯ ಕನ್ನಡವೇ ಎನ್ನುಸಿರು
ತಾಯ್ತುಡಿಯಿಲ್ಲದೆನಗೆ ಬದುಕಿಲ್ಲ

ಪ್ರೀತಿಯಿಂದಲಿ ಬರೆಯಲದು
ಮಾಡುವುದು ರೋಗ ದೂರವ
ಜಪ ಮಾಡಿದರೆ ಕನ್ನಡ ಎಂದು
ಮೋಕ್ಷಕೆ ದಾರಿಯಾಗುವುದಯ್ಯ

ಎಲೈ ಮನುಜನೇ ಕನ್ನಡಕೆ ಕೈಯೆತ್ತು
ಬಾರದೆಂದಿಗೂ ನಿನಗಾಪತ್ತು
ಕನ್ನಡ ಕನ್ನಡವೆಂದು ಮೂಗು ಮುರಿದರೆ
ಬರುವುದಪವಾದ ನಿನಗಂದು

ಕನ್ನಡದ ಗಾನ ಮೊಳಗುತಿರಲು
ಮೈನವಿರೇಳುವುದಯ್ಯ
ಸೊಬಗಿನ ಐಸಿರಿಯ ನಾಡು
ನನ್ನೊಲವಿನ ಚಲುವಿನ ಕನ್ನಡ

ರಾಕ್ಷಸನಂತೆರಗುತಿದೆ
ತಾಯ್ನುಡಿಯ ಮೇಲೆ ಹೊರನುಡಿಯು
ಮಹಾಮಹಿಮೆಯ ಕನ್ನಡ
ಹೊರನಾಡಿಗೆ ಕಂಡಿತು ರಾಮನಾಗಿ

ಕನ್ನಡದ ದರುಶನದಿಂದ
ಹೊರನುಡಿಯು ಸರಿಯಿತು ಹಿಂದಕೆ
ಕನ್ನಡ ಕನ್ನಡವೆಂದರೆ
ಒಡನೇ ಓಡುವುದು ಭೀತಿ

‘ಮಹಾಜನ ವರದಿ ಜಾರಿಗೊಳಿಸಿ
ಗಡಿಸಮಸ್ಯೆಗೆ ಮಂಗಳ ಹಾಡಿ’ ಎಂದು
ಗರ್‍ಜಿಸುವುದನ್ನು ಕಲಿತು ಸಿಂಹವಾಗಿ
ಗೆಲುವಿದ್ದರದಕೆ ನಿಮಗೆ ಶಕ್ತಿ ಕಣಾ
*****
೨೯-೧೦-೨೦೦೬ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ
ಜನವರಿ ೨೦೧೦ರಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಂದ ‘ಕಾವ್ಯ ಕಲರವ’ ಕವನ ಸಂಕಲನದಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ