Home / ಕವನ / ನೀಳ್ಗವಿತೆ / ರುಗ್ಣ ಯಾಕುಬ

ರುಗ್ಣ ಯಾಕುಬ

ಸುಡಾನವನಾಳಿದ ಅತ್ಯಂತ ಕ್ರೂರಿ ದೊರೆ
ಯಾರೆಂದು ಕೇಳಿದರೆ ಎಲ್ಲರೂ ಹೇಳುವರು-
ಅವನೇ ಯಾಕುಬ
ರುಗ್ಣ ಯಾಕುಬ
ಅವನ ಕತೆ ಕೇಳುವುದು
ನಾಕು ಜನ ಇರುವ ಕಡೆ-ಪ್ರಜಾ
ಜನರೆ ಅವನ ವಿರುದ್ಧ
ದಂಗೆಯೆದ್ದರು ಸಹಾ-ಆ
ದಂಗೆಯನು ಸದೆಬಡಿದು
ಅನೇಕರನು ಹಿಡಿದು
ಕೆಲವರನು ಕೂಡಲೇ
ಕೆಲವರನು ಆಮೇಲೆ

ಅಂಥವರ ನಡುವೊಬ್ಬ
ಮಾಂತ್ರಿಕನೂ ಇದ್ದ
“ಅಲ್ಲಾನ ಸೇವಕ”
ಅಬ್ದುರಹಮಾನ್
ಅಲ್ ಮಸ್‌ಮುದಿ
ಒಂದು ದಿನ ಅಂಥವನ
ಸರದಿಯೂ ಬರಲಾಗಿ :
“ಯಾಕೆ ಸುಮ್ಮನೆ ನನ್ನ
ಕೊಲಿಸುವಿರಿ ? ಕೊಲಿಸಿದರೆ
ನಾ ಕಲಿತ ವಿದ್ಯೆಯೂ
ನನ್ನ ಜತೆ ಹೋಗಿ-
ಇಲ್ಲದಿದ್ದರೆ ನಿಮಗೆ
ಕುಳಿತಲ್ಲೆ ತೋರಿಸುವೆ
ಲೋಕದದ್ಭುತಗಳ
ಅಂಗೈಗೆ ತರಿಸುವೆ!”

ಆಗ ಯಾಕುಬನು
ರುಗ್ಣ ಯಾಕುಬನು :
“ಮಾತುಗಳು ಹಾಗಿರಲಿ
ತಂದು ತೋರಿಸು ನನಗೆ
ಲೋಕದಲೆ ಅತ್ಯಂತ
ಚೆಲುವಾದ ಕುದುರೆಗಳ
ಅಂಥ ದೃಶ್ಯಗಳ !”

ಬರೀ ಒಂದು ಹಿಡಿ ಕೊತ್ತಂಬರಿ
ಒಂದು ಮಣ್ಣಿನ ಪಾತ್ರೆ
ಬೆಂಕಿ, ಇದ್ದಿಲು, ಒಂದು
ಮಸಿಯ ಬುರುಡಿಯೂ
ಬರೆವ ಲೆಕ್ಕಣಿಕೆ
ಪ್ರತ್ಯೇಕ ಮರದ ಪತ್ರೆ

ಆಮೇಲೆ ಯಾಕುಬನ
ರುಗ್ಣ ಯಾಕುಬನ
ಅಂಗೈಲಿ ಮಸಿ ಬಿಂದು
ದುಂಡನೇ ನಿಂದು
“ಅಲ್ಲಾನ ಸೇವಕ”
ಅಬ್ದುರಹಮಾನ್
ಅಲ್ ಮಸ್‌ಮುದಿ
ಮಂತ್ರಗಳ ಹೇಳುವನು
ಕುದುರೆಗಳ ಕರೆಯುವನು

ಕರೆದರೆ ಮೊದಲು
ವಿಶಾಲ ಬಯಲು
ಬಹುಶಃ ಏಶಿಯಾ
ಬಹುಶಃ ಆಫ್ರಿಕಾ
ಆಮೇಲೆ ಅದರ
ಅಂಚಿನಿಂದೆದ್ದು
ಬಂದಂತೆ ಮೋಡ
ಒಂದು ಸಾವಿರ ಘೋಡ
ಓಟದಲಿ ಮೈ-ಮಾಟದಲಿ
ಒಂದನ್ನೊಂದು ಮೀರಿ
ಈ ಕಡೆಗೇ ಸಾರಿ

ಆಮೇಲೆ ಮರುದಿನವು
ಪ್ರತಿದಿನವು ಹೀಗೆಯೇ
ಅದ್ಭುತ ನಗರಿಗಳು
ರಾಜ್ಯಗಳು ಕೋಶಗಳು
ವಿಶಾಲ ಸಮುದ್ರಗಳು
ಮರುಭೂಮಿಗಳು, ಇದೀಗ
ಅರಳಿದ ಗುಲಾಬಿಗಳು
ದೂರದ ಗ್ರಹಗಳೂ

ಪಿರಮಿಡಿನ ರಹಸ್ಯಗಳು
ದಾರಿತಪ್ಪಿದ ನೌಕೆಗಳು
ಯಾರೂ ಬಿಡಿಸದ ಒಗಟುಗಳು
ಸುಂದರ ಹೌರಿಗಳು
ಚರಿತ್ರೆಯ ಪ್ರಸಿದ್ಧ
ಹಾದರಗಳೂ, ಯುದ್ಧಗಳೂ

ವಿಚಿತ್ರ ಜಂತುಗಳು
ವಜ್ರ ವೈಡೂರ್ಯಗಳು
ಮಾತಾಡುವ ಮೀನುಗಳು
ಜನವಿರದ ಸಂತೆಗಳು
ವೇಶ್ಯೆಯರ ಪಡಖಾನೆಗಳು
ಅವರ ವಿನೋದಗಳೂ
ಹುಟ್ಟಿದಾಗಲೆ ನಗುವ ಶಿಶುಗಳೂ
ಕಡಲ ತಳ ಕಾದಿಟ್ಟ
ನಿಧಿಗಳೂ, ಎಷ್ಟೋ ಜನರ
ವಿಧಿಗಳೂ.

ಹೀಗಿತ್ತು. ಇರಲು
ದಿನದಿನದ ಮಾಯಾಬಜಾರ-
ದೊಳಗೆ ಬಯಸಲಿ ಬಯಸದೆ ಇರಲಿ
ಆಗಾಗ
ಬರುವ ಅಪರಿಚಿತ ವ್ಯಕ್ತಿ
ಮುಖವಾಡದಿಂದ ಮುಖ
ಪೂರ್ತಿ ಮುಚ್ಚಿ

ಉತ್ತರದಾತ, ತುಸು ಬಾಗಿರುವಾತ
ದಿರಿಸು ನೋಡಿದರೆ ಅರಬ
ಅಥವ ಅಂಥದೇ ಇನ್ನೊಬ್ಬ
ಯಾಕ ಈ ವೇಷ ?
ಯಾಕೆ ಮುಖವಾಡ ?
“ತೆಗೆದು ಬಿಸಾಕಲು ಹೇಳು !”
ಎಂದು ಯಾಕುಬ
ರುಗ್ಣ ಯಾಕುಬ

“ದುಡುಕಬಾರದು ನಾವು
ಯಾರೀತ, ಹೆಸರೇನು
ಯಾವ ದೇಶದವ- ಯಾರಿಗೂ
ತಿಳಿಯದೆ ಇರುವಾಗ
ತಿಳಿಯದಿರಲೆಂದೆ ಅಲ್ಲಾ ಅವನ
ಮುಖವ ಮುಚ್ಚಿರುವಾಗ”

ಬಾರಿ ಬಾರಿಗೂ ಯಾವುದೋ ಬದಿಯಿಂದ
ಮೂಡುತ್ತಿದ್ದ ವಿಚಿತ್ರ
ಕೆಲವೊಮ್ಮೆ ಕುದುರೆಯ ಮೇಲೆ ಆರೋಹಿ
ಕೆಲವೊಮ್ಮೆ ಹೇಸರಗತ್ತೆಯನೂ ಏರಿ
ಮರುಭೂಮಿಗಳ ಸಂಚಾರಿ
ದಾರಿ ಮರೆತಂತೆಯೂ ತೋರಿ
ಆದರೂ

ಅಂಗೈಯ ಕ್ರೌರ್ಯ
ಒಂದನ್ನೊಂದು ಮೀರಿ
ಮೂಡುತ್ತಿದ್ದುವು
ಯಾಕುಬನ
ರುಗ್ಣ ಯಾಕುಬನ-ಮರುಳು
ಮಾಡುತಿದ್ದವು

ದಿನ ದಿನದ ಕೊಲೆ, ಹಾದರ, ಬಲಾತ್ಕಾರ ಸಂಭೋಗ
ದಿನ ದಿನದ ಶಿಕ್ಷೆ. ಅಂಗಾಂಗ ಛೇದ
ದಿನ ದಿನದ ಅನುಭವದ ಕ್ರೂರ
ಸಾಕ್ಷಾತ್ಕಾರಕ್ಕೆ ಪೂರ್ತಿ ವಶವಾದ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...