Home / ಲೇಖನ / ವಿಜ್ಞಾನ / ಕೆಲವು ಪಶು ಆಹಾರಗಳು ವಿಷಯುಕ್ತ?!

ಕೆಲವು ಪಶು ಆಹಾರಗಳು ವಿಷಯುಕ್ತ?!

ಪರಂಪರಾನು ಕಾಲದಿಂದಲೂ ಪಶುಗಳನ್ನು ಪವಿತ್ರವೆಂದು ಪೂಜಿಸುತ್ತೇವೆ. ಪಶುಗಳ ಅಸ್ತಿತ್ವ ಇಲ್ಲದಿದ್ದರೆ ಮನ್ಯುಷನ ಬದುಕು ನಿಸಾರವಾಗುತ್ತಿತ್ತು. ಗೊಬ್ಬರ, ಹಾಲು, ಬೆಣ್ಣೆ, ತುಪ್ಪ, ಮಜ್ಜಿಗೆಯಂತಹ ಪದಾರ್ಥಗಳಲ್ಲಿ ಮನುಷ್ಯನ ಪೌಷ್ಠಿಕ ಆಹಾರದ ಅವಿಭಾಜ್ಯ ಅಂಗಗಳಾಗಿರುವುದು ಐತಿಹಾಸಿಕ ಸತ್ಯ. ಹೀಗಾಗಿ ಇವುಗಳನ್ನು ರೋಗರುಜೀನಗಳಿಲ್ಲದಂತೆ ಸಂರಕ್ಷಿಸಿ ಅದರಿಂದಾಗುವ ಪ್ರಯೋಜನವನ್ನು ಪಡೆಯಬಹುದು. ಇವು ಮೂಕ ಪ್ರಾಣಿಗಳಾಗಿದ್ದರಿಂದ ನೋವು ಕಷ್ಟಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ನಾವೇ ಈ ದನಗಳ ಶಕ್ತಿವರ್ಧನೆಗೆ ಅಗತ್ಯವಾದ ಪೂರಕವಾದ ಆಹಾರವನ್ನು ಹಾಕಬೇಕಿದೆ.

ಇತ್ತೀಚಿನ ವಿದ್ಯಮಾನದಲ್ಲಿ ಹಾಲು ಸಮೃದ್ಧಿಯಾಗಿ ಕೊಡಲಿ, ಎಂಬ ಕಾರಣಕ್ಕಾಗಿ ನಾವು ಅಂಗಡಿಯಲ್ಲಿ ದೊರೆಯುವ ಸಿದ್ದಪಶು ಆಹಾರಗಳನ್ನೇ ತಿನ್ನಿಸುತ್ತೇವೆ. ಹಾಲಿನ ಹೆಚ್ಚಳಕ್ಕಾಗಿ ‘ಯುರಿಯೂ’ವನ್ನೂ ಮಿಶ್ರ ಮಾಡಲಾಗುತ್ತದೆ. ಶೇ. ಒಂದರಷ್ಟು ಮಿಶ್ರಮಾಡುತ್ತೇವೆಂದು ಆಹಾರ ತಯಾರಕರು ಹೇಳಿದರೆ ಪಶುವೈದ್ಯರು ಶೇ. ೩೦ ರಷ್ಟು ಮಿಶ್ರಣವಾಗುತ್ತದೆಂದು ಹೇಳುತ್ತಾರೆ. ಈ ಶೇ. ೩ ರಷ್ಟಿನ ಯೂರಿಯಾದ ಜತೆಗೆ ಕೆಲವು ಸಲ ಮರಳು, ಮಣ್ಣುಗಳು ಮಿಶ್ರವಾಗುತ್ತದೆಂದು ಹೇಳುತ್ತಾರೆ. ಇಂಥಹ ಯೂರಿಯಾ, ಮರಳು, ಮಣ್ಣು ಮಿಶ್ರಿತ ಆಹಾರವನ್ನು ಸೇವಿಸುವ ದನಗಳು ಹಾಲನ್ನೇನೋ ಹೆಚ್ಚು ಕೊಡಬಹುದು. ಆದರೆ ಇದೇ ಆಹಾರ ಪಶುಗಳಿಗೆ ವಿಷವಾಗಿ ಪರಿಣಮಿಸುತ್ತದೆ, ಎಂಬ ಸತ್ಯ ಬಹಳ ಜನಕ್ಕೆ ತಿಳಿಯದು. ಚಿನ್ನದ ಮೊಟ್ಟೆಯನ್ನಿಡುವ ಕೋಳಿಯ ಹೊಟ್ಟೆಯನ್ನೇ ಸೀಳಿದ ಸ್ವಾರ್ಥದ ಕಥೆ ನೆನಪಾಗುತ್ತದೆ. ನಮ್ಮ ಸ್ವಾರ್ಥದ ದೆಸೆಯಿಂದಾಗಿ ಇಂಥಹ ಆಹಾರಗಳನ್ನು ನಾವು ದನಗಳಿಗೆ ಕೊಡುತ್ತ ಹೋದರೆ ಗರ್ಭ ಕಟ್ಟುವಲ್ಲಿ ವಿಫಲವಾಗುವುದು, ಬೆದೆಗೆ ಸರಿಯಾಗಿ ಬಾರದಿರುವುದು, ಗರ್ಭಪಾತ ಸಮಸ್ಯೆಯುಂಟಾಗುವುದು, ಚರ್ಮ ರೋಗಗಳು ಬರುವುದು, ಜೀರ್ಣಕ್ರಿಯೆಗೆ ಸಂಬಂಧಪಟ್ಟ ಕಾಯಿಲೆಗಳು ಬರುವುದು. ಮುಂತಾದ ರೋಗಗಳು ಪ್ರಾರಂಭವಾಗುತ್ತವೆ. ಹಾಲು ಹೆಚ್ಚು ಕೊಡುತ್ತದೆಂಬ ಕಾರಣಕ್ಕೆ ಈ ಹಾಲನ್ನು ಕೊಡುವ ಪಶುವಿಗೆ ವಿಷಯುಕ್ತ ಆಹಾರವನ್ನುಣಿಸಿ ಅಪ್ರತ್ಯಕ್ಷವಾಗಿ ಇವುಗಳ ನಾಶಕ್ಕೆ ನಾವೇ ಕಾರಣರಾದಂತಾಗುವುದಿಲ್ಲವೆ? ಯೋಚಿಸಬೇಕು.

ನಮ್ಮ ದೇಶಿ ಪದ್ದತಿಯಲ್ಲಿಯೇ ಅಧಿಕ ಹಾಲನ್ನು ಕೊಟ್ಟು ಆರೋಗ್ಯಕ್ಕೆ ಹೆಚ್ಚು ಪುಷ್ಠಿ ನೀಡುವ ಪಶು ಆಹಾರಗಳನ್ನು ನಾವೇ ತಯಾರಿಸಿಕೊಳ್ಳಬಹುದು. ರಾಗಿ, ಜೋಳ, ಹುರುಳಿ, ಅಕ್ಕಿತೌಡು, ಗೋಧಿಬೂಸಾ, ಹತ್ತಿ ಹಿಂಡಿ, ಸೇಂಗಾ ಹಿಂಡಿ, ಹೀಗೆ ಅನೇಕ ತೆರನಾಗಿ ನಮ್ಮ ಸಸ್ಯಮೂಲದಿಂದಲೇ ತಯಾರಿಸಲ್ಪಟ್ಟ ದೇಶಿ ಸಂಸ್ಕೃತಿಯ ಆಹಾರಗಳನ್ನು ನಾವು ದನಗಳಿಗೆ (ಪಶುಗಳಿಗೆ) ಕೊಟ್ಟರೆ ದೈಹಿಕವಾಗಿ ದಷ್ಟ- ಪುಷ್ಟವಾಗುವುದರ ಜತೆಗೆ ಸಮೃದ್ಧಿಯಾಗಿ ಹಾಲನ್ನು ಕರಿಯುತ್ತವೆ. ಇದೆಲ್ಲ ಎಲ್ಲಿಯ ಗೊಡವೆ, ಎಂದು ಅಂಗಡಿಗಳಲ್ಲಿ ಸಿಗುವ ವಿದೇಶಿ ಮೂಲ ಸಂಸ್ಕಾರಣೆಯ ಆಹಾರವನ್ನು ತಂದು ತಿನ್ನಿಸಿದರೆ, ನಾವೇ ದನಗಳಿಗೆ ಕೈಯಾರೆ ವಿಷ‌ಉಣಿಸಿದಂತಾಗುತ್ತದೆ. ದೇಶಿ ಪದ್ದತಿಯ ಪಶು ಆಹಾರಗಳಲ್ಲಿರುವ ಜೀವಸತ್ವಗಳ ಬಗೆಗೆ ನಮ್ಮ ಕೃಷಿಕರು, ಧನಿಕರು ಸಾಕುವವರು ಚಿಂತಿಸಬೇಗಿದೆಯಲ್ಲವೆ?
*****

Tagged:

Leave a Reply

Your email address will not be published. Required fields are marked *

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...