ರುಗ್ಣ ಯಾಕುಬ

ಸುಡಾನವನಾಳಿದ ಅತ್ಯಂತ ಕ್ರೂರಿ ದೊರೆ
ಯಾರೆಂದು ಕೇಳಿದರೆ ಎಲ್ಲರೂ ಹೇಳುವರು-
ಅವನೇ ಯಾಕುಬ
ರುಗ್ಣ ಯಾಕುಬ
ಅವನ ಕತೆ ಕೇಳುವುದು
ನಾಕು ಜನ ಇರುವ ಕಡೆ-ಪ್ರಜಾ
ಜನರೆ ಅವನ ವಿರುದ್ಧ
ದಂಗೆಯೆದ್ದರು ಸಹಾ-ಆ
ದಂಗೆಯನು ಸದೆಬಡಿದು
ಅನೇಕರನು ಹಿಡಿದು
ಕೆಲವರನು ಕೂಡಲೇ
ಕೆಲವರನು ಆಮೇಲೆ

ಅಂಥವರ ನಡುವೊಬ್ಬ
ಮಾಂತ್ರಿಕನೂ ಇದ್ದ
“ಅಲ್ಲಾನ ಸೇವಕ”
ಅಬ್ದುರಹಮಾನ್
ಅಲ್ ಮಸ್‌ಮುದಿ
ಒಂದು ದಿನ ಅಂಥವನ
ಸರದಿಯೂ ಬರಲಾಗಿ :
“ಯಾಕೆ ಸುಮ್ಮನೆ ನನ್ನ
ಕೊಲಿಸುವಿರಿ ? ಕೊಲಿಸಿದರೆ
ನಾ ಕಲಿತ ವಿದ್ಯೆಯೂ
ನನ್ನ ಜತೆ ಹೋಗಿ-
ಇಲ್ಲದಿದ್ದರೆ ನಿಮಗೆ
ಕುಳಿತಲ್ಲೆ ತೋರಿಸುವೆ
ಲೋಕದದ್ಭುತಗಳ
ಅಂಗೈಗೆ ತರಿಸುವೆ!”

ಆಗ ಯಾಕುಬನು
ರುಗ್ಣ ಯಾಕುಬನು :
“ಮಾತುಗಳು ಹಾಗಿರಲಿ
ತಂದು ತೋರಿಸು ನನಗೆ
ಲೋಕದಲೆ ಅತ್ಯಂತ
ಚೆಲುವಾದ ಕುದುರೆಗಳ
ಅಂಥ ದೃಶ್ಯಗಳ !”

ಬರೀ ಒಂದು ಹಿಡಿ ಕೊತ್ತಂಬರಿ
ಒಂದು ಮಣ್ಣಿನ ಪಾತ್ರೆ
ಬೆಂಕಿ, ಇದ್ದಿಲು, ಒಂದು
ಮಸಿಯ ಬುರುಡಿಯೂ
ಬರೆವ ಲೆಕ್ಕಣಿಕೆ
ಪ್ರತ್ಯೇಕ ಮರದ ಪತ್ರೆ

ಆಮೇಲೆ ಯಾಕುಬನ
ರುಗ್ಣ ಯಾಕುಬನ
ಅಂಗೈಲಿ ಮಸಿ ಬಿಂದು
ದುಂಡನೇ ನಿಂದು
“ಅಲ್ಲಾನ ಸೇವಕ”
ಅಬ್ದುರಹಮಾನ್
ಅಲ್ ಮಸ್‌ಮುದಿ
ಮಂತ್ರಗಳ ಹೇಳುವನು
ಕುದುರೆಗಳ ಕರೆಯುವನು

ಕರೆದರೆ ಮೊದಲು
ವಿಶಾಲ ಬಯಲು
ಬಹುಶಃ ಏಶಿಯಾ
ಬಹುಶಃ ಆಫ್ರಿಕಾ
ಆಮೇಲೆ ಅದರ
ಅಂಚಿನಿಂದೆದ್ದು
ಬಂದಂತೆ ಮೋಡ
ಒಂದು ಸಾವಿರ ಘೋಡ
ಓಟದಲಿ ಮೈ-ಮಾಟದಲಿ
ಒಂದನ್ನೊಂದು ಮೀರಿ
ಈ ಕಡೆಗೇ ಸಾರಿ

ಆಮೇಲೆ ಮರುದಿನವು
ಪ್ರತಿದಿನವು ಹೀಗೆಯೇ
ಅದ್ಭುತ ನಗರಿಗಳು
ರಾಜ್ಯಗಳು ಕೋಶಗಳು
ವಿಶಾಲ ಸಮುದ್ರಗಳು
ಮರುಭೂಮಿಗಳು, ಇದೀಗ
ಅರಳಿದ ಗುಲಾಬಿಗಳು
ದೂರದ ಗ್ರಹಗಳೂ

ಪಿರಮಿಡಿನ ರಹಸ್ಯಗಳು
ದಾರಿತಪ್ಪಿದ ನೌಕೆಗಳು
ಯಾರೂ ಬಿಡಿಸದ ಒಗಟುಗಳು
ಸುಂದರ ಹೌರಿಗಳು
ಚರಿತ್ರೆಯ ಪ್ರಸಿದ್ಧ
ಹಾದರಗಳೂ, ಯುದ್ಧಗಳೂ

ವಿಚಿತ್ರ ಜಂತುಗಳು
ವಜ್ರ ವೈಡೂರ್ಯಗಳು
ಮಾತಾಡುವ ಮೀನುಗಳು
ಜನವಿರದ ಸಂತೆಗಳು
ವೇಶ್ಯೆಯರ ಪಡಖಾನೆಗಳು
ಅವರ ವಿನೋದಗಳೂ
ಹುಟ್ಟಿದಾಗಲೆ ನಗುವ ಶಿಶುಗಳೂ
ಕಡಲ ತಳ ಕಾದಿಟ್ಟ
ನಿಧಿಗಳೂ, ಎಷ್ಟೋ ಜನರ
ವಿಧಿಗಳೂ.

ಹೀಗಿತ್ತು. ಇರಲು
ದಿನದಿನದ ಮಾಯಾಬಜಾರ-
ದೊಳಗೆ ಬಯಸಲಿ ಬಯಸದೆ ಇರಲಿ
ಆಗಾಗ
ಬರುವ ಅಪರಿಚಿತ ವ್ಯಕ್ತಿ
ಮುಖವಾಡದಿಂದ ಮುಖ
ಪೂರ್ತಿ ಮುಚ್ಚಿ

ಉತ್ತರದಾತ, ತುಸು ಬಾಗಿರುವಾತ
ದಿರಿಸು ನೋಡಿದರೆ ಅರಬ
ಅಥವ ಅಂಥದೇ ಇನ್ನೊಬ್ಬ
ಯಾಕ ಈ ವೇಷ ?
ಯಾಕೆ ಮುಖವಾಡ ?
“ತೆಗೆದು ಬಿಸಾಕಲು ಹೇಳು !”
ಎಂದು ಯಾಕುಬ
ರುಗ್ಣ ಯಾಕುಬ

“ದುಡುಕಬಾರದು ನಾವು
ಯಾರೀತ, ಹೆಸರೇನು
ಯಾವ ದೇಶದವ- ಯಾರಿಗೂ
ತಿಳಿಯದೆ ಇರುವಾಗ
ತಿಳಿಯದಿರಲೆಂದೆ ಅಲ್ಲಾ ಅವನ
ಮುಖವ ಮುಚ್ಚಿರುವಾಗ”

ಬಾರಿ ಬಾರಿಗೂ ಯಾವುದೋ ಬದಿಯಿಂದ
ಮೂಡುತ್ತಿದ್ದ ವಿಚಿತ್ರ
ಕೆಲವೊಮ್ಮೆ ಕುದುರೆಯ ಮೇಲೆ ಆರೋಹಿ
ಕೆಲವೊಮ್ಮೆ ಹೇಸರಗತ್ತೆಯನೂ ಏರಿ
ಮರುಭೂಮಿಗಳ ಸಂಚಾರಿ
ದಾರಿ ಮರೆತಂತೆಯೂ ತೋರಿ
ಆದರೂ

ಅಂಗೈಯ ಕ್ರೌರ್ಯ
ಒಂದನ್ನೊಂದು ಮೀರಿ
ಮೂಡುತ್ತಿದ್ದುವು
ಯಾಕುಬನ
ರುಗ್ಣ ಯಾಕುಬನ-ಮರುಳು
ಮಾಡುತಿದ್ದವು

ದಿನ ದಿನದ ಕೊಲೆ, ಹಾದರ, ಬಲಾತ್ಕಾರ ಸಂಭೋಗ
ದಿನ ದಿನದ ಶಿಕ್ಷೆ. ಅಂಗಾಂಗ ಛೇದ
ದಿನ ದಿನದ ಅನುಭವದ ಕ್ರೂರ
ಸಾಕ್ಷಾತ್ಕಾರಕ್ಕೆ ಪೂರ್ತಿ ವಶವಾದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಲವು ಪಶು ಆಹಾರಗಳು ವಿಷಯುಕ್ತ?!
Next post ಸಗ್ಗದ ಬೆಳಕೇ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys