Home / ಕವನ / ಕವಿತೆ / ಗರ್‍ಜಿಸುವುದನು ಕಲಿತು ಸಿಂಹವಾಗಿ

ಗರ್‍ಜಿಸುವುದನು ಕಲಿತು ಸಿಂಹವಾಗಿ

ಎನ್ನ ದೇಹವೇ ಕನ್ನಡಾಲಯ
ಕನ್ನಡ ಕನ್ನಡವೆನ್ನಲೇತಕೆ ಭಯ
ಕನ್ನಡಕೆ ನಮೋ ನಮೋ ಎನ್ನುವೆ
ಎನ್ನ ಮಂತ್ರವೊಂದೇ ಅದುವೇ ಕನ್ನಡ

ಬಾಡದ ಹೂವಿನ ಮಾಲೆ ಈ ಕನ್ನಡ
ನಂಬಿದರೆ ಕೈಬಿಡದೆಂದಿಗೂ ಈ ಕನ್ನಡ
ಪ್ರೀತಿಯ ಕನ್ನಡವೇ ಎನ್ನುಸಿರು
ತಾಯ್ತುಡಿಯಿಲ್ಲದೆನಗೆ ಬದುಕಿಲ್ಲ

ಪ್ರೀತಿಯಿಂದಲಿ ಬರೆಯಲದು
ಮಾಡುವುದು ರೋಗ ದೂರವ
ಜಪ ಮಾಡಿದರೆ ಕನ್ನಡ ಎಂದು
ಮೋಕ್ಷಕೆ ದಾರಿಯಾಗುವುದಯ್ಯ

ಎಲೈ ಮನುಜನೇ ಕನ್ನಡಕೆ ಕೈಯೆತ್ತು
ಬಾರದೆಂದಿಗೂ ನಿನಗಾಪತ್ತು
ಕನ್ನಡ ಕನ್ನಡವೆಂದು ಮೂಗು ಮುರಿದರೆ
ಬರುವುದಪವಾದ ನಿನಗಂದು

ಕನ್ನಡದ ಗಾನ ಮೊಳಗುತಿರಲು
ಮೈನವಿರೇಳುವುದಯ್ಯ
ಸೊಬಗಿನ ಐಸಿರಿಯ ನಾಡು
ನನ್ನೊಲವಿನ ಚಲುವಿನ ಕನ್ನಡ

ರಾಕ್ಷಸನಂತೆರಗುತಿದೆ
ತಾಯ್ನುಡಿಯ ಮೇಲೆ ಹೊರನುಡಿಯು
ಮಹಾಮಹಿಮೆಯ ಕನ್ನಡ
ಹೊರನಾಡಿಗೆ ಕಂಡಿತು ರಾಮನಾಗಿ

ಕನ್ನಡದ ದರುಶನದಿಂದ
ಹೊರನುಡಿಯು ಸರಿಯಿತು ಹಿಂದಕೆ
ಕನ್ನಡ ಕನ್ನಡವೆಂದರೆ
ಒಡನೇ ಓಡುವುದು ಭೀತಿ

‘ಮಹಾಜನ ವರದಿ ಜಾರಿಗೊಳಿಸಿ
ಗಡಿಸಮಸ್ಯೆಗೆ ಮಂಗಳ ಹಾಡಿ’ ಎಂದು
ಗರ್‍ಜಿಸುವುದನ್ನು ಕಲಿತು ಸಿಂಹವಾಗಿ
ಗೆಲುವಿದ್ದರದಕೆ ನಿಮಗೆ ಶಕ್ತಿ ಕಣಾ
*****
೨೯-೧೦-೨೦೦೬ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ
ಜನವರಿ ೨೦೧೦ರಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಂದ ‘ಕಾವ್ಯ ಕಲರವ’ ಕವನ ಸಂಕಲನದಲ್ಲಿ ಪ್ರಕಟ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...