ದೇವರ ಕಾಣಲು

ದೇವರ ಕಾಣಲು ಹೋದವರಿದ್ದಾರೆ ಕಾಡುಬೆಟ್ಟಗಳ ಹಾದು
ಕಾಡ ಕಾಣಲಿಲ್ಲ ಬೆಟ್ಟವ ಕಾಣಲಿಲ್ಲ
ದೇವರ ಕಾಣಲಿಲ್ಲ

ಮರವ ಕಾಣದೆ ಕಾಡ ಕಾಣುವುದು
ಬಯಲ ಕಾಣದೆ ಬೆಟ್ಟವ ಕಾಣುವುದು
ಎಂತೊ ಮನುಷ್ಯ
ಮನುಷ್ಯರ ಕಾಣದ ದೇವರ ಕಾಣುವುದು?

ಪಾಪವ ನೀಗಲು ಹೋದವರಿದ್ದಾರೆ ಪುಣ್ಯ ಕ್ಷೇತ್ರಗಳಿಗೆ
ಅರ್ಘ್ಯ ನೀಡಿದರು ಕಾಸು ನೀಡಿದರು
ಪಾಪ ನೀಗಲಿಲ್ಲ

ಅಹಂಕಾರ ನೀಗದೆ ಮಮಕಾರ ಗಳಿಸುವುದು
ಸ್ವಾರ್ಥ ನೀಗದೆ ಪ್ರೀತಿ ಗಳಿಸುವುದು
ಎಂತೊ ಮನುಷ್ಯ
ಪಾಪ ನೀಗದೆ ಪುಣ್ಯವ ಗಳಿಸುವುದು ?

ಅರಿವು ಗಳಿಸಲು ಹೋದವರಿದ್ದಾರೆ ದೇಶವಿದೇಶಗಳಿಗೆ
ಊರು ಸುತ್ತಿದರು ಮೇರು ಹತ್ತಿದರು
ಅರಿವು ಲಭಿಸಲಿಲ್ಲ

ಹುಟ್ಟೂರು ಕೇರಿಗಳನೆ ಸುತ್ತದವರು ಎಲ್ಲಿ ಹೋದರೆ ಏನು
ಕಾಯಕವಿಲ್ಲದೆ ಕೈಲಾಸ ಎಟುಕುವುದು
ಎಂತೊ ಮನುಷ್ಯ
ಸ್ಥಾವರ ಮರೆತವ ಜಂಗಮನಾಗುವುದು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೬
Next post ಮಾತೇ ಜ್ಯೋತಿರ್ಲಿಂಗ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys