ಕನ್ನಡಿಯ ನುಡಿ

ಒಂದು ಕನ್ನಡಿ ಧಿಡೀರನೆ ಮಾತನಾಡ ತೊಡಗಿತು. “ಎಲೆ, ಮಾನವ! ಏಕೆ ಹೀಗೆ ಪರಿತಪಿಸುತ್ತಿರುವೆ? ಕಂಡದ್ದು, ಎಲ್ಲಾ ನೋಡುವೆ, ಊಹಿಸಿ ಕೊಳ್ಳುವೆ, ಕಲ್ಪಿಸಿಕೊಳ್ಳುವೆ, ಬಾಳ ಇಡೀ ಗೋಳಾಡುವೆ, ಒದ್ದಾಡುವೆ ಛೇ ! ನಿನ್ನ ಬಾಳನೋಡಿ ನನಗೆ ಮರುಕವೆನುಸಿತ್ತಿದೆ”- ಎಂದಿತು.

ಎಲೆ, ಕನ್ನಡಿ! “ನಿನ್ನ ಜಂಭ ಸಾಕು. ನೀನು ಬಿಂಬ ಸ್ವರೂಪಿ ನಿನಗೆ ನನ್ನಂತೆ ಒಂದು ದೇಹವಿಲ್ಲ, ಕಣ್ಣಿಲ್ಲ, ಬಾಯಿಲ್ಲ, ಮೂಗಿಲ್ಲ, ಕೈಕಾಲು, ಮೈ, ತಲೆ ಇಲ್ಲ, ಕೊನೆಗೆ ಹೃದಯವೂ ಇಲ್ಲ. ನೀನು ಬರಿ ಕನ್ನಡಿ.” ಎಂದು ಹೀಯಾಳಿಸಿದ ಮಾನವ.

ಕನ್ನಡಿ ಮರುನುಡಿಯಿತು. “ನಿನಗೆ ಒಂದು ದೇಹದ ಅವಯವವಾದರೆ ನನಗೆ ಹಲವು ದೇಹದ ಅವಯವಗಳು. ಎಂದು ಯಾವುದನ್ನು ನನ್ನದೆನ್ನಿಸಿ ಕೊಂಡಿಲ್ಲ. ನನ್ನ ಕಣ್ಣೀರಿಗೆ ಒದ್ದೆಯಿಲ್ಲ. ನನ್ನ ಭಾವಗಳಲ್ಲಿ ಸ್ಥಿರ ದುಃಖ ಸ್ಥಿರ ಸುಖವಿಲ್ಲ. ನಿಂತಂತೆ ನಿಂತು, ಕಂಡಂತೆ ಕಂಡು ಬಾಳ ರಸ ಉಂಡು ಹೊಳಯುತ್ತಿರುವೆ. ನನಗೆ ಅಳಿವಿಲ್ಲ, ನೋವಿಲ್ಲ, ನಲಿವಿಲ್ಲ, ನಾನು ಯಾವುದನ್ನೂ ಸ್ವೀಕರಿಸುವುದಿಲ್ಲ, ತಿರಸ್ಕರಿಸುವುದಿಲ್ಲ. ಸಂಗ್ರಹಿಸಿಕೊಳ್ಳವುದಿಲ್ಲ. ಆದರೆ ನಿನ್ನ ತಲೆ ತುಂಬಾ ವಿಚಾರಗಳು, ಯೋಚನೆಗಳು, ಎದೆ ತುಂಬಾ ಪ್ರೀತಿ, ದ್ವೇಷ, ಮೈತ್ರಿ ಎಲ್ಲಾ ಭಾವಗಳು ತುಂಬಿ ನೀ ಚಡಪಡಿಸುತ್ತಿರುವೆ. ಒಮ್ಮೆ ನಿನ್ನ ಎದೆಯನ್ನು ಕನ್ನಡಿ ಮಾಡಿಕೊ. ಕಣ್ಣನ್ನು ಕನ್ನಡಿ ಮಾಡಕೊ, ಆಗ ನಿನ್ನ ಬಾಳು ಎಂದೂ ಗೋಳಾಗುವುದಿಲ್ಲ” ಎಂದಿತು ಕನ್ನಡಿ.

ಕನ್ನಡಿಯ ನುಡಿಗಳು ಮಾನವನ ಕಣ್ಣು ತೆರೆಯಿಸಿದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಚ್ಚು ಹಲಸೆನ್ನದೆ ಜೀವನಕದೆಷ್ಟು ನಷ್ಟವೋ?
Next post ಬಾಳೆದೆಯ ಶೂಲ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…