ಎಲ್ಲಾದರು ಒಂದು ದಿನ

ಎಲ್ಲಾದರು ಒಂದು ದಿನ ಎಂತಾದರು ಒಂದು ದಿನ
ಕಾಣದಿರುವೆನೇ ನಾ ನಿನ್ನನು

ಹಾಡುತಿರಬಹುದು ನೀ
ಮಾತಾಡುತಿರಬಹುದು ನೀ
ಸುಮ್ಮನೆ ಕುಳಿತಿರಬಹುದು ನೀ
ಕುಣಿಯುತಿರಬಹುದು ನೀ

ಬಸವಳಿದಿರಬಹುದು
ಮುತ್ತಿನಂಥ ಬೆವರ ಹನಿ ನಿನ್ನ
ಹಣೆ ಮೇಲಿರಬಹುದು-ಅಲ್ಲಿ
ಕುರುಳೊಂದು ಗಾಳಿಗೆ ಸುಮ್ಮನೆ ಸುಳಿಯುತಿರಬಹುದು

ತುಟಿಗಳ ಮೇಲೊಂದು
ಕಿರುನಗೆಯಿರಬಹುದು
ಅಥವಾ ಯಾವುದೊ ಮ್ಲಾನತೆ ಮುಖದಲಿ
ಮನೆ ಮಾಡಿರಬಹುದು

ಬೀದಿಯಲಿರಬಹುದು ನೀ
ಉದ್ಯಾನದಲಿರಬಹುದು
ನದೀ ತೀರದಲ್ಲಿರಬಹುದು ನೀ
ತೀರದ ಹಾದಿಯಲಿರಬಹುದು

ಒಬ್ಬಂಟಿಯಾಗಿರಬಹುದು ಇಲ್ಲವೆ
ಮಂದಿಯ ನಡುವಿರಬಹುದು
ನಾ ನಡೆದಷ್ಟೂ ನೀ ಮುಂದಿರಬಹುದು ಅಥವಾ
ಹಿಂದೆಯೆ ಉಳಿದಿರಬಹುದು

ಕಂಡೂ ಕಾಣದಂತಿರಬಹುದು
ಕಂಡರು ಗುರುತು ಸಿಗದಿರಬಹುದು
ಸಿಕ್ಕಿದರೂ ನುಡಿ ಗಂಟಲಲೇ ನಿಂತಿರಬಹುದು
ಮಾತಿಗಿಂತಲು ಮೌನವೆ ಸುಖವೆನಿಸಬಹುದು

ದೈವವೆ ಎದುರಿಗೆ ಬಂದಂತಿರಬಹುದು
ಚರಾಚರಗಳೊಂದು ಕ್ಷಣ ನಿಲ್ಲಬಹುದು
ಅಮರವೆನಿಸಬಹುದು ಜೀವನ
ಮಧುರ ಅನಿಸಬಹುದು ಮರಣ
*****

One thought on “0

  1. ಪರಿಣಾಮಕಾರಿಯಾದ ಕವನ.
    ಪ್ರತಿ ನುಡಿಯ ಕೊನೆ ಸಾಲು ಬಹುದು ಎಂದು ಕೊನೆಗೊಳ್ಳುತ್ತಿದ್ದರೂ, ಸಂದೇಹಾಸ್ಪದ ಎನಿಸಿತ್ತಿದ್ದರೂ. ಅದ೪ಒಳಗಿನ ಆಶಾಭಾವನೆಯ ಗಮನಿಸಿ.

    ಬೆಳೆಯುತ್ತ ಬೆಳೆಸುತ್ತಬಸಾಗುವ ಕವಿತೆ.🙏🙏

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೭
Next post ಬಾರ ಬಾರ ದೇವ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…