ಏನ ಬೇಡಲಿ

ಏನ ಬೇಡಲಿ ನಿನ್ನ ಪ್ರಾಣದಾತನೆ ತಂದೆ
ಮೂಜಗವನಾಡಿಸುವ ವಿಶ್ವದಾ ತಂದೆ || ಪ ||

ಈ ಜಗದಿ ಜೀವಿಸುವ ಸೌಭಾಗ್ಯ ಮೊದಲಾಗಿ
ಸಾಜದಲಿ ನನಗಿತ್ತೆ ಮನುಜತೆಯ ದೇವಾ
ಉತ್ತುಂಗ ಬೆಟ್ಟ ಇದೆ ನಗುತಿರುವ ಸೃಷ್ಟಿ ಇದೆ
ನರ್ತಿಸುತ ಹರಿಯುತಿದೆ ಆನಂದ ಭಾವ || ೧ ||

ನಿನ್ನ ಕರುಣೆಯ ರೂಪ ತಳೆದಂತೆ ಮಳೆ ಬಹುದು
ಬರಡಾದ ಭೂದೇವಿ ಹಿಗ್ಗುವಳು ನಲಿದು
ಸೂರ್‍ಯ ಚಂದ್ರರ ಬಿಸುಪು ತಂಪುಗಳ ಕಣ್ಣೋಟ
ನಮ್ಮನ್ನು ಕಾಯುತಿರೆ ಬೇಡಲೇನೆಂದು || ೨ ||

ಕಣ್ಣು ಕಾಣಿಸದಂತೆ ಮಾಡುವ ಸಿರಿ ಬೇಡ
ನಿನ್ನ ನೆನೆಯುವ ಭಕುತಿ ಸಿರಿಯೊಂದೆ ಸಾಕು
ಎಂಥ ಕಷ್ಟವೆ ಬರಲಿ ಎಂಥ ಸುಖವೇ ಇರಲಿ
ನನ್ನನ್ನು ಮಗುವಂತೆ ನೀ ಕಾಯುತಿರಲು || ೩ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲಿಸು ನನಗೆ ಕಲಿಸು
Next post ಕಲಾವಿದನ ಬದುಕಿನ ಕಪ್ಪು ಬಿಳಿ ಬಣ್ಣಗಳು- ರಾಬರ್ಟ ಬ್ರೌನಿಂಗ್‌ನ “Andrea del Sarto”

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…