ಬಾಗಿಲ ತೆಗೆಯಮ್ಮ

ಕಳೆಯನು ಕಳೆಯದೆ ನಾನಿನ್ನ ಕಾಣೆನು
ಸರಸಮ್ಮ ನೀನೆಷ್ಟು ಕಳವಂತಿಯೆ
ಹೊಲದಲ್ಲಿ ತುಂಬಿರುವ ದನಗಳನಟ್ಟದೆ
ಬೆಳೆಯನ್ನು ಕಾಣೆನು ರಸವಂತಿಯೆ || ೧ ||

ಈ ಮಣ್ಣು ಈ ನೀರು ಗಾಳಿ ಬೆಂಕಿಗಳಿಂದ
ಹೊಲದಲ್ಲಿ ಬೆಳೆಯನು ಬೆಳೆಯಬಹುದು
ಬರಿಸೊಪ್ಪೆ ಬೆಳೆದರೆ ಹೊಟ್ಟಿಗೆ ಬರಿಮಣ್ಣು
ಕಳೆಯ ಕಾಳಿಲ್ಲದೆ ಗೆಯ್ಮೆ ಬರಿದು || ೨ ||

ಅಡವಿಯ ಪೈಣದಿ ಕಣ್ಣು ಕಾಣಿಸದಂತೆ
ಎಡರು ತೊಡರುಗಳಲ್ಲಿ ನಾನಿರುವೆನು
ತೊಡರನು ಬಿಡಿಸಲೇ ಬಡಿದಾಟ ಸಾಗಿದೆ
ಹೊಡಮುರಿದೇಳ್ವುದು ಬಯಕೆ ಬಳ್ಳಿ || ೩ ||

ಆಗೊಮ್ಮೆ ಈಗೊಮ್ಮೆ ಮರಗಳ ಸಂದೀಲೆ
ಹಣಿಕೆ ಹಾಕುವುದಿನ್ನು ಬಯಕೆ ಬಾನು
ಛಳಕು ಹೊಡೆದಂತಾಗಿ ಬೆಳಕನ್ನು ಕಾಣುವೆ
ಕೈಯಲ್ಲಿ ಸಿಗಲದು ಕೋಲು ಏನು || ೪ ||

ಭೂಮಿಗೆ ಬಾರದೆ ಮಿಂಚನು ಮೆರೆಯುತ್ತ
ಮೋಡದ ಮರೆಯಿಂದ ನೀನಿಳಿಯಲಾರೆ
ನಿನಗಾಗಿ ಕಾಯುತ್ತ ಹಳ್ಳ ಕೆರೆಗಳಂತೆ
ಬರಿದಾದ ಎದೆಯಿಂದ ನಾನೇರಲಾರೆ || ೫ ||

ನೂರಾರು ಸಂತೆಯ ಮಾಡಿದರು ಬರಿಗೈಯಿ
ಕೊಡುವುತ್ತ ನಿಂತೇನು ಹತಭಾಗ್ಯನು
ತಿರುಗಿ ದಣಿದದ್ದೊಂದೆ ಕೂಗಿ ಮಾರಿದ್ದೊಂದೆ
ಕೈಯಲ್ಲಿ ಉಳಿದಿಲ್ಲ ಚಿಕ್ಕಾಸೇನೂ || ೬ ||

ಎಷ್ಟೊತ್ತು ಕಾಯ್ಬೇಕು ತೆಗೆಯಮ್ಮ ಬಾಗಿಲ
ಭಿಕ್ಷುಕ ನಿಂತೀನಿ ಮನಿಯ ಮುಂದೆ
ಏನಾದರೊಂದಿಷ್ಟು ಉಳಿದಿದ್ದು ಕೊಟ್ಟರೆ
ಹರಸುತ್ತ ಹೋಗುವೆ ಇನ್ನು ಮುಂದೆ || ೭ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋಟೇಲಿನ ಹಾಸಿಗೆಯಲ್ಲಿ ಸಿಕ್ಕಿದ ತಿಗಣಿಗೆ
Next post ಮೂರು ಧರ್ಮಗಳ ಸಮನ್ವಯ ಕೇಂದ್ರ ‘ಹರಿಶ್ಚಂದ್ರ ಕಾವ್ಯ’

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…