Home / ಕಥೆ / ಕಿರು ಕಥೆ / ಕನ್ನಡಿಯ ನುಡಿ

ಕನ್ನಡಿಯ ನುಡಿ

ಒಂದು ಕನ್ನಡಿ ಧಿಡೀರನೆ ಮಾತನಾಡ ತೊಡಗಿತು. “ಎಲೆ, ಮಾನವ! ಏಕೆ ಹೀಗೆ ಪರಿತಪಿಸುತ್ತಿರುವೆ? ಕಂಡದ್ದು, ಎಲ್ಲಾ ನೋಡುವೆ, ಊಹಿಸಿ ಕೊಳ್ಳುವೆ, ಕಲ್ಪಿಸಿಕೊಳ್ಳುವೆ, ಬಾಳ ಇಡೀ ಗೋಳಾಡುವೆ, ಒದ್ದಾಡುವೆ ಛೇ ! ನಿನ್ನ ಬಾಳನೋಡಿ ನನಗೆ ಮರುಕವೆನುಸಿತ್ತಿದೆ”- ಎಂದಿತು.

ಎಲೆ, ಕನ್ನಡಿ! “ನಿನ್ನ ಜಂಭ ಸಾಕು. ನೀನು ಬಿಂಬ ಸ್ವರೂಪಿ ನಿನಗೆ ನನ್ನಂತೆ ಒಂದು ದೇಹವಿಲ್ಲ, ಕಣ್ಣಿಲ್ಲ, ಬಾಯಿಲ್ಲ, ಮೂಗಿಲ್ಲ, ಕೈಕಾಲು, ಮೈ, ತಲೆ ಇಲ್ಲ, ಕೊನೆಗೆ ಹೃದಯವೂ ಇಲ್ಲ. ನೀನು ಬರಿ ಕನ್ನಡಿ.” ಎಂದು ಹೀಯಾಳಿಸಿದ ಮಾನವ.

ಕನ್ನಡಿ ಮರುನುಡಿಯಿತು. “ನಿನಗೆ ಒಂದು ದೇಹದ ಅವಯವವಾದರೆ ನನಗೆ ಹಲವು ದೇಹದ ಅವಯವಗಳು. ಎಂದು ಯಾವುದನ್ನು ನನ್ನದೆನ್ನಿಸಿ ಕೊಂಡಿಲ್ಲ. ನನ್ನ ಕಣ್ಣೀರಿಗೆ ಒದ್ದೆಯಿಲ್ಲ. ನನ್ನ ಭಾವಗಳಲ್ಲಿ ಸ್ಥಿರ ದುಃಖ ಸ್ಥಿರ ಸುಖವಿಲ್ಲ. ನಿಂತಂತೆ ನಿಂತು, ಕಂಡಂತೆ ಕಂಡು ಬಾಳ ರಸ ಉಂಡು ಹೊಳಯುತ್ತಿರುವೆ. ನನಗೆ ಅಳಿವಿಲ್ಲ, ನೋವಿಲ್ಲ, ನಲಿವಿಲ್ಲ, ನಾನು ಯಾವುದನ್ನೂ ಸ್ವೀಕರಿಸುವುದಿಲ್ಲ, ತಿರಸ್ಕರಿಸುವುದಿಲ್ಲ. ಸಂಗ್ರಹಿಸಿಕೊಳ್ಳವುದಿಲ್ಲ. ಆದರೆ ನಿನ್ನ ತಲೆ ತುಂಬಾ ವಿಚಾರಗಳು, ಯೋಚನೆಗಳು, ಎದೆ ತುಂಬಾ ಪ್ರೀತಿ, ದ್ವೇಷ, ಮೈತ್ರಿ ಎಲ್ಲಾ ಭಾವಗಳು ತುಂಬಿ ನೀ ಚಡಪಡಿಸುತ್ತಿರುವೆ. ಒಮ್ಮೆ ನಿನ್ನ ಎದೆಯನ್ನು ಕನ್ನಡಿ ಮಾಡಿಕೊ. ಕಣ್ಣನ್ನು ಕನ್ನಡಿ ಮಾಡಕೊ, ಆಗ ನಿನ್ನ ಬಾಳು ಎಂದೂ ಗೋಳಾಗುವುದಿಲ್ಲ” ಎಂದಿತು ಕನ್ನಡಿ.

ಕನ್ನಡಿಯ ನುಡಿಗಳು ಮಾನವನ ಕಣ್ಣು ತೆರೆಯಿಸಿದವು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...