Home / ಕವನ / ಕವಿತೆ / ಗರ್‍ಜಿಸುವುದನು ಕಲಿತು ಸಿಂಹವಾಗಿ

ಗರ್‍ಜಿಸುವುದನು ಕಲಿತು ಸಿಂಹವಾಗಿ

ಎನ್ನ ದೇಹವೇ ಕನ್ನಡಾಲಯ
ಕನ್ನಡ ಕನ್ನಡವೆನ್ನಲೇತಕೆ ಭಯ
ಕನ್ನಡಕೆ ನಮೋ ನಮೋ ಎನ್ನುವೆ
ಎನ್ನ ಮಂತ್ರವೊಂದೇ ಅದುವೇ ಕನ್ನಡ

ಬಾಡದ ಹೂವಿನ ಮಾಲೆ ಈ ಕನ್ನಡ
ನಂಬಿದರೆ ಕೈಬಿಡದೆಂದಿಗೂ ಈ ಕನ್ನಡ
ಪ್ರೀತಿಯ ಕನ್ನಡವೇ ಎನ್ನುಸಿರು
ತಾಯ್ತುಡಿಯಿಲ್ಲದೆನಗೆ ಬದುಕಿಲ್ಲ

ಪ್ರೀತಿಯಿಂದಲಿ ಬರೆಯಲದು
ಮಾಡುವುದು ರೋಗ ದೂರವ
ಜಪ ಮಾಡಿದರೆ ಕನ್ನಡ ಎಂದು
ಮೋಕ್ಷಕೆ ದಾರಿಯಾಗುವುದಯ್ಯ

ಎಲೈ ಮನುಜನೇ ಕನ್ನಡಕೆ ಕೈಯೆತ್ತು
ಬಾರದೆಂದಿಗೂ ನಿನಗಾಪತ್ತು
ಕನ್ನಡ ಕನ್ನಡವೆಂದು ಮೂಗು ಮುರಿದರೆ
ಬರುವುದಪವಾದ ನಿನಗಂದು

ಕನ್ನಡದ ಗಾನ ಮೊಳಗುತಿರಲು
ಮೈನವಿರೇಳುವುದಯ್ಯ
ಸೊಬಗಿನ ಐಸಿರಿಯ ನಾಡು
ನನ್ನೊಲವಿನ ಚಲುವಿನ ಕನ್ನಡ

ರಾಕ್ಷಸನಂತೆರಗುತಿದೆ
ತಾಯ್ನುಡಿಯ ಮೇಲೆ ಹೊರನುಡಿಯು
ಮಹಾಮಹಿಮೆಯ ಕನ್ನಡ
ಹೊರನಾಡಿಗೆ ಕಂಡಿತು ರಾಮನಾಗಿ

ಕನ್ನಡದ ದರುಶನದಿಂದ
ಹೊರನುಡಿಯು ಸರಿಯಿತು ಹಿಂದಕೆ
ಕನ್ನಡ ಕನ್ನಡವೆಂದರೆ
ಒಡನೇ ಓಡುವುದು ಭೀತಿ

‘ಮಹಾಜನ ವರದಿ ಜಾರಿಗೊಳಿಸಿ
ಗಡಿಸಮಸ್ಯೆಗೆ ಮಂಗಳ ಹಾಡಿ’ ಎಂದು
ಗರ್‍ಜಿಸುವುದನ್ನು ಕಲಿತು ಸಿಂಹವಾಗಿ
ಗೆಲುವಿದ್ದರದಕೆ ನಿಮಗೆ ಶಕ್ತಿ ಕಣಾ
*****
೨೯-೧೦-೨೦೦೬ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ
ಜನವರಿ ೨೦೧೦ರಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಂದ ‘ಕಾವ್ಯ ಕಲರವ’ ಕವನ ಸಂಕಲನದಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...