ಬಾಗಿಲ ತೆಗೆಯಮ್ಮ

ಕಳೆಯನು ಕಳೆಯದೆ ನಾನಿನ್ನ ಕಾಣೆನು
ಸರಸಮ್ಮ ನೀನೆಷ್ಟು ಕಳವಂತಿಯೆ
ಹೊಲದಲ್ಲಿ ತುಂಬಿರುವ ದನಗಳನಟ್ಟದೆ
ಬೆಳೆಯನ್ನು ಕಾಣೆನು ರಸವಂತಿಯೆ || ೧ ||

ಈ ಮಣ್ಣು ಈ ನೀರು ಗಾಳಿ ಬೆಂಕಿಗಳಿಂದ
ಹೊಲದಲ್ಲಿ ಬೆಳೆಯನು ಬೆಳೆಯಬಹುದು
ಬರಿಸೊಪ್ಪೆ ಬೆಳೆದರೆ ಹೊಟ್ಟಿಗೆ ಬರಿಮಣ್ಣು
ಕಳೆಯ ಕಾಳಿಲ್ಲದೆ ಗೆಯ್ಮೆ ಬರಿದು || ೨ ||

ಅಡವಿಯ ಪೈಣದಿ ಕಣ್ಣು ಕಾಣಿಸದಂತೆ
ಎಡರು ತೊಡರುಗಳಲ್ಲಿ ನಾನಿರುವೆನು
ತೊಡರನು ಬಿಡಿಸಲೇ ಬಡಿದಾಟ ಸಾಗಿದೆ
ಹೊಡಮುರಿದೇಳ್ವುದು ಬಯಕೆ ಬಳ್ಳಿ || ೩ ||

ಆಗೊಮ್ಮೆ ಈಗೊಮ್ಮೆ ಮರಗಳ ಸಂದೀಲೆ
ಹಣಿಕೆ ಹಾಕುವುದಿನ್ನು ಬಯಕೆ ಬಾನು
ಛಳಕು ಹೊಡೆದಂತಾಗಿ ಬೆಳಕನ್ನು ಕಾಣುವೆ
ಕೈಯಲ್ಲಿ ಸಿಗಲದು ಕೋಲು ಏನು || ೪ ||

ಭೂಮಿಗೆ ಬಾರದೆ ಮಿಂಚನು ಮೆರೆಯುತ್ತ
ಮೋಡದ ಮರೆಯಿಂದ ನೀನಿಳಿಯಲಾರೆ
ನಿನಗಾಗಿ ಕಾಯುತ್ತ ಹಳ್ಳ ಕೆರೆಗಳಂತೆ
ಬರಿದಾದ ಎದೆಯಿಂದ ನಾನೇರಲಾರೆ || ೫ ||

ನೂರಾರು ಸಂತೆಯ ಮಾಡಿದರು ಬರಿಗೈಯಿ
ಕೊಡುವುತ್ತ ನಿಂತೇನು ಹತಭಾಗ್ಯನು
ತಿರುಗಿ ದಣಿದದ್ದೊಂದೆ ಕೂಗಿ ಮಾರಿದ್ದೊಂದೆ
ಕೈಯಲ್ಲಿ ಉಳಿದಿಲ್ಲ ಚಿಕ್ಕಾಸೇನೂ || ೬ ||

ಎಷ್ಟೊತ್ತು ಕಾಯ್ಬೇಕು ತೆಗೆಯಮ್ಮ ಬಾಗಿಲ
ಭಿಕ್ಷುಕ ನಿಂತೀನಿ ಮನಿಯ ಮುಂದೆ
ಏನಾದರೊಂದಿಷ್ಟು ಉಳಿದಿದ್ದು ಕೊಟ್ಟರೆ
ಹರಸುತ್ತ ಹೋಗುವೆ ಇನ್ನು ಮುಂದೆ || ೭ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋಟೇಲಿನ ಹಾಸಿಗೆಯಲ್ಲಿ ಸಿಕ್ಕಿದ ತಿಗಣಿಗೆ
Next post ಮೂರು ಧರ್ಮಗಳ ಸಮನ್ವಯ ಕೇಂದ್ರ ‘ಹರಿಶ್ಚಂದ್ರ ಕಾವ್ಯ’

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…