Home / ಕವನ / ಕವಿತೆ / ಗರ್‍ಜಿಸುವುದನು ಕಲಿತು ಸಿಂಹವಾಗಿ

ಗರ್‍ಜಿಸುವುದನು ಕಲಿತು ಸಿಂಹವಾಗಿ

ಎನ್ನ ದೇಹವೇ ಕನ್ನಡಾಲಯ
ಕನ್ನಡ ಕನ್ನಡವೆನ್ನಲೇತಕೆ ಭಯ
ಕನ್ನಡಕೆ ನಮೋ ನಮೋ ಎನ್ನುವೆ
ಎನ್ನ ಮಂತ್ರವೊಂದೇ ಅದುವೇ ಕನ್ನಡ

ಬಾಡದ ಹೂವಿನ ಮಾಲೆ ಈ ಕನ್ನಡ
ನಂಬಿದರೆ ಕೈಬಿಡದೆಂದಿಗೂ ಈ ಕನ್ನಡ
ಪ್ರೀತಿಯ ಕನ್ನಡವೇ ಎನ್ನುಸಿರು
ತಾಯ್ತುಡಿಯಿಲ್ಲದೆನಗೆ ಬದುಕಿಲ್ಲ

ಪ್ರೀತಿಯಿಂದಲಿ ಬರೆಯಲದು
ಮಾಡುವುದು ರೋಗ ದೂರವ
ಜಪ ಮಾಡಿದರೆ ಕನ್ನಡ ಎಂದು
ಮೋಕ್ಷಕೆ ದಾರಿಯಾಗುವುದಯ್ಯ

ಎಲೈ ಮನುಜನೇ ಕನ್ನಡಕೆ ಕೈಯೆತ್ತು
ಬಾರದೆಂದಿಗೂ ನಿನಗಾಪತ್ತು
ಕನ್ನಡ ಕನ್ನಡವೆಂದು ಮೂಗು ಮುರಿದರೆ
ಬರುವುದಪವಾದ ನಿನಗಂದು

ಕನ್ನಡದ ಗಾನ ಮೊಳಗುತಿರಲು
ಮೈನವಿರೇಳುವುದಯ್ಯ
ಸೊಬಗಿನ ಐಸಿರಿಯ ನಾಡು
ನನ್ನೊಲವಿನ ಚಲುವಿನ ಕನ್ನಡ

ರಾಕ್ಷಸನಂತೆರಗುತಿದೆ
ತಾಯ್ನುಡಿಯ ಮೇಲೆ ಹೊರನುಡಿಯು
ಮಹಾಮಹಿಮೆಯ ಕನ್ನಡ
ಹೊರನಾಡಿಗೆ ಕಂಡಿತು ರಾಮನಾಗಿ

ಕನ್ನಡದ ದರುಶನದಿಂದ
ಹೊರನುಡಿಯು ಸರಿಯಿತು ಹಿಂದಕೆ
ಕನ್ನಡ ಕನ್ನಡವೆಂದರೆ
ಒಡನೇ ಓಡುವುದು ಭೀತಿ

‘ಮಹಾಜನ ವರದಿ ಜಾರಿಗೊಳಿಸಿ
ಗಡಿಸಮಸ್ಯೆಗೆ ಮಂಗಳ ಹಾಡಿ’ ಎಂದು
ಗರ್‍ಜಿಸುವುದನ್ನು ಕಲಿತು ಸಿಂಹವಾಗಿ
ಗೆಲುವಿದ್ದರದಕೆ ನಿಮಗೆ ಶಕ್ತಿ ಕಣಾ
*****
೨೯-೧೦-೨೦೦೬ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ
ಜನವರಿ ೨೦೧೦ರಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಂದ ‘ಕಾವ್ಯ ಕಲರವ’ ಕವನ ಸಂಕಲನದಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...