ಕಲಾವಿದನ ಬದುಕಿನ ಕಪ್ಪು ಬಿಳಿ ಬಣ್ಣಗಳು- ರಾಬರ್ಟ ಬ್ರೌನಿಂಗ್‌ನ “Andrea del Sarto”

ಕಲಾವಿದನ ಬದುಕಿನ ಕಪ್ಪು ಬಿಳಿ ಬಣ್ಣಗಳು- ರಾಬರ್ಟ ಬ್ರೌನಿಂಗ್‌ನ “Andrea del Sarto”

ಭಾಗ ೧

ಆಂಡ್ರಿಯಾ ಡೆಲ್ ಸಾರ್‍ಟೊ [Andrea del Sarto] ಒಬ್ಬ ಹೆಸರಾಂತ ಚಿತ್ರ ಕಲಾವಿದ. ನ್ಯೂನ್ಯತೆಗಳೇ ಇಲ್ಲದ ಕಲಾವಿದ. ೧೫೧೨ರಲ್ಲಿ ಲೂಕ್ರೇಸಿಯಾ [Lucrezia] ಎಂಬ ಅಪೂರ್ವ ಸುಂದರಿಯನ್ನು ವಿವಾಹವಾದ ಆತನ ಅನೇಕ ಕಲಾಕೃತಿಗಳಿಗೆ ಆಕೆಯೇ ರೂಪದರ್ಶಿಯಾಗಿದ್ದಳು. ಪ್ಲೋರೆನ್ಸ್‌ನ ಪಿಟ್ಟಿ ಪ್ಯಾಲೇಸ್‌ನಲ್ಲಿ ತೂಗಾಡುತ್ತಿದ್ದ, ಸ್ವತಃ ಆಂಡ್ರಿಯಾ ಚಿತ್ರಕ್ಕಿಳಿಸಿದ ಆಂಡ್ರಿಯಾ ಮತ್ತು ಲೂಕ್ರೇಸಿಯಾರ ಜೊತೆಗೂಡಿ ಇದ್ದ ಚಿತ್ರಪಟ ನೋಡಿದ ಬ್ರೌನಿಂಗ್‌ಗೆ ದಿ ಪಾಲ್ಟಲೆಸ್ ಪೇಂಟರ್ ಅಥವಾ ಆಂಡ್ರಿಯಾ ಡೆಲ್ ಸಾರ್‍ಟೊ ಎಂಬ [Dramatic Monologue] ಡ್ರಮ್ಯಾಟಿಕ್ ಮೊನೊಲಾಗ್ ಬರೆಯಲು ಸ್ಪೂರ್‍ತಿಯಾಯಿತು. ೧೮೧೨ರಲ್ಲಿ ಜನಿಸಿದ ರಾಬರ್ಟ ಬ್ರೌನಿಂಗ್ ತನ್ನ ಅತಿ ಚಿಕ್ಕ ವಯಸ್ಸಿನಲ್ಲೆ ಕವನಗಳ ರಚನೆಯಲ್ಲಿ ಪಳಗಿದ, ಆತನ ಮೊದಲ ಕವಿತೆ ಅದನ್ನು ತನ್ನ ೨೦ನೇ ವಯಸ್ಸಿಗೆ ಬರೆದ. ಆದರೆ ಟೆನಿಸನ್ನ ಸಮಕಾಲೀನ ರಾಬರ್ಟ ಬ್ರೌನಿಂಗ್ ಖ್ಯಾತನಾಮನಾದದ್ದು ತನ್ನ ಡ್ರೆಮ್ಯಾಟಿಕ್ ಮೊನೊಲಾಗ್ ಕಾವ್ಯ ಪ್ರಕಾರದಿಂದಲೇ.

ಆಂಡ್ರಿಯಾ ತನ್ನ ಪತ್ನಿ ಲೂಕ್ರೇಜಿಯಾಳನ್ನು ಉದ್ದೇಶಿಸಿ ಹೇಳುತ್ತಾನೆ. ಅವರಿಬ್ಬರ ನಡುವೆ ಮನಸ್ತಾಪವೇರ್ಪಟ್ಟಿದೆ. ಆಕೆ ತನ್ನ ಗೆಳೆಯನ ಗೆಳೆಯನಿಗೊಂದು ಚಿತ್ರ ಬರೆದು ಕೊಡಲು ಗಂಡನಲ್ಲಿ ಕೇಳುತ್ತಾಳೆ. ಆ ಚಿತ್ರದಿಂದ ಬರುವ ಹಣ ಆಕೆಯ ಗೆಳೆಯನ ಗೆಳೆಯನಿಗಾಗಿ. ಆತ ಆಕೆಯ ಪ್ರೇಮಿ. ಇದು ತಿಳಿದು ಆಕೆಗಾಗಿ ಆಂಡ್ರಿಯಾ ಚಿತ್ರ ಬರೆಯಲು ಸಿದ್ಧ. ಯಾಕೆಂದರೆ ಆತನೊಬ್ಬ ಪತ್ನಿಯ ಮೋಹಪಾಶದಲ್ಲಿ ಬಂಧಿಯಾದ ಕಲಾವಿದ. ಆಕೆಯ ಎದುರು ಆತ ದೀನ. ಇದಕ್ಕಾಗಿ ಆತ ಬಯಸುವುದು ಆಕೆ ತನ್ನ ಪಕ್ಕದಲ್ಲಿ ಸದಾ ಕುಳಿತಿರಬೆಕೆಂಬುದು, ತನ್ನ ಕೈಯೊಳಗೆ ಆಕೆ ತನ್ನ ಕೈಗಳನ್ನಿಟ್ಟು ಕುಳಿತುಕೊಳ್ಳಬೇಕೆಂಬುದು. ಇದಾತನ ನಿವೇದನೆ. ಆದರಾಕೆ ಇತನ ಬಗ್ಗೆ ಯಾವ ಕಾಳಜಿ ಮುತುವರ್ಜಿ ಇಲ್ಲದ ಹೆಣ್ಣು. ತನ್ನ ಮನಬಂದಂತೆ ಕುಣಿಸುವ ಅವಳಲ್ಲಿ ಆತನ ಭಾವನೆಗಳಿಗೆ ಬೆಲೆಯಿಲ್ಲ. ಆದರೂ ಆತ ವ್ಯರ್ಥ ಪ್ರಯತ್ನದಲ್ಲಿದ್ದಾನೆ. ಸಂಜೆಹೊತ್ತಿಗೆ ಚಿತ್ರ ಬರೆದು ಸುಣ್ಣವಾದರೂ ಆಕೆಯ ಸೌಂದರ್ಯ ಉಪಾಸನೆಯಲ್ಲಿ ಆತನಿಗೆ ಬಳಲಿಕೆಯಿಲ್ಲ. ಆಕೆಯ ರೂಪಲಾವಣ್ಯ ನಾಗಕನ್ಯೆಯ ಅಂಕುಡೊಂಕುಗಳಂತೆ ಆಕರ್ಷಣೀಯ. ಆದರದು ಆಕೆಯ ವಿನಾಶಕಾರಿ ಸೌಂದರ್ಯಕ್ಕೆ ರೂಪಕ.

ಬ್ರೌನಿಂಗ್ ಕಾವ್ಯದಲ್ಲಿ ಆಂಡ್ರಿಯಾನ ಬದುಕಿನ ಭೂತ ವರ್ತಮಾನ ಭವಿಷ್ಯ ಚಿತ್ರಣಗಳನ್ನು ನಮ್ಮ ಮುಂದೆ ತೆರೆದಿಡುತ್ತಾನೆ. ಕಾವ್ಯ ಮುಂದುವರೆಯುತ್ತಾ ಆಂಡ್ರಿಯಾ ಶೋಕಿತನಾಗಿದ್ದಾನೆ. ಪತ್ನಿಯಾದವಳು ತನ್ನ ಕಲೆಯನ್ನು ಪೋಷಿಸುತ್ತಿಲ್ಲವೆಂಬುದು ಆತನ ಆಪಾದನೆ. ಆಕೆ ಆತನ ಚಿತ್ರ ಮಡೊನ್ನಾ [ಕನ್ಯೆ ಮೇರಿಗೆ] ರೂಪದರ್ಶಿ. ಕನ್ಯೆ ಮೇರಿ ನಿಷ್ಕಲ್ಮಷ ಸುಂದರಿ. ಆದರೆ ಆಂಡ್ರಿಯಾನ ರೂಪದರ್ಶಿ ಅಪೂರ್ವ ಸುಂದರಿ. ಆದರೆ ನಿಷ್ಟಾವಂತಳಲ್ಲ.

ಆಂಡ್ರಿಯಾ ಹೇಳುತ್ತಾನೆ ತಾನೊಬ್ಬ ವಿಶಿಷ್ಟ ಕಲಾವಿದ ಬಯಸಿದ್ದನ್ನು ಬಿಡಿಸಬಲ್ಲ. ಆದರೂ ಆತ ಅಪರಿಪೂರ್ಣ. ಅದಕ್ಕೆ ಕಾರಣ ಲೂಕ್ರೇಜಿಯಾ. ಆಕೆಯಲ್ಲಿ ಬಾಹ್ಯ ಚೆಲುವಿದೆಯೇ ಹೊರತು ಹೃದಯದ ಚೆಲುವಲ್ಲ. ಹಾಗಾಗಿ ಆತನ ಚಿತ್ರಗಳಿಗೆ ಮಾಡೆಲ್ ಆದ ಆಕೆಯ ಪ್ರತಿರೂಪದ ನಿರ್ಭಾವ, ನಿರ್ದಯಿ ಅಭಿವ್ಯಕ್ತಿಯ ಚಿತ್ರಗಳನ್ನಷ್ಟೇ ಆತ ಚಿತ್ರಿಸಬಲ್ಲ.

ಈಗ ಆಂಡ್ರಿಯಾ ಗತ ಕಾಲದ ಘಟನೆಗಳನ್ನು ಮೆಲಕು ಹಾಕುತ್ತಾನೆ. ಕಿಂಗ್ ಪ್ರಾನ್ಸಿಸ್ ಮತ್ತು ಪ್ರೆಂಚ ಕೋರ್ಟನಲ್ಲಿ ತಾನು ಹೇಗೆ ನಿರ್ಲಕ್ಷಿಸಲ್ಪಟ್ಟೆ ಎಂಬುದನ್ನು ನೆನಪಿಸುತ್ತಾನೆ. ಅರಮನೆಯ ಕಲಾಕೃತಿಗಳನ್ನು ಹೆಮ್ಮೆಯಿಂದ ಚಿತ್ರಿಸಿದ ತಾನು ಲೂಕ್ರೇಜಿಯಾಳ ಕಾರಣದಿಂದ ರಾಜ ವೈಭೋಗದಿಂದ ಹೊರಬರಬೇಕಾಯಿತು. ಲೂಕ್ರೇಜಿಯಾ ಅರಮನೆಯ ಉಸಿರುಗಟ್ಟಿಸುವ ವಾತಾವರಣಕ್ಕೆ ಒಗ್ಗಿಕೊಳ್ಳಲಿಲ್ಲ. ಅಲ್ಲಿಯ ವೈಭೋಗ ಆಕೆಗೆ ಇಷ್ಟವಾಗಲಿಲ್ಲ. ಆಕೆ ಆತನನು ಪ್ಲೋರೆನ್ಸಿಯಾಗೆ ಕರೆದು ತರುತ್ತಾಳೆ. ಸತ್ಯ ಸಂಗತಿ ಎಂದರೆ ರಾಜ ನೀಡಿದ ಹಣದಿಂದ ಆಂಡ್ರಿಯಾ ಮನೆಯೊಂದನ್ನು ನಿರ್ಮಿಸಿಕೊಳ್ಳುತ್ತಾನೆ. ಆಂಡ್ರಿಯಾನ ನೋವಿಗೆ ಸಂಪೂರ್ಣವಾಗಿ ಆಕೆಯೇ ಕಾರಣವಲ್ಲ. ಯಾಕೆಂದರೆ ಆಕೆಯನ್ನು ಎದುರಿಸುವ ಧೈರ್ಯ ಆತನಲ್ಲಿ ಇಲ್ಲದೇ ಇರುವುದು. ಆತ ಜಗದ್ವಿಖ್ಯಾತ ಕಲಾಕಾರರಾದ ಲಿಯೊನಾರ್ಡೋ, ಮೈಕಲೆಂಜೆಲ್ಲೋ ಹಾಗೂ ರಾಫೆಲ್‌ರು ಗಳಿಸಿದ ಖ್ಯಾತಿಯನ್ನು ಗಳಿಸಲಾಗಲಿಲ್ಲ. ಯಾಕೆಂದರೆ ಅವರಾರು ವಿವಾಹಿತರಾಗಿರಲಿಲ್ಲ. ಆದರೆ ಆಂಡ್ರಿಯಾ ಒಬ್ಬ ಸಮ್ಮೋಹಿತ ಪತಿ. ಆಕೆಯ ನಗು ಕಲಾವಿದನಾದ ಆತನ ಎಲ್ಲ ಆಶೋತ್ತರಗಳನ್ನು ಕೊಲ್ಲುವ ಸಾಧನ. ಆಕೆಗೆ ಬೇಕಿರುವುದಿಷ್ಟೇ ಆತನ ಚಿತ್ರಗಳು ಆಕೆಗೆ ಹಣದ ಹರಿವು. ತನ್ನ ಗೆಳೆಯರ ಕಷ್ಟಗಳಿಗೆ ಆಕೆ ಆಂಡ್ರಿಯಾನ ದುಡಿಮೆಯ ಹಣವನ್ನು ಕಬಳಿಸಿ ಪತಿಯ ಕಷ್ಟ ಹೆಚ್ಚಿಸುವ ಹೆಣ್ಣು. ಆ ದಯನೀಯತೆಯನ್ನು ಆಂಡ್ರಿಯಾ ಹೀಗೆ ನುಡಿಸುತ್ತಾನೆ. “I mean that i should ear more, give you more”

ಈಗ ಕತ್ತಲಾಗಿದೆ. ಆಂಡ್ರಿಯಾ ಲೂಕ್ರೇಜಿಯಾಳನ್ನು ಮನೆಯೊಳಗೆ ಕರೆಯುತ್ತಿದ್ದಾನೆ ಅದೇ ಹೊತ್ತಿಗೆ ಆಕೆಯ ಗೆಳೆಯನ ಸೀಟಿಯ ಸದ್ದು ಅವರ ಏಕಾಂತಕ್ಕೆ ಭಂಗತಂದಿದೆ. ನಿರಾಶೆಯಿಂದ ಆಂಡ್ರಿಯಾ ಲೂಕ್ರೇಜಿಯಾಳನ್ನು ಹೋಗಗೊಡುತ್ತಾನೆ. ಆಕೆಯ ಪ್ರೀತಿ ಬರಿಯ ಸೋಗು ಅವನಿಂದ ಗಳಿಕೆಯನ್ನು ಮಾತ್ರ ಪ್ರೀತಿಸುವ ಅವಳು ನಂಬಿಗಸ್ಥ ಪತ್ನಿಯಲ್ಲ. ಹೀಗೆ ಒಬ್ಬ ಕಲಾವಿದ ಬದುಕಿನ ಸ್ಥೂಲ ಚಿತ್ರಣವನ್ನು ಡ್ರಮ್ಯಾಟಿಕ್ ಮೊನೊಲೊಗ್ [ನಾಟಕೀಯ ಏಕಾಂತ ಭಾಷಣ]ಕಾವ್ಯ ಪ್ರಕಾರದಲ್ಲಿ ರಚಿಸಿದ ಬ್ರೌನಿಂಗ್ ಒಬ್ಬ ಸಿದ್ಧಕವಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನ ಬೇಡಲಿ
Next post ಹಳ್ಳಿ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys