ಸಗ್ಗದ ಬೆಳಕೇ

ವಿಶ್ವವ ತುಂಬಿದ ಸಗ್ಗದ ಬೆಳಕೇ
ಬೆಳಗೈ ನಮ್ಮೆಲ್ಲರ ಮನವ
ಬದುಕನು ಲೀಲೆಯ ರೂಪದಿ ಬಾಳಲು
ಬೆಳೆಸೈ ನಮ್ಮೆಲ್ಲರ ತನುವ || ೧ ||

ಶಕ್ತಿಯ ಸ್ಫೂರ್ತಿ ಮುಕ್ತಿಯ ಕೀರ್ತಿ
ಜ್ಞಾನ ಜ್ಯೋತಿಯ ನೀ ಬೆಳಗು
ಕತ್ತಲಿನೆಡೆಯಿಂ ಬೆಳಕಿನ ದಿಸೆಯಲಿ
ನಮ್ಮನು ನಡೆಸೌ ನಿಶೆಯೊಳಗು || ೨ ||

ಜೀವನ ಸಮರದಿ ನಾವು ಯೋಧರು
ದೇವನೆ ಹೋರುವ ಬಲ ನೀಡೈ
ಸೋಲೋ ಗೆಲುವೊ ನಿನ್ನಯ ಒಲವು
ಕಾದುವ ಕಲಿತನವನು ನೀಡೈ || ೩ ||

ಯುದ್ಧರಂಗದಲಿ ಹೆಜ್ಜೆಯ ಹಿಂದಿಡೆ
ನರಕವು ಅಸಹ್ಯ ಸಾವೇ ಸೈ
ಅಂಜಿದ ಅರ್ಜುನನನು ಕಾಪಾಡಿದ
ನರಸಾರಥಿಯೆಮ್ಮನು ನಡೆಸೈ ||೪ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರುಗ್ಣ ಯಾಕುಬ
Next post ಬೇಂದ್ರೆ ವಿಮರ್ಶೆಗೆ ನಾಲ್ಕು ಮಾತು

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…